Sunday, September 8, 2024

Latest Posts

‘ಇವರು ರಾಮನ ಬರ್ತ್ ಸರ್ಟಿಫಿಕೇಟ್ ಕೇಳಿದ್ದರು. ನಾವು ಅಲ್ಲಾ, ಯೇಸುವಿನ ಬರ್ತ್ ಸರ್ಟಿಫಿಕೇಟ್ ಕೇಳಿದ್ವಾ?’

- Advertisement -

Political News: ಸಿಎಂ ಸಿದ್ದರಾಮಯ್ಯ ಹುಬ್ಬಳ್ಳಿಯಲ್ಲಿ ಬಿಜೆಪಿಗರು ಪ್ರತಿಭಟನೆ ನಡೆಸುವ ವಿರುದ್ಧ ಟ್ವೀೀಟ್ ಮಾಡಿದ್ದು, ಈ ಬಗ್ಗೆ ಆರ್.ಅಶೋಕ್ ಪ್ರತಿಕ್ರಿಯಿಸಿದ್ದಾರೆ.

ಸಿದ್ದರಾಮಯ್ಯರಿಂದ ನಾವು ಪಾಠ ಕಲಿಯಬೇಕಾಗಿಲ್ಲ. ನಿಮ್ಮ ಎಂಎಲ್‌ಎ ಶ್ರೀನಿವಾಸ ಮನೆ ಮೇಲೆ ಬೆಂಕಿ ಬಿದ್ದಿತ್ತು. ಅವರನ್ನು ಮಾತನಾಡಿಸುವ ಸೌಜನ್ಯ ತೋರಿಸಿಲ್ಲ. ದಾಳಿ ಮಾಡಿದವರ ಪರ ನಿಂತಿದ್ದೀರಿ. ನಮ್ಮ ಪ್ರತಿಭಟನೆ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ ಎಂದಿದ್ದಾರೆ.

ಶ್ರೀಕಾಂತ ಪೂಜಾರಿ ಸಮಾಜಘಾತುಕ ಅಂತಾ ಸಿದ್ದರಾಮಯ್ಯ ಟ್ವಿಟ್ ವಿಚಾರಕ್ಕೆ ಸಂಬಂಧಿಸಿದಂತೆ ಅಶೋಕ್ ಪ್ರತಿಕ್ರಿಯಿಸಿದ್ದು, ಸಿದ್ದರಾಮಯ್ಯನವರನ್ನು ಒಪ್ಪಿದೆ. ಸಮಾಜಘಾತುಕ ಪದ ಬಳಸಿದ್ದಾರೆ. ಹೆರಾಲ್ಡ್ ಹಗಣದಲ್ಲಿ ಐದು ಸಾವಿರ ಕೋಟಿ ನುಂಗಿದ್ರಲ್ವಾ? ಜಾಮೀನಿನ ಮೇಲೆ ಇದಿರಲ್ವಾ? ನಿಮಗೆ ರಾಮ ಕ್ಷಮಿಸೊಲ್ವಾ? ದೇಶದ ಹಣ ಲೂಟಿ ಹೊಡೆದವರನ್ನು ರಾಮ ಕ್ಷಮಿಸೋಲ್ವಾ..? ಶ್ರೀಕಾಂತ ಪೂಜಾರಿ ಬಡ ಆಟೋ ಡ್ರೈವರ್. ಈತನನ್ನು ರಾಮ ಕ್ಷಮಿಸೋಲ್ವಾ..? ಸಿದ್ದರಾಮಯ್ಯ ರಾವಣ ಸಂಸ್ಕೃತಿ ಯವರು ಎಂದು ಅಶೋಕ್ ಸಿಎಂ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಯತೀಂದ್ರ ಭಾರತ ಹಿಂದು ದೇಶವಲ್ಲ ಅಂತ ವಿಚಾರಕ್ಕೆ ತಿರುಗೇಟು ಕೊಟ್ಟಿರುವ ಅಶೋಕ್, ಹಾಗಾದ್ರೆ ಭಾರತ ಯಾವ ದೇಶ ಆಗಬೇಕು..? ದೇಶವನ್ನು ಒಡೆಯುವವರು ಕಾಂಗ್ರೆಸ್‌ಗರು. ಇವರಿಂದ ದೇಶ ಉಳಿಸೋಕೆ ಸಾಧ್ಯವಾ? ರಾಮಾಯಣವೇ ನಡೆದಿಲ್ಲ ಅಂದಿಂದ್ರು. ರಾಮನ ಬರ್ತ್ ಸರ್ಟಿಫಿಕೇಟ್ ಕೇಳಿದ್ದರು. ನಾವು ಅಲ್ಲಾ, ಯೇಸುವಿನ ಬರ್ತ್ ಸರ್ಟಿಫಿಕೇಟ್ ಕೇಳಿದ್ವ? ನಾವು ಎಲ್ಲರನ್ನೂ ಗೌರವಿಸುತ್ತೇವೆ. ಇದು ಹಿಂದೂ ರಾಷ್ಟ್ರ. ಹಿಂದೂ ರಾಷ್ಟ್ರವಾಗಿಯೇ ಉಳಿಯುತ್ತದೆ. ಅದನ್ನು ಯಾರಿಂದಲೂ ತಡೆಯಲೂ ಸಾಧ್ಯವಿಲ್ಲ ಎಂದು ಆರ್.ಅಶೋಕ್ ಹೇಳಿದ್ದಾರೆ.

ಡ್ರಗ್ಸ್ ಪಾರ್ಸೆಲ್ ಬಂದಿದೆ ಎಂದು ಹೇಳಿ ನಟಿಗೆ 5 ಲಕ್ಷ ವಂಚನೆ..

‘ಚುನಾವಣೆ ಲಾಭಕ್ಕಾಗಿ ಕಾಂಗ್ರೆಸ್ ಜಾರಿಗೆ ತಂದಿರುವ ಅಗ್ಗದ ಗ್ಯಾರಂಟಿಗಳು ಮಕ್ಕಳ ಭವಿಷ್ಯಕ್ಕೂ ಎರವಾಗಿವೆ’

ಹರಿಪ್ರಸಾದ್ ಅವರಿಗೆ ಸಿಕ್ಕ ಮಾಹಿತಿ, ಸರ್ಕಾರಕ್ಕಿಲ್ಲವೇ..? : ಮಾಜಿ ಶಾಸಕ ಪ್ರೀತಂ ಗೌಡ

- Advertisement -

Latest Posts

Don't Miss