Political News: ಬಳ್ಳಾರಿ: ಬಳ್ಳಾರಿ ಮಹಾನಗರ ಪಾಲಿಕೆ ಮೇಯರ್ ಚುನಾವಣೆಯಲ್ಲಿ ಹೈಡ್ರಾಮ ನಡೆದಿದ್ದು, ಪಾಲಿಕೆ ಕಚೇರಿಗೆ, ಚುನಾವಣೆ ನಡೆಸಲೆಂದು ಆಗಮಿಸಿದ್ದ ರಿಟರ್ನಿಂಗ್ ಆಫೀಸರ್ಗಳು, ಚುನಾವಣೆ ನಡೆಸಲು ನಿರಾಕರಿಸಿದ್ದಾರೆ.
ನಿಯಮದ ಪ್ರಕಾರ, 12 ಗಂಟೆಗೆ ಮೇಯರ್ ಚುನಾವಣೆ ನಡೆಯಬೇಕಿತ್ತು. ಆದರೆ 2 ಗಂಟೆಯಾದರೂ ಚುನಾವಣೆ ನಡೆದಿರಲಿಲ್ಲ. ಸ್ವಪಕ್ಷದರೇ ಜಿದ್ದಿಗೆ ಬಿದ್ದು ಮೇಯರ್ ಚುನಾವಣೆ ನಡೆಸುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಾಗಾಗಿ ಸಿಟ್ಟಿಗೆದ್ದ ಬಿಜೆಪಿ ಪಾಲಿಕೆ ಸದಸ್ಯರು, ನಮ್ಮ ಕರ್ತವ್ಯ ಏನಿದು ಅದು ಮುಗಿಸಿ ಹೋಗುತ್ತೇವೆ. ಅವರೇ ನಮಗೆ ನೋಟಿಸ್ ಕೊಟ್ಟು ಈಗಾ ಅವರೇ ಚುನಾವಣೆ ನಡೆಸಲು ಬರ್ತಿಲ್ಲ. ಇದರಿಂದ ಕಾಂಗ್ರೆಸ್ ಸದಸ್ಯರು ಬಳ್ಳಾರಿ ಜನರಿಗೆ ಏನ್ ಸಂದೇಶ್ ಕೊಡ್ತಾರೆ….? ಬಳ್ಳಾರಿ ಜನರಿಗೆ ಕಾಂಗ್ರೆಸ್ ಪಾಲಿಕೆ ಸದಸ್ಯರು ಅವಮಾನ ಮಾಡ್ತಿದ್ದಾರೆ ಎಂದು ಬಿಜೆಪಿ ಪಾಲಿಕೆ ಸದಸ್ಯರು ಆಕ್ರೋಶಗೊಂಡಿದ್ದಾರೆ.