Sunday, September 22, 2024

Latest Posts

ಜೈಲಲ್ಲಿ ದರ್ಶನ್ ಗೆ ಆತಿಥ್ಯ! ಕಾಫಿ, ಸಿಗರೇಟ್ ಹಿಡಿದು ಬಿಂ’ದಾಸ’

- Advertisement -

Movie News: ದರ್ಶನ್ ಇದೀಗ ಮತ್ತೊಂದು ಸುದ್ದಿಗೆ ಗ್ರಾಸವಾಗಿದ್ದಾರೆ. ಹೌದು ರೇಣುಕಾಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ದರ್ಶನ್ ಮತ್ತು ಹದಿನೇಳು ಆರೋಪಿಗಳು ಜೈಲಿನಲ್ಲಿದ್ದಾರೆ.

ಈಗ ಜೈಲಿನಲ್ಲಿರುವ ದರ್ಶನ್ ಅವರಿಗೆ ರಾಜ್ಯಾಧಿತ್ಯ ಸಿಗುತ್ತಿದೆಯಾ? ಈ ಪ್ರಶ್ನೆ ಓಡಾಡುತ್ತಿತ್ತು. ಅದಕ್ಕೆ ಪೂರಕ ಎಂಬಂತೆ ದರ್ಶನ್ ಜೈಲಲ್ಲಿ ಬಿಂದಾಸ್ ದಿನ ಸವೆಸುತ್ತಿದ್ದಾರೆ. ಜೈಲಿನಲ್ಲಿ ದರ್ಶನ್ ಚೇರ್ ಮೇಲೆ ಕುಳಿತು ಕಾಫಿ ಹೀರುತ್ತಾ ಸಿಗರೇಟ್ ಹಿಡಿದಿರುವ ಫೋಟೋ ಈಗ ವೈರಲ್ ಆಗಿದೆ.

ಜೈಲು ಹಕ್ಕಿಯಾಗಿರುವ ದರ್ಶನ್ ಕೊಲೆ ಆರೋಪಿಯಾಗಿದ್ದರೂ ಬಿಂದಾಸ್ ಲೈಫ್ ಮಾಡುತ್ತಿದ್ದಾರೆ. ಇದಕ್ಕೆ ಜೈಲು ಅಧಿಕಾರಿಗಳ ಸಹಕಾರವೇ ಕಾರಣ. ದುಡ್ಡು ಕೊಟ್ಟರೆ ಜೈಲು ರೆಸಾರ್ಟ್ ವಾತಾವರಣ ಕಲ್ಪಿಸಿಕೊಡುತ್ತೆ ಎಂಬುದಕ್ಕೆ ಈ ಫೋಟೋ ಸದ್ಯ ಸಾಕ್ಷಿಯಾಗಿದೆ.

ಜೈಲು ಅಧಿಕಾರಿಗಳ ಸಪೋರ್ಟ್ ಇದ್ದುದರಿಂದಲೇ ದರ್ಶನ್ ಅವರು ಜಾಲೊಯಾಗಿ ಕಾಫಿ ಕುಡಿಯುತ್ತ, ಕೈಯಲ್ಲಿ ಸಿಗರೇಟ್ ಹಿಡಿದಿರೋ ಫೋಟೋ ಹರಿದಾಡುತ್ತಿದೆ. ಅಷ್ಟೇ ಅಲ್ಲ, ವಿಡಿಯೋ ಕಾಲ್ ಮಾಡಿದ್ದ ವ್ಯಕ್ತಿ ಜೊತೆಗೂ ದರ್ಶನ್ ಮಾತಾಡಿರುವ ವೀಡಿಯೋ ವೈರಲ್ ಆಗಿದೆ.

ಈಗ ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿರುವ ದರ್ಶನ್ ಪ್ರಕರಣ ಗಂಭೀರ ಆಗುತ್ತಿದೆ. ಅತ್ತ ಜೈಲು ಅಧಿಕಾರಿಯ ತಲೆದಂಡ ಕೂಡ ಆಗುತ್ತಾ? ಕಾದು ನೋಡಬೇಕಿದೆ.

ಅದೇನೆ ಇರಲಿ, ಪರಪ್ಪನ ಅಗ್ರಹಾರ ಜೈಲು ಅಕ್ಷರಶಃ ರೆಸಾರ್ಟ್ ಆಗಿದೆ. ರೌಡಿಶೀಟರ್ ಗಳ ಜತೆ ದಾಸ ‘ದರ್ಶನ್ ಕಾಫಿ ವಿತ್ ಸಿಗರೇಟ್’ ಸಿಟಿಂಗ್ ಆಗಿದೆ. ಇತ್ತೀಚೆಗಷ್ಟೇ ವಕೀಲರೊಬ್ಬರು ಹೈಕೋರ್ಟ್ ಗೆ ಜೈಲಿನಲ್ಲಿ ಮೊಬೈಲ್, ಗನ್ , ಬುಲೆಟ್, ಗಾಂಜಾವನ್ನು ಜೈಲಿನ ಅಧಿಕಾರಿಗಳೇ ಪೂರೈಕೆ ಮಾಡುತ್ತಾರೆ ಅಂತ ಮಾಹಿತಿ ನೀಡಿದ್ದರಯ. ಅದಕ್ಕೆ ಪೂರಕವೆಂಬಂತೆ ಫೋಟೋ ಹರಿದಾಡುತ್ತಿದೆ. ಕಾರಾಗೃಹ ಇಲಾಖೆ ಅಧಿಕಾರಿಗಳೇ ಗ್ರೇಟ್, ದುಡ್ಡು ಕೊಟ್ರೆ ಇನ್ನು ಏನೇನು ಸರ್ವೀಸ್ ಮಾಡ್ತಾರೋ ?

- Advertisement -

Latest Posts

Don't Miss