Wednesday, June 18, 2025

Latest Posts

ಎಕ್ಸಪ್ರೆಸ್ ಹೈವೆ ಯಲ್ಲಿ ಹೆಚ್ಚಿದ ಅಪಘಾತ : ವೇಗ ಮಿತಿ ಇಳಿಕೆ..!

- Advertisement -

ರಾಜ್ಯ ಸುದ್ದಿಗಳು:

ಬೆಂಗಳೂರು ಮೈಸೂರು ಎಕ್ಸಪ್ರೆಸ್ ಹೈವೆಯಲ್ಲಿ ಪ್ರಯಾಣಿಕರು ಅತೀ ಹೆಚ್ಚಿನ ವೇಗದಲ್ಲಿ ಸಂಚರಿಸುತ್ತಿರುವ ಪರಿಣಾಮ ದಿನದಿಂದ ದಿನಕ್ಕೆ ಅಪಘಾತಗಳ ಸಂಖ್ಯೆ ಹೆಚ್ಚಾಗುತ್ತಿದೆ. ಗಂಟೆಗೆ 120 ಕಿಮೀಗಿಂತ ಜಾಸ್ತಿ ವೇಗದಲ್ಲಿ ವಾಹನಗಳು ಸಂಚರಿಸುತ್ತಿವೆ . ಅಪಘಾತವನ್ನು ನಿಯಂತ್ರಿಸಲು ವೇಗ ಮಿತಿಯನ್ನು ಕಡಿಮೆ ಮಾಡಿದೆ ವೇಗಮಿತಿಯನ್ನು 100 ಕಿಮೀ ಗೆ ಇಳಿಸಿದೆ . 100 ಕಿಮೀಗಿಂತ ಹೆಚ್ಚಿನ ವೇಗದಲ್ಲಿ ಚಲಿಸುವ ವಾಹನಗಳ ವಿರುದ್ದ ಕೇಸ್ ದಾಖಲಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

ಹೈವೆಗಳಲ್ಲಿ  ಸ್ಪೀಡ್ ರಾಡಾರ್ ಗನ್ ಮತ್ತು ವಾಹನ ನಂಬರ್ ಪ್ಲೇಟ್ಗಳನ್ನು ಗುರುತಿಸುವ   ಕ್ಯಾಮೆರಾಗಳನ್ನು ಅಳವಡಿಕೆ ಮಾಡಲಾಗಿದೆ. ಗಂಟೆಗೆ 100 ಕಿಲೋ ಮೀಟರ್​ಗಿಂದ ಹೆಚ್ಚು ವೇಗವಾಗಿ ಸಂಚರಿಸುವ ವಾಹನಗಳ ವಿರುದ್ಧ ಕೇಸ್ ಹಾಕುವುದಾಗಿ ಎಚ್ಚರಿಕೆ ನೀಡಲಾಗಿದೆ.

ಬೆಂಗಳೂರು-ಮೈಸೂರು ಎಕ್ಸ್​ಪ್ರೆಸ್ ಹೆದ್ದಾರಿ ಟೋಲ್ ದರ ಹೆಚ್ಚಳ ಮಾಡಿರುವ ಪರಿಣಾಮ ಈ ಭಾಗದಲ್ಲಿ ಸಂಚರಿಸುವ ಸರ್ಕಾರಿ ಬಸ್​ಗಳ ಟಿಕೆಟ್ ದರ ಏರಿಕೆಯಾಗಿದೆ. ಜುಲೈ 1 ರಿಂದ ಮಂಡ್ಯ ಶ್ರೀರಂಗಪಟ್ಟಣ ತಾಲೂಕಿನ ಗಣಂಗೂರು ಬಳಿಯಲ್ಲಿ ಹೊಸ ಟೋಲ್​​ಗೇಟ್ ಆರಂಭಿಸಲಾಗಿದೆ. ಇಲ್ಲಿ ಪ್ರತಿ ಬಸ್​ಗೆ 525 ರೂಪಾಯಿ ಸಂಗ್ರಹ ಮಾಡಲಾಗುತ್ತಿದೆ. ಟೋಲ್ ಸಂಗ್ರಹ ಸರಿದೂಗಿಸುವ ನಿಟ್ಟಿನಲ್ಲಿ ಟಿಕೆಟ್ ದರ ಏರಿಕೆ ಮಾಡಲಾಗಿದೆ ಎಂದು ಕೆಎಸ್​ಆರ್​ಟಿಸಿ ಹೇಳಿದೆ.ಜುಲೈ 4ರಿಂದ ಕೆಎಸ್​ಆರ್​ಟಿಸಿ ಟಿಕೆಟ್ ದರ ಹೆಚ್ಚಳ ಮಾಡಿ ಆದೇಶ ಹೊರಡಿಸಿದೆ.

ಹುಟ್ಟು ಹಬ್ಬದ ಶುಭಾಶಯಗಳು ರಾಜ್ ಬಿ ಶೆಟ್ಟಿ

ಗ್ರೀನ್ ಪಲಾವ್ (ಪಾಲಕ್ ರೈಸ್) ರೆಸಿಪಿ..

ಬಸವಸಾಗರ ಜಲಾಶಯಕ್ಕೆ ಮಾಜಿ ಸಚಿವ ರಾಜೂಗೌಡ ಭೇಟಿ

- Advertisement -

Latest Posts

Don't Miss