ಹಾಸನ: ಹಾಸನ ಜಿಲ್ಲೆ, ಹೊಳೆನರಸೀಪುರ ತಾಲ್ಲೂಕಿನ ಶ್ರವಣೂರು ಗ್ರಾಮದಲ್ಲಿ ಅನಧಿಕೃತವಾಗಿ ಸಂಗೊಳ್ಳಿ ರಾಯಣ್ಣ ವೃತ್ತ ನಿರ್ಮಾಣ ವಿಚಾರವಾಗಿ ಖಾಕಿ ಸರ್ಪಗಾವಲಿನಲ್ಲಿ ಗ್ರಾಮದ ವೃತ್ತದಲ್ಲಿ ಹಾಕಲಾಗಿದ್ದ ರಾಯಣ್ಣ ಭಾವಚಿತ್ರ ತೆರವು ಮಾಡಲಾಗಿದೆ. ತೆರವು ಮಾಡುವ ಮೊದಲು ಕೆ.ಆರ್.ನಗರದ ಕಾಗಿನೆಲೆ ಮಠದ ಡಾ.ಶಿವಪುರಿ ಶಿವಾನಂದ ಸ್ವಾಮೀಜಿಯಿಂದ ಪೂಜೆ ಸಲ್ಲಿಸಿದರು.
21 ವರ್ಷಗಳ ನಂತರ ಮಿಸೆಸ್ ವರ್ಲ್ಡ್ ಕಿರೀಟ ಭಾರತಕ್ಕೆ ಮರಳಿ ತಂದ ಸರ್ಗಮ್ ಕೌಶಲ್
ಭಾವಚಿತ್ರ ತೆರವುಗೊಳಿಸುವ ವೇಳೆ ಪೊಲೀಸರಿಂದ ಗೌರವ ಸೂಚಿಸಿ, ಹಾಸನ ಉಪವಿಭಾಗದ ಎಸಿ ಬಿ.ಎ.ಜಗದೀಶ್, ಎಸ್ಪಿ ಹರಿರಾಂ ಶಂಕರ್ ತಹಸೀಲ್ದಾರ್ ಕೃಷ್ಣಮೂರ್ತಿ ನೇತೃತ್ವದಲ್ಲಿ ತೆರವು ಕಾರ್ಯಾಚರಣೆ ಮಾಡಲಾಯಿತು. ಯಾವುದೇ ಅಹಿತಕರ ಘಟನೆ ನಡೆಯದಂತೆ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಅನಧಿಕೃತವಾಗಿ ನಿರ್ಮಾಣ ಮಾಡಿದ್ದ ಸಂಗೊಳ್ಳಿ ರಾಯಣ್ಣ ವೃತ್ತ ತೆರವು ಮಾಡಿದ್ದರಿಂದ ಗ್ರಾಮಸ್ಥರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ಬ್ರಿಟಿಷರ ವಿರುದ್ಧ ಹೋರಾಡಿದ ಸಂಗೊಳ್ಳಿ ರಾಯಣ್ಣನಿಗೆ ಅವಮಾನ ಮಾಡಿದ್ದೀರಾ ಎಂದು ಆಕ್ರೋಶ ವ್ಯಕ್ತ ಪಡಿಸುತ್ತಿದ್ದು,ಯಾವುದೇ ಅಹಿತಕರ ಘಟನೆ ನಡೆಯದಂತೆ ಬಿಗಿ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿದೆ.
ಕಾಮಾಕ್ಯ ದೇವಿಯ ಋತುಚಕ್ರದ ದಿನದಲ್ಲಿ ಬ್ರಹ್ಮಪುತ್ರ ನದಿಯ ಬಣ್ಣ ಬದಲಾಗಲು ಕಾರಣವೇನು..?