Saturday, July 27, 2024

Latest Posts

ನಾಯಕತ್ವ ಪೂರ್ವಯೋಜಿತ ಅಲ್ಲ: ರಾಹುಲ್ ದ್ರಾವಿಡ್ 

- Advertisement -

ಬೆಂಗಳೂರು: ಕಳೆದ 8 ತಿಂಗಳಲ್ಲಿ  6 ನಾಯಕರು ತಂಡವನ್ನು ಮುನ್ನಡೆಸಿರುವುದು ಅದು ಪೂರ್ವ ಯೋಜಿತವಲ್ಲ ಬದಲಿಗೆ ಹಲವಾರು  ನಾಯಕರುಗಳನ್ನು ಸೃಷ್ಟಿ ಮಾಡಲಿದೆ ಎಂದು  ಭಾರತ ಕ್ರಿಕೆಟ್ ತಂಡದ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಹೇಳಿದ್ದಾರೆ.

ಕಳದೆ ಟಿ20 ವಿಶ್ವಕಪ್ ನಂತರ ತಂಡದ ತರಬೇತುದಾರನಾಗಿ ರಾಹುಲ್ ದ್ರಾವಿಡ್ ಅಡಿಯಲ್ಲಿ ಭಾರತ ತಂಡ ವಿರಾಟ್ ಕೊಹ್ಲಿಘಿ, ರೋಹಿತ್ ಶರ್ಮಾ, ಶಿಖರ್ ಧವನ್, ಕೆ.ಎಲ್.ರಾಹುಲ್, ರಿಷಬ್ ಪಂತ್ ಹಾರ್ದಿಕ್ ಪಾಂಡ್ಯ (ಐರ್ಲೆಂಡ್ ಸರಣಿಗೆ ನಾಯಕ)ಇವರೆಲ್ಲಾ ವಿವಿಧ ಕಾರಣಗಳಿಂದಾಗಿ ನಾಯಕತ್ವ ನಿಭಾಯಿಸಿದರು.

ಇದು ತುಂಬ ಸವಾಲಿನ ವಿಷಯ.ಸಂದರ್ಭಗಳನ್ನು ಸ್ವೀಕರಿಸಿದ್ದೇನೆ. ಗುಂಪಿನಲ್ಲಿ ನಾಯಕರನ್ನು ಸೃಷ್ಟಿಸಲು ಅವಕಾಶ ಸಿಕ್ಕಿತ್ತು. ಸಾಕಷ್ಟು ಯುವ ಆಟಗಾರರಿಗೆ ಆಡಲು ಅವಕಾಶ ಸಿಕ್ಕಿದ್ದು ಇದು ಒಳ್ಳೆಯ ಲಕ್ಷಣ ಎಂದು ರಾಹುಲ್ ದ್ರಾವಿಡ್ ತಿಳಿಸಿದ್ದಾರೆ.

 

 

 

- Advertisement -

Latest Posts

Don't Miss