Saturday, May 24, 2025

Latest Posts

ಪಾಕಿಗಳ ಬುದ್ಧಿ ಭ್ರಮಣೆ : ನಿದ್ದೆಗೆಟ್ಟು ದಾಳಿ ಮಾಡಿದ್ರು : ಭಾರತೀಯ ಸೇನೆಯಿಂದ ಪಾಕ್‌ನ 50ಕ್ಕೂ ಹೆಚ್ಚು ಡ್ರೋನ್‌ಗಳ ಪೀಸ್‌ ಪೀಸ್..!

- Advertisement -

ಆಪರೇಷನ್‌ ಸಿಂಧೂರ್‌ ವಿಶೇಷ :

ನವದೆಹಲಿ: ಪಹಲ್ಗಾಮ್‌ ದಾಳಿಯ ಪ್ರತೀಕಾರವಾಗಿ ಭಾರತ ಪಾಕಿಗಳ ಭಯೋತ್ಪಾದನಾ ಶಿಬಿರಗಳ ಮೇಲೆ ಆಪರೇಷನ್‌ ಸಿಂಧೂರ್‌ ನಡೆಸಿ ಅವುಗಳನ್ನು ಧ್ವಂಸ ಮಾಡುವ ಮೂಲಕ ಉಗ್ರವಾದದ ವಿರುದ್ಧ ಸಮರ ಸಾರಿದೆ. ಇದಕ್ಕೆ ಪ್ರತಿಯಾಗಿ ರಣಹೇಡಿ ಪಾಕ್‌ ಭಾರತದ ನಾಗರಿಕರನ್ನು ಗುರಿಯಾಗಿಸಿ ದಾಳಿ ನಡೆಸಿದೆ. ಇದಕ್ಕೆ ಭಾರತೀಯ ಸೇನೆಯು ತಕ್ಕ ಪ್ರತ್ತ್ಯುತ್ತರ ನೀಡಿದೆ.

50ಕ್ಕೂ ಅಧಿಕ ಡ್ರೋನ್‌ಗಳು ಪೀಸ್‌ ಪೀಸ್..

ಇನ್ನೂ ಆಪರೇಷನ್‌ ಸಿಂಧೂರ್‌ ಕಾರ್ಯಾಚರಣೆಯ ಬಳಿಕ ಭಾರತ ಹಾಗೂ ಪಾಕಿಸ್ತಾನ ಗಡಿಗಳಲ್ಲಿ ಯುದ್ಧದ ಸನ್ನಿವೇಶ ನಿರ್ಮಾಣವಾಗಿದೆ. ಗುರುವಾರ ರಾತ್ರಿಯಿಂದ ನಿರಂತರವಾಗಿ ಪಾಕಿಸ್ತಾನ ಡ್ರೋನ್‌ಗಳನ್ನು ಬಳಸಿ ಭಾರತದ ಮೇಲೆ ವಿಫಲ ದಾಳಿಗೆ ಯತ್ನಿಸಿದೆ. ಜಮ್ಮು ಮತ್ತು ಕಾಶ್ಮೀರದ ಗಡಿ ನಿಯಂತ್ರಣ ರೇಖೆ ಮತ್ತು ಅಂತರರಾಷ್ಟ್ರೀಯ ಗಡಿಗಳಲ್ಲಿ ದೊಡ್ಡ ಪ್ರಮಾಣದ ಡ್ರೋನ್ ಹೊಡೆದುರುಳಿಸುವ ಕಾರ್ಯಾಚರಣೆ ನಡೆದಿದೆ. ಭಾರತೀಯ ಸೇನೆಯು ಈ ವೇಳೆ ಯಶಸ್ವಿಯಾಗಿ 50 ಕ್ಕೂ ಹೆಚ್ಚು ಪಾಕಿಸ್ತಾನಿ ಡ್ರೋನ್‌ಗಳನ್ನು ಹೊಡೆದುರುಳಿಸಿದೆ. ಈ ಮೂಲಕ ನಿನ್ನ ನನ್ನ ಎದುರು ನಡೆಯುವುದಿಲ್ಲ, ಕೆಣಕಿದರೆ ಪರಿಣಾಮ ಏಳೇಳು ಜನ್ಮಕ್ಕೆ ನೆನಪಿಡುವಷ್ಟು ಅಗಾಧವಾಗಿರುತ್ತದೆ ಎಂದು ಎಚ್ಚರಿಸಿದೆ. ಅಲ್ಲದೆ ಪಾಕ್‌ನ ದಾಳಿಗೆ ಭಾರತವು ಸಿಯಾಲ್‌ಕೋಟ್‌, ಇಸ್ಲಾಮಾಬಾದ್‌, ಲಾಹೋರ್‌ ಸೇರಿದಂತೆ 10ಕ್ಕೂ ಅಧಿಕ ಕಡೆಗಳಲ್ಲಿ ಎಸ್‌ 400 ಏರ್‌ ಡಿಫೆನ್ಸ್‌ ಸಿಸ್ಟಮ್‌ನಿಂದ ದಾಳಿ ನಡೆಸಿ ರಣಹೇಡಿಗಳ ಬುಡಕ್ಕೆ ಬೆಂಕಿ ಇಟ್ಟಿದೆ.

ವೈಮಾನಿಕ ಬೆದರಿಕೆ ಎದುರಿಸಲು ಸೇನೆ ಬಲಿಷ್ಠ…

ಮೊದಲನೇಯದಾಗಿ ಪಾಕಿಸ್ತಾನವು ವಿವಿಧ ಸ್ಥಳಗಳಲ್ಲಿ ಭಾರತದ ಭೂಪ್ರದೇಶಕ್ಕೆ ದೊಡ್ಡ ರೀತಿಯ ಡ್ರೋನ್‌ಗಳನ್ನು ಕಳುಹಿಸಲು ವಿಫಲ ಪ್ರಯತ್ನಗಳನ್ನು ಮಾಡಿದ ನಂತರ ಈ ಕಾರ್ಯಾಚರಣೆಗೆ ಭಾರತೀಯ ಸೇನೆ ಇಳಿದಿದೆ.

ಅಲ್ಲದೆ ಭಾರತೀಯ ಸೇನೆಯ ವಾಯು ರಕ್ಷಣಾ ಘಟಕಗಳು ತ್ವರಿತವಾಗಿ ಪ್ರತಿಕ್ರಿಯಿಸಿ ಉಧಮ್‌ಪುರ, ಸಾಂಬಾ, ಜಮ್ಮು, ಅಖ್ನೂರ್, ನಾಗ್ರೋಟಾ ಮತ್ತು ಪಠಾಣ್‌ಕೋಟ್ ಸೇರಿದಂತೆ ಪ್ರದೇಶಗಳಲ್ಲಿ ಪಾಕ್‌ನ ಡ್ರೋನ್‌ಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿ ಅವುಗಳನ್ನು ಯಶಸ್ವಿಯಾಗಿ ಹೊಡೆದುರುಳಿಸಿವೆ. ಇನ್ನೂ ಡ್ರೋನ್‌ಗಳನ್ನು ನಾಶಮಾಡಲು ಸೇನೆಯು ಹಲವಾರು ವಾಯು ರಕ್ಷಣಾ ವ್ಯವಸ್ಥೆಗಳು ಮತ್ತು ಶಸ್ತ್ರಾಸ್ತ್ರಗಳನ್ನು ಬಳಸಿದೆ. ಈ ಕಾರ್ಯಾಚರಣೆಯಲ್ಲಿ L-70 ಬಂದೂಕುಗಳು, Zu-23mm, ಶಿಲ್ಕಾ ವ್ಯವಸ್ಥೆಗಳು ಮತ್ತು ಇತರ ಸುಧಾರಿತ ಪ್ರತಿ-UAS ಉಪಕರಣಗಳ ವ್ಯಾಪಕ ಬಳಕೆ ಒಳಗೊಂಡಿದೆ. ಇದು ವೈಮಾನಿಕ ಬೆದರಿಕೆಗಳನ್ನು ಎದುರಿಸಲು ಸೇನೆಯ ಬಲಿಷ್ಠ ಸಾಮರ್ಥ್ಯವನ್ನು ಪ್ರದರ್ಶಿಸಿದೆ. ಶಿಖಂಡಿ ಪಾಕಿಸ್ತಾನ ಭಾರತದ ನಾಗರಿಕ ಪ್ರದೇಶಗಳನ್ನು ಗುರಿಯಾಗಿಸಿಕೊಂಡು ನಡೆಸಲಾದ ಡ್ರೋನ್ ದಾಳಿಯನ್ನು ಭಾರತೀಯ ಸಶಸ್ತ್ರ ಪಡೆಗಳು ಯಶಸ್ವಿಯಾಗಿ ವಿಫಲಗೊಳಿಸಿವೆ.

ಎಲ್ಲೆಡೆ ಹೈ ಅಲರ್ಟ್..!

