Spiritual: ಚಿಕ್ಕ ಮಕ್ಕಳು, ಅಥವಾ ಯಾರೇ ಆಗಲಿ ಎಲ್ಲಾದರೂ ಹೋಗಿ ಬಂದಾಗ, ಜ್ವರ ಬರುವುದು, ತಿಂದಿದ್ದು ಸರಿಯಾಗಿ ಜೀರ್ಣವಾಗದೇ ಇರುವುದು. ಅಥವಾ ಯಾವುದೇ ರೀತಿಯ ಆರೋಗ್ಯ ಸಮಸ್ಯೆಗಳಾಗೋದು ಸಹಜ. ಆದರೆ ಇಂಥ ಸಮಸ್ಯೆ ಹೆಚ್ಚಾಗಿ ಬರೋದು ನಿಮಗೆ ದೃಷ್ಟಿ ಬಿದ್ದಾಗ. ಕೆಲವರು ಇದನ್ನು ನಂಬೋದಿಲ್ಲ. ಆದರೆ ಹಲವರಿಗೆ ದೃಷ್ಟಿ ದೋಷದಿಂದಾಗಿಯೇ ಆರೋಗ್ಯ ಸಮಸ್ಯೆ ಬರುತ್ತದೆ. ಇಂಥ ಸಮಸ್ಯೆಗೆ ಹೇಗೆ ಪರಿಹಾರ ಮಾಡಬೇಕು ಅಂತಾರೆ ಭರತ್ ಅವರು ಹೇಳಿದ್ದಾರೆ.
ಕುದೃಷ್ ಅನ್ನೋದು ಕಲ್ಲನೇ ಕರಗಿಸುತ್ತೆ ಅಂತೆ. ಅಂಥದ್ರಲ್ಲಿ ನಾವು ಮನುಷ್ಯರು ನಮ್ಮನ್ನು ಬಿಡತ್ತಾ ಅಂತಾ ಕೇಳಿರುವ ಭರತ್, ದೃಷ್ಟಿ ದೋಷ ನಿವಾರಣೆಗೆ ಸಿಂಪಲ್ ಐಡಿಯಾ ನೀಡಿದ್ದಾರೆ. ಸ್ನಾನದ ನೀರಿಗೆ ಉಪ್ಪು ಹಾಕಿ ಸ್ನಾನ ಮಾಡಿದರೆ ದೃಷ್ಟಿ ದೋಷ ನಿವಾರಣೆಯಾಗತ್ತೆ.
ಇನ್ನು ಕರ್ಮದ ಬಗ್ಗೆ ಮಾತನಾಡಿರುವ ಭರತ್, ನಿಮ್ಮ ಬಳಿ ಎಷ್ಟೇ ಶಕ್ತಿ, ಹಣ, ಅಧಿಕಾರ ಏನೇ ಇದ್ದರೂ, ಯಾರಿಗೂ ಮೋಸ ಮಾಡಬೇಡಿ. ಆ ಕರ್ಮ ಮುಂದೆ 1 ದಿನ ನಿಮ್ಮ ಪಾಲಾಗೇ ಆಗುತ್ತದೆ. ಹಾಗಾಗಿ ಆದಷ್ಟು ಉತ್ತಮ ಕೆಲಸಗಳನ್ನೇ ಮಾಡಿ ಅಂತಾರೆ ಭರತ್.
ಇನ್ನು ಬ್ಯಾಡ್ ಹ್ಯಾಬಿಟ್ಸ್ ಬಗ್ಗೆ ಮಾತನಾಡಿರುವ ಭರತ್, ಅಂಥ ಅಭ್ಯಾಸಗಳನ್ನು ಬಿಡಿಸುವುದು ತುಂಬ ಕಷ್ಟ. ನಮ್ಮಲ್ಲಿಯ ವಿಲ್ ಪವರ್ ಇದ್ದರೆ ಮಾತ್ರ ನಾವು ಅಂಥ ಚಟಗಳಿಂದ ದೂರವಾಗಬಹುದು. ಛಲ ಇದ್ದರೆ ಮಾತ್ರ ಇದೆಲ್ಲ ಸಾಧ್ಯ ಅಂತಾರೆ ಭರತ್. ಸಂಪೂರ್ಣ ಸಂದರ್ಶನಕ್ಕಾಗಿ ವೀಡಿಯೋ ನೋಡಿ.

