ದಕ್ಷಿಣ ಭಾರತ ಅಂದ್ರೆನೇ ದೇವಸ್ಥಾನಗಳ ತವರೂರು. ಒಂದೊಂದು ರಾಜ್ಯದಲ್ಲೂ ಸಾವಿರ ಸಾವಿರ ದೇವಸ್ಥಾನಗಳಿದೆ. ಅಂಥ ದೇವಸ್ಥಾನಗಳಲ್ಲಿ ಪ್ರಸಿದ್ಧಿ ಪಡೆದಿರುವ ದೇವಸ್ಥಾನ ಅಂದ್ರೆ ತಮಿಳುನಾಡಿನ ಮಧುರೈ ಮೀನಾಕ್ಷಿ ದೇವಸ್ಥಾನ.
ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816
ತಮಿಳುನಾಡಿನ ಸಾಂಸ್ಕೃತಿಕ ನಗರಿ ಎಂದೇ ಪ್ರಖ್ಯಾತವಾದ ಮಧುರೈನಲ್ಲಿ ಮೀನಾಕ್ಷಿ ದೇವಸ್ಥಾನವಿದೆ. ಇಲ್ಲಿನ ಶಿಲ್ಪಕಲೆಯಂತೂ ಅತ್ಯದ್ಭುತವಾಗಿದೆ. ಮೀನಾಕ್ಷಿ ಎಂದರೆ ಪಾರ್ವತಿಯ ಇನ್ನೊಂದು ರೂಪ. ಹಾಗಾಗಿ ಈ ದೇವಸ್ಥಾನದಲ್ಲಿ ಶಿವ ಮತ್ತು ಪಾರ್ವತಿಯನ್ನ ಪೂಜಿಸಲಾಗುತ್ತದೆ. ಆದರೆ ಮೀನಾಕ್ಷಿ ದೇವಿ ಇಲ್ಲಿನ ಪ್ರಧಾನ ದೇವತೆಯಾಗಿದ್ದಾಳೆ. ಮೀನಾಕ್ಷಿಯ ಸ್ವರೂಪವೇ ಅತ್ಯಂತ ಸುಂದರವಾಗಿದೆ.
ಭುಜದ ಮೇಲೆ ಗಿಣಿಯನ್ನ ಹೊತ್ತು, ಹಸಿರು ಸೀರೆ, ಆಭರಣಗಳನ್ನೆಲ್ಲ ಧರಿಸಿದ ಮೀನಾಕ್ಷಿಯನ್ನ ನೋಡಲು ಎರಡು ಕಣ್ಣು ಸಾಲದು. ಅಂಥ ಅಥ್ಯದ್ಭುತ ದೇವಿ ಕಳೆ ಇವಳಿಗಿದೆ.
ಪುರಾಣದ ಪ್ರಕಾರ ಮಲಯಧ್ವಜ ಎಂಬ ರಾಜ ತನಗೆ ಮಕ್ಕಳಾಗಲು ಯಜ್ಞ ಯಾಗಾದಿಗಳನ್ನ ಮಾಡುತ್ತಾನೆ. ಆತನಿಗೆ ಹೆಣ್ಣು ಮಗು ಜನಿಸುತ್ತದೆ. ಆ ಬಾಲಕಿಗೆ ತಡತಗೈ ಎಂದು ಹೆಸರಿಡುತ್ತಾನೆ. ಆದ್ರೆ ಆಕೆಯ ದೇಹ ಮಾತ್ರ ಕೊಂಚ ವಿಚಿತ್ರವಾಗಿರುತ್ತದೆ. ಎಷ್ಟಾದರೂ ರಾಜನ ಮಗಳಾದ ತಡತಗೈ ಸಕಲ ವಿದ್ಯಾಪಾರಂಗತಳು, ವೀರೆಯೂ ಆಗಿರುತ್ತಾಳೆ. ವೈಕುಂಠ, ಅಮರಾವತಿ, ಬ್ರಹ್ಮಲೋಕಗಳಿಗೆ ಹೋಗಿ ಎಲ್ಲರೊಂದಿಗೆ ಯುದ್ಧ ಮಾಡಿ, ಗೆದ್ದು ಕೈಲಾಸ ಗೆಲ್ಲಬೇಕೆಂದು ಬರುತ್ತಾಳೆ.
ಅಲ್ಲಿ ಶಿವಗಣ ಮತ್ತು ನಂದಿ ಅವಳನ್ನ ತಡೆಯುತ್ತಾರೆ. ಆದ್ರೆ ಇದಕ್ಕೆ ಹೆದರದ ತಡತಗೈ ಅವರನ್ನೆಲ್ಲ ಎದುರಿಸಿ ಶಿವನೊಂದಿಗೆ ಹೋರಾಡಲು ಬರುತ್ತಾಳೆ. ಆದ್ರೆ ಶಿವನನ್ನು ಕಂಡ ಬಳಿಕ ತಡತಗೈಗೆ ಪ್ರೇಮವಾಗುತ್ತದೆ. ಆಗ ಕೊಂಚ ವಿಚಿತ್ರವಾಗಿದ್ದ ದೇಹ, ಸರಿಯಾಗುತ್ತದೆ. ಆಗ ತಡತಗೈ ಅತ್ಯಂತ ಸುಂದರಳಾಗಿ ಕಾಣುತ್ತಾಳೆ.
ತಡತಗೈಗಿದ್ದ ