ಟೀ ಕುಡಿಯೋಕೆ ಕಾಸಿಲ್ಲ! ಅಪ್ಪು ಸರ್ ಕರ್ದಿದ್ರು!: Mahantesh Hiremath Podcast

Sandalwood: ಉತ್ತರಕರ್ನಾಟಕದ ಹಳ್ಳಿಯಲ್ಲಿದ್ದ ಮಹಾಂತೇಷ್ ಈಗ ಸ್ಯಾಂಡಲ್‌ವುಡ್ ಪ್ರಸಿದ್ಧ ಹಾಸ್ಯನಟರಲ್ಲಿ ಓರ್ವ. ಹಾಗಾದ್ರೆ ಈ ಜರ್ನಿ ಹೇಗಿತ್ತು ಅಂತಾ ಅವರ ಬಾಯಲ್ಲೇ ಕೇಳಿ.

ಈ ಬಗ್ಗೆ ಮಹಾಂತೇಷ್ ಹೇಳೋದೇನಂದ್ರೆ, ಕೆಲವು ಬಾರಿ ನಾನು ಇಷ್ೆಲ್ಲಾ ತಾಲೆಂಜ್‌ಗಳನ್ನು ಎದುರಿಸಿ ಬಂದು ಕೂತಿದ್ದೇನಾ ಅಂತಾ ಅನ್ನಿಸುತ್ತೆ. ಹಲವು ಸಮಸ್ಯೆಗಳನ್ನು ಎದುರಿಸಿ ಬಂದಿದ್ದೇನೆ ಅಂದ್ರೆ ಅದು ರಾಯರ ಆಶೀರ್ವಾದ ಅಂತಾರೆ ಮಹಾಂತೇಷ್.

ಇನ್ನು ಮಹಾಂತೇಷ್ ಸಿನಿಮಾ ಫೀಲ್ಡ್‌ಗೆ ಬಂದಾಗ ಮನೆಯಲ್ಲಿ 2-3 ವರ್ಷ ಮಾತನಾಡೇ ಇರ್ಲಿಲ್ವಂತೆ. ಯಾಕಂದ್ರೆ ಮನೆಯಲ್ಲಿ ಮಹಾಂತೇಷ್ ಬಗ್ಗೆ ಹೆಚ್ಚು ನಂಬಿಕೆ ಇರಲಿಲ್ಲ. ಇವನು ನಾಟಕಕ್ಕೆ ಸೇರಿಕ“ಂಡಿದ್ದಾನೆ. ಕೆಲಸ ಮಾಡಲ್ಲ, ಜವಾಬ್ದಾರಿ ಇಲ್ಲ ಅಂತಲೇ ದೂರಿದ್ದರಂತೆ. ಬಳಿಕ ಮಹಾಂತೇಷ್ ತಾವು ಎಂಥ ಉತ್ತಮ ನಟ ಅಂತಾ ಪ್ರೂವ್ ಮಾಡಿದರು. ಆಗ ಮನೆಯಲ್ಲಿ ಮಹಾಂತೇಷ್ ಬಗ್ಗೆ ನಂಬಿಕೆ ಬಂತಂತೆ.

ಬಳಿಕ ಫ್ರೆಂಚ್ ಬಿರಿಯಾನಿ ಸಿನಿಮಾ ರಿಲೀಸ್ ಆದ ಬಳಿಕ, ಮಹಾಂತೇಷ್ ಬ್ಯಾಕ್‌ ಟೂ ಬ್ಯಾಕ್ ಸಿನಿಮಾ ಮಾಡಿ, ಗೆಲುವು ಸಾಧಿಸುತ್ತಿದ್ದಾರೆ. ಮಜಾಭಾರತಕ್ಕೆ ಹೋದಾಗ ಮಹಾಂತೇಷ್ ಹೇಗಿದ್ರು ಅಂತಾ ಅವರೇ ಹೇಳಿದ್ದಾರೆ ಕೇಳಿ.

About The Author