Kolar News: ಕೋಲಾರ: ಕೋಲಾರ ಕಾಂಗ್ರೆಸ್ ಶಾಸಕರು ರಾಜೀನಾಮೆ ನೀಡುವ ವಿಚಾರದ ಬಗ್ಗೆ ಸಂಸದ ಮುನಿಸ್ವಾಮಿ ಪ್ರತಿಕ್ರಿಯೆ ನೀಡಿದ್ದು, ಇದು ಕಾಂಗ್ರೆಸ್ ಪಕ್ಷದ ಆಂತರಿಕ ವಿಷಯವಾಗಿದೆ. ಕಾಂಗ್ರೆಸ್ ಪಕ್ಷದ ವಿರೋಧಿ ಬಣಗಳು ತಮ್ಮ ಪ್ರಾಬಲ್ಯ ಕ್ಕಾಗಿ ರಾಜಿನಾಮೆ ವಿಷಯ ತಂದಿರಬಹುದು. ಶಾಸಕರಾಗಬೇಕಾದ್ರೆ ತುಂಬಾ ಕಷ್ಟಪಟ್ಟು ಆಗಿರ್ತಾರೆ, ಹಾಗಾಗಿ ರಾಜೀನಾಮೆ ನೀಡಲ್ಲ. ಪದೇ ಪದೇ ಚುಣಾವಣೆ ನಡೆಸುವುದು ಸುಲಭದ ಮಾತಲ್ಲ. ಅದು ಅವರಿಗೆ ತಿಳಿದಿದೆ ರಾಜಿನಾಮೆ ನೀಡಿದರೆ ಚುನಾವಣೆ ಗೆ ನಾವು ಸಿದ್ದರಿದ್ದೇವೆ. ಯುದ್ಧಕ್ಕೆ ಹೋದಮೇಲೆ ಹೋರಾಡಬೇಕು, ಇಲ್ಲ ಸಾಯಬೇಕು ಎಂದು ಹೇಳಿದ್ದಾರೆ.
ದೇಶಕ್ಕಾಗಿ, ಧರ್ಮಕ್ಕಾಗಿ ಲಕ್ಷಾಂತರ ಜನ ಬಲಿದಾನ ಕೊಟ್ಟು ಬಿಜೆಪಿ ಪಕ್ಷ ಕಟ್ಟಿದ್ದಾರೆ. ನನಗೆ ಟಿಕೆಟ್ ತಪ್ಪಿ ಬೇರೆಯವರಿಗೆ ಕೊಟ್ಟಿದ್ದರೆ ನನಗೆ ಬೇಜಾರಾಗ್ತಿತ್ತು. ಆದ್ರೆ ಮೈತ್ರಿಯಾಗಿರುವ ಕಾರಣ ನನಗೆ ಟಿಕೆಟ್ ಸಿಕ್ಕಿಲ್ಲ. ಅಮಿತ್ ಷಾ, ಜೆಪಿ ನಡ್ಡಾ ಅವರು ಕೊನೆ ಕ್ಷಣದವರೆಗೂ ಕೋಲಾರ ಉಳಿಸಿಕೊಳ್ಳಲು ಪ್ರಯತ್ನಪಟ್ಟಿದ್ದಾರೆ. ಅಮಿತ್ ಷಾ ಕರೆ ಮಾಡಿ ನನಗೆ ಸೂಕ್ತ ಸ್ಥಾನಮಾನ ನೀಡುವುದಾಗಿ ಭರವಸೆ ನೀಡಿದ್ದಾರೆ. ಮೊದಲನೇ ಪಟ್ಟಿಯಲ್ಲಿ ನನ್ನ ಹೆಸರು ಘೋಷಣೆ ಮಾಡಬೇಕಿತ್ತು. ಆದ್ರೆ ಜೆಡಿಎಸ್ ಜೊತೆ ಮೈತ್ರಿಯಾಗಿರುವ ಕಾರಣ ಕ್ಷೇತ್ರ ತ್ಯಾಗ ಮಾಡಬೇಕಾಗಿದೆ.
ಇನ್ನು ಕಾಂಗ್ರೆಸ್ ಪಕ್ಷದಲ್ಲಿ ಮನೆಯೊಂದು ಮೂರುಬಾಗಿಲಾಗಿದೆ. ಟಿಕೆಟ್ ಗಾಗಿ ಎಡ, ಬಲ ಅಂತ ಎರಡು ಬಣಗಳ ನಡುವೆ ಗಲಾಟೆಯಾಗುತ್ತಿದೆ. ನರೇಂದ್ರ ಮೋದಿಯನ್ನು ಮತ್ತೊಮ್ಮೆ ಪ್ರಧಾನಿ ಮಾಡಲು ನಾವು ಕೆಲಸ ಮಾಡುತ್ತೇವೆ. ಬಿಜೆಪಿ ಪಕ್ಷದಲ್ಲಿ ಬಿಬಿಎಂಪಿ ಕಾರ್ಪೋರೆಟರ್ ಆಗಿದ್ದ ನನ್ನನ್ನು ಎಂಪಿ ಮಾಡಿ ಇಲ್ಲಿಗೆ ಕಳಿಸಿದ್ದಾರೆ. ಕೋಲಾರಕ್ಕೆ ನಾನು ಬಾಡಿಗೆಗೆ ಬಂದಿಲ್ಲ, ಇದು ನನ್ನ ಕರ್ಮಭೂಮಿ. ನಿನ್ನೆ ಕುಮಾರಸ್ವಾಮಿ ಅವರನ್ನು ನಾವು ಭೇಟಿ ಮಾಡಿ ಆರೋಗ್ಯ ವಿಚಾರಿಸಿದ್ದೇವೆ. ಕೋಲಾರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯನ್ನು ಹೇಗೆ ಸೋಲಿಸಬೇಕು ಎಂಬ ಬಗ್ಗೆ ಚರ್ಚಿಸಿದ್ದೇವೆ. ಮೈತ್ರಿ ಅಭ್ಯರ್ಥಿಯನ್ನು ಗೆಲ್ಲಿಸಲು ನಾವೆಲ್ಲ ಒಟ್ಟಾಗಿ ಮತಯಾಚನೆ ಮಾಡುತ್ತೇವೆ ಎಂದು ಮುನಿಸ್ವಾಮಿ ಹೇಳಿದ್ದಾರೆ.
