Sunday, June 1, 2025

Latest Posts

ಟೈಗರ್ಸ್ ಘರ್ಜನೆಗೆ ಬೆದರಿದ ಸ್ಟ್ರೈಕರ್ಸ್

- Advertisement -

ಬೆಂಗಳೂರು: ಶಿವಕುಮಾರ್ ಹಾಗೂ ಲುವಿನಿತ್ ಸಿಸೋಡಿಯಾ ಅವರುಗಳ ಅರ್ಧ ಶತಕಗಳ ನೆರೆವಿನಿಂದ ಹುಬ್ಬಳ್ಳಿ ಟೈಗರ್ಸ್ ಮಹಾರಾಜ ಟಿ20 ಟ್ರೋಫಿಯಲ್ಲಿ ಶಿವಮೊಗ್ಗ ಸ್ಟ್ರೈಕರ್ಸ್ ವಿರುದ್ಧ 8 ವಿಕೆಟ್‍ಗಳ ಭರ್ಜರಿ ಗೆಲುವು ದಾಖಲಿಸಿದೆ.

ಇಲ್ಲಿನ ಚಿನ್ನಸ್ವಾಮಿ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಹುಬ್ಬಳ್ಳಿ ಟೈಗರ್ಸ್  ಫೀಲ್ಡಿಂಗ್ ಆಯ್ದುಕೊಂಡಿತು. ಶಿವಮೊಗ್ಗ ತಂಡದ ಪರ ಆರಂಭಿಕರಾಗಿ ಕಣಕ್ಕಿಳಿದ ಶರತ್ (36) ಹಾಗೂ ಸ್ಟಾಲಿನ್ ಹೂವರ್ (38) ಮೊದಲ ವಿಕೆಟ್‍ಗೆ 78 ರನ್‍ಗಳ ಭರ್ಜರಿ ಆರಂಭ ನೀಡಿದರು.

ನಂತರ ಬಂದ ಕೆ.ಸಿದ್ದಾರ್ಥ್ 23, ಆ್ಯಂಥೋನಿ 7, ಕೊನೆಯಲ್ಲಿ ಚೈತನ್ಯ ಬಿರುಸಿನ ಬ್ಯಾಟಿಂಗ್ ಮಾಡಿ ಅಜೇಯ 32 ರನ್ ಹೊಡೆದು ತಂಡದ ಮೊತ್ತ ಹೆಚ್ಚಿಸಿದರು.

ಸ್ಟ್ರೈಕರ್ಸ್ ತಂಡ ನಿಗದಿತ 20 ಓವರ್‍ಗಳಲ್ಲಿ 5 ವಿಕೆಟ್ ನಷ್ಟಕ್ಕೆ 146 ರನ್ ಗಳಿಸಿತು.  ಹುಬ್ಬಳ್ಳಿ ಪರ ವಾಸೂಕಿ ಕೌಶಿಕ್ 2, ಜ್ನಾನೇಶ್ವರ್ ನವೀನ್, ದೊಡ್ಡಮನಿ ಆನಂದ್, ಶಿವಕುಮಾರ್ ತಲಾ 1 ವಿಕಟ್ ಪಡೆದರು.

ಲುವಿನಿತ್, ಶಿವಕುಮಾರ್ ಭರ್ಜರಿ ಜೊತೆಯಾಟ

147 ರನ್ ಗುರಿ ಬೆನ್ನತ್ತಿದ ಹುಬ್ಬಳ್ಳಿ ತಂಡಕ್ಕೆ ನಾಯಕ ಲುವಿನಿತ್ ಸಿಸೋಡಿಯಾ (62) ಹಾಗು ಶಿವಕುಮಾರ್ ಅಜೇಯ (61) ಮೊದಲ ವಿಕೆಟ್‍ಗೆ 107 ರನ್ ಸೇರಿಸಿ ತಂಡದ ಗೆಲುವನ್ನು ಸುಲಭಗೊಳಿಸಿದರು.

ಅಭಿಮನ್ಯು ಮಿಥುನ್ 1, ಲಿಯಾನ್ ಖಾನ್ ಅಜೇಯ 19 ರನ್ ಗಳಿಸಿದರು. ಹುಬ್ಬಳ್ಳಿ ತಂಡ ಇನ್ನು 16 ಎಸೆತ ಬಾಕಿ ಇರುವಂತೆ ಗೆಲುವಿನ ದಡ ಸೇರಿತು. 17.2 ಓವರ್‍ಗಳಲ್ಲಿ 2 ವಿಕೆಟ್ ನಷ್ಟಕ್ಕೆ 149 ರನ್ ಗಳಿಸಿತು.

- Advertisement -

Latest Posts

Don't Miss