ಹುಬ್ಬಳ್ಳಿ: ಮಕ್ಕಳು ಓದಬೇಕು ಅಂತ ಹಾಸ್ಟೆಲ್ ಗೆ ಬಂದಿರುತ್ತಾರೆ. ಆದರೆ ಮಕ್ಕಳಿಗೆ ತಪ್ಪಿಗೆ ಶಿಕ್ಷೆ ಅಂತ ಟಾಯ್ಲೆಟ್ ಸ್ವಚ್ಛ ಮಾಡುವಂತ ಶಿಕ್ಷೆ ನೀಡಿದರೇ ಹೇಗೆ..? ಮಕ್ಕಳು ಓದುವುದನ್ನು ಬಿಟ್ಟು ಟಾಯ್ಲೆಟ್ ಕ್ಲೀನ್ ಮಾಡುವುದು, ಹಾಸ್ಟೆಲ್ ಸ್ವಚ್ಛ ಮಾಡುವುದು ಮಾಡಿದರೇ ಓದುವುದು ಯಾವಾಗ..? ಅರೇ ಏನಿದು ಸ್ಟೋರಿ ಅಂತೀರಾ ಇಲ್ಲಿದೆ ನೋಡಿ ಇಂಟ್ರಸ್ಟಿಂಗ್ ಕಹಾನಿ..
ಹಾಸ್ಟೆಲ್ ವಿದ್ಯಾರ್ಥಿಗಳ ಗೋಳು ಕೇಳುವವರು ಯಾರು: ಟಾಯ್ಲೆಟ್ ಕ್ಲೀನ್ ಮಾಡಬೇಕಿದೆ ಮಕ್ಕಳು…!
ಹೀಗೆ ಹಾಸ್ಟೆಲ್ ಆವರಣದಲ್ಲಿ ತಮ್ಮ ಅಳಲನ್ನು ತೋಡಿಕೊಳ್ಳುತ್ತಿರುವ ಮಕ್ಕಳು. ನಾವು ಯಾವುದೇ ಶಿಕ್ಷೆ ಕೊಟ್ಟಿಲ್ಲ ಎನ್ನುತ್ತಿರುವ ವಾರ್ಡನ್ ಈ ಎಲ್ಲ ದೃಶ್ಯಗಳಿಗೆ ಸಾಕ್ಷಿಯಾಗಿದ್ದು, ಹುಬ್ಬಳ್ಳಿಯ ವಿದ್ಯಾನಗರದ ಎಂವಿಪಿ ಕಸ್ತೂರಿ ಬಾ ಬಾಲಿಕಾಶ್ರಮದಲ್ಲಿ. ಹೌದು.. ಮಹಿಳಾ ವಿದ್ಯಾಪೀಠದಲ್ಲಿರುವ ಹಾಸ್ಟೆಲ್ ನಲ್ಲಿ ಸ್ವಚ್ಚತೆಗೆ ಪ್ರತ್ಯೇಕವಾದ ಸಿಬ್ಬಂದಿ ಇದ್ದರೂ ಕೂಡ ವಿದ್ಯಾರ್ಥಿಗಳಿಂದಲೇ ಟಾಯ್ಲೆಟ್ ಕ್ಲೀನ್ ಮಾಡಿಸುವ ಶಿಕ್ಷೆ ನೀಡುತ್ತಿರುವ ಬಗ್ಗೆ ವಿದ್ಯಾರ್ಥಿಗಳೇ ಮಾಧ್ಯಮದ ಮುಂದೆ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ. ಮಹಿಳಾ ವಿದ್ಯಾಪೀಠದಲ್ಲಿರುವ ಸಮಾಜ ಕಲ್ಯಾಣ ಇಲಾಖೆಯ ಅನುದಾನಿತ ಹಾಸ್ಟೆಲ್ ನಲ್ಲಿ ಇಂತಹದೊಂದು ಗಂಭೀರ ಆರೋಪ ಕೇಳಿ ಬಂದಿದ್ದು, ಸ್ವತಃ ವಿದ್ಯಾರ್ಥಿಗಳೇ ಸುರಿಯುವ ಮಳೆಯಲ್ಲಿ ತಮ್ಮ ಆಕ್ರೋಶ ಹೊರಹಾಕಿದ್ದಾರೆ.
ಇನ್ನೂ ಸರ್ಕಾರ ಶಿಕ್ಷಣ ಸೇವೆಯನ್ನು ಮತ್ತಷ್ಟು ಜನಪ್ರಿಯಗೊಳಿಸಲು ಒಂದಿಲ್ಲೊಂದು ರೀತಿಯಲ್ಲಿ ಹಲವಾರು ಯೋಜನೆ ಜಾರಿಗೊಳಿಸುತ್ತಲೇ ಇದೆ. ಆದರೆ ಹೀಗೆ ಅನುದಾನಿತ ಹಾಸ್ಟೆಲ್ ನಲ್ಲಿ ವಿದ್ಯಾರ್ಥಿಗಳು ಟಾಯ್ಲೆಟ್ ಕ್ಲೀನ್ ನಂತಹ ಶಿಕ್ಷೆಗೆ ಒಳಪಡುವುದರಿಂದ ಮಾನಸಿಕ ಸ್ಥಿತಿ ಕುಗ್ಗುವ ಮೂಲಕ ಓದಿನ ಕಡೆಗೆ ಗಮನ ಹರಿಸಲು ಕೂಡ ಸಾಧ್ಯವಾಗುವುದಿಲ್ಲ. ಐವತ್ತು ಜನರು ಇರುವ ಹಾಸ್ಟೆಲ್ ನಲ್ಲಿ ಕಳಪೆ ಆಹಾರವನ್ನು ಕೂಡ ವಿತರಣೆ ಮಾಡಲಾಗುತ್ತದೆ ಎಂಬುವಂತ ಆರೋಪವನ್ನು ಸ್ವತಃ ವಿದ್ಯಾರ್ಥಿಗಳೇ ಮಾಧ್ಯಮದ ಮುಂದೇ ಹೇಳಿಕೊಂಡಿದ್ದಾರೆ.
ಒಟ್ಟಿನಲ್ಲಿ ಹಾಸ್ಟೆಲ್ ಜೀವನ ಮಕ್ಕಳ ಬದುಕಿಗೆ ಬಹುದೊಡ್ಡ ನೋವನ್ನುಂಟು ಮಾಡಿದೆ. ಈ ಬಗ್ಗೆ ಶಾಲೆಯ ಆಡಳಿತ ಮಂಡಳಿಯನ್ನು ವಿಚಾರಿಸಿದರೇ ಈ ಬಗ್ಗೆ ನಮ್ಮ ಗಮನಕ್ಕೆ ಬಂದಿಲ್ಲ. ಪರಿಶೀಲನೆ ನಡೆಸಿ ಸೂಕ್ತ ಕ್ರಮಗಳನ್ನು ಜರುಗಿಸುತ್ತೇವೆ ಎಂಬ ಭರವಸೆ ನೀಡಿದ್ದಾರೆ.
ಯಾವ ಜೈಲಿನಲ್ಲಿ ಬ್ರಿಟೀಷರು ಸ್ವಾತಂತ್ರ ಹೋರಾಟಗಾರರನ್ನು ಬಂದಿಸಿ ಇಡುತಿದ್ದರು ?