ಬಿಜೆಪಿ ಪಕ್ಷದ ಶಿಸ್ತಿನ ಸಿಪಾಯಿಗಳಂತೆ ಕಾರ್ಯಕರ್ತರು ಇದ್ದಾರೆ. ಕೊನೆ ಕ್ಷಣದವರೆಗೂ ಕೋಲಾರ ಬಿಟ್ಟುಕೊಡುವುದಿಲ್ಲ ಅಂತ ಫೈಟ್ ಮಾಡಿದ್ದರು. ಆದ್ರೆ ಮೈತ್ರಿ ಮುರಿದುಬೀಳುವ ಹಂತಕ್ಕೆ ಬಂದಾಗ ನಮ್ಮ ವರಿಷ್ಠರು ಕ್ಷೇತ್ರ ತ್ಯಾಗ ಮಾಡಿದ್ದಾರೆ. ಎಲ್ಲಾ ಸರ್ವೇಯಲ್ಲೂ ಕಳೆದ ಬಾರಿಗಿಂತ ಹೆಚ್ಚಿನ ಮತಗಳಿಂದ ನಾನು ಗೆಲ್ಲುತ್ತೇನೆ ಅಂತ ಬಂದಿದೆ. ಮುಂದಿನ ದಿನಗಳಲ್ಲಿ ನನಗೆ ಪಕ್ಷದಲ್ಲಿ ಸೂಕ್ತ ಸ್ಥಾನಮಾನ ಕೊಡುವುದಾಗಿ ಹೈಕಮಾಂಡ್ ಹೇಳಿದೆ ಎಂದು ಮುನಿಸ್ವಾಮಿ ಹೇಳಿದ್ದಾರೆ.
ಕಾರ್ಪೋರೆಟ್ ಆಗಿದ್ದ ನನಗೆ ಪಕ್ಷ ಎಂಪಿ ಮಾಡಿದೆ. ಜೆಡಿಎಸ್ ಪಕ್ಷದಲ್ಲಿ ಮೂವರು ಆಕಾಂಕ್ಷಿಗಳಿದ್ದಾರೆ. ಬಿಜೆಪಿಗೆ ಬರುವುದಕ್ಕಿಂತ ಹಿಂದೆಯಿಂದಲೂ ನಾನು ಹಿಂದು, ದೇಶ ಭಕ್ತ. ನಾನು ಯಾವುದೇ ಕಾರಣಕ್ಕೂ ಪಕ್ಷೇತರವಾಗಿ ಸ್ಪರ್ಧೆ ಮಾಡುವುದಿಲ್ಲ. ನಾನು ಜೆಡಿಎಸ್ ಪಕ್ಷದಿಂದ ಟಿಕೆಟ್ ಸಹ ಕೇಳಿಲ್ಲ. ಹೈಕಮಾಂಡ್ ನನಗೆ ಟಿಕೆಟ್ ತಪ್ಪಿಸಿಲ್ಲ, ಮೈತ್ರಿ ಕೂಟದ ಅಭ್ಯರ್ಥಿಗೆ ನೀಡಿದ್ದಾರೆ. ಪಕ್ಷದ ಶಿಸ್ತಿನ ಸಿಪಾಯಿ ನಾನು, ಪಕ್ಷದ ತೀರ್ಮಾನಕ್ಕೆ ಬದ್ಧವಾಗಿದ್ದೇನೆ. ಬದುಕಿರುವವರೆಗೂ ನಾನು ಪಕ್ಷದ ಪರವಾಗಿ, ದೇಶದ ಪರವಾಗಿ ಇರುತ್ತೇನೆ. ಪ್ರಧಾನಿ ಮೋದಿಯವರು ಕೊಟ್ಟಷ್ಟು ಭಾಗ್ಯಗಳು ಯಾರೂ ಕೊಟ್ಟಿಲ್ಲ ಎಂದು ಮುನಿಸ್ವಾಮಿ ಹೇಳಿದ್ದಾರೆ.
ಜೂನ್ 4ರ ನಂತರ ಡಿಕೆಶಿ- ಸಿದ್ದರಾಮಯ್ಯ ಈ ಕಾರಣಕ್ಕಾಗಿ ಪರಸ್ಪರ ಹೊಡೆದಾಡಿಕೊಳ್ಳುತ್ತಾರೆ: ಅಗರ್ವಾಲ್
ಮಂಡ್ಯದಲ್ಲಿ NDA ಗೆಲ್ಲಬೇಕು: ಮಂಡ್ಯ ಗೆಲುವಿಗೆ ವಿಜಯೇಂದ್ರ ಕಾರ್ಯತಂತ್ರ
ಜೆಡಿಎಸ್ ಪಕ್ಷದ ಯುವ ಮುಖಂಡ ಚಂದನ್ಗೆ ಸಾಮಾಜಿಕ ಜಾಲತಾಣ ವಿಭಾಗದ ರಾಜ್ಯಾಧ್ಯಕ್ಷ ಪಟ್ಟ