ಇನ್ನೂ ಪಾಕಿಸ್ತಾನ ನಡೆಸಿದ ಡ್ರೋನ್‌ ದಾಳಿಗಳನ್ನು ದೇಶದ ಎಲ್ಲ ಕೆಡಗಳಲ್ಲೂ ಭಾರತೀಯ ಸೇನೆ ತನ್ನ ಅದಮ್ಯ ಸಾಹಸದಿಂದ ಹೊಡೆದುರುಳಿಸುವಲ್ಲಿ ಯಶಸ್ವಿಯಾಗಿದೆ. ಆದರೆ ಪಾಕ್‌ ನಡೆಸಿದ ಶೆಲ್‌ ಹಾಗೂ ಡ್ರೋನ್‌ ದಾಳಿಗಳಿಂದ ತಪ್ಪಿಸಿಕೊಳ್ಳಲು ಗಡಿ ಗ್ರಾಮದ ಜನರು ಬಂಕರ್‌ಗಳಲ್ಲಿ ಆಶ್ರಯ ಪಡೆದಿದ್ದರು. ಅಲ್ಲದೆ ಈಗಾಗಲೇ ಆ ಎಲ್ಲರಿಗೂ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಜಮ್ಮು ಮತ್ತು ಕಾಶ್ಮೀರದ ಸ್ಥಳೀಯ ಆಡಳಿತ ಅಲ್ಲಿನ ಜನರಿಗೆ ಸೂಚಿಸಿದೆ. ಮುಂಜಾಗ್ರತಾ ಕ್ರಮವಾಗಿ ಜಮ್ಜು ಮತ್ತು ಕಾಶ್ಮೀರದ ಹಾಗೂ ದೇಶದ ಹಲವು ಗಡಿ ರಾಜ್ಯಗಳಲ್ಲಿ ಶಾಲಾ ಕಾಲೇಜುಗಳಿಗೆ ರಜೆ ನೀಡಿ, ಹೈ ಅಲರ್ಟ್‌ ಘೋಷಿಸಲಾಗಿದೆ.

ಪಾಕಿಸ್ತಾನ ಮಾಡಿದ್ದು ಸರಿಯಲ್ಲ. ನಮಗೆ ಭಯವಿಲ್ಲ..

ಇನ್ನು ಪಾಕಿಸ್ತಾನ ಸೇನೆಯ ದಾಳಿಯಿಂದಾಗಿ ಗಡಿ ಬಳಿ ಉದ್ವಿಗ್ನತೆ ಭುಗಿಲೆದ್ದಿದ್ದು, ಇಡೀ ರಾತ್ರಿ ನಿವಾಸಿಗಳು ಆತಂಕದಲ್ಲೇ ಸಮಯ ಕಳೆಯುವಂತಾಗಿತ್ತು. ನಿನ್ನೆ ರಾತ್ರಿ ಸಂಪೂರ್ಣ ವಿದ್ಯುತ್ ಕಡಿತಗೊಂಡಿತ್ತು. ಅದರ ನಂತರ, ಡ್ರೋನ್‌ಗಳು ಹಾರಲು ಪ್ರಾರಂಭಿಸಿದವು ಮತ್ತು ಇಡೀ ರಾತ್ರಿ ಗುಂಡು ಹಾರಿಸುವ ಕೆಲಸ ಮಾಡಿದೆ. ಪಾಕಿಸ್ತಾನ ಮಾಡಿದ್ದು ಸರಿಯಲ್ಲ. ನಮಗೆ ಭಯವಿಲ್ಲ. ನಮ್ಮ ಪಡೆಗಳು ಪಾಕಿಸ್ತಾನಕ್ಕೆ ಸೂಕ್ತ ಉತ್ತರವನ್ನು ನೀಡುತ್ತಿವೆ. ನಮ್ಮ ಪ್ರಧಾನಿ ಮತ್ತು ನಮ್ಮ ಸೇನೆಯ ಮೇಲೆ ನಮಗೆ ನಂಬಿಕೆ ಇದೆ. ಎಲ್ಲಾ ಡ್ರೋನ್‌ಗಳನ್ನು ನಮ್ಮ ಪಡೆಗಳು ವಿಫಲಗೊಳಿಸಿವೆ. ನಮ್ಮ ದೇಶದ ಬಗ್ಗೆ ನಮಗೆ ಹೆಮ್ಮೆ ಇದೆ. ಗಡಿಯ ಬಳಿ ಉದ್ವಿಗ್ನತೆ ಇದೆ, ಆದರೆ ಉಳಿದ ಸ್ಥಳಗಳು ಸುರಕ್ಷಿತವಾಗಿವೆ ಎಂದು ಸ್ಥಳೀಯರು ಸೇನೆಯ ಕಾರ್ಯವನ್ನ ಅಭಿನಂದಿಸಿದ್ದಾರೆ.

- Advertisement -

Latest Posts

Don't Miss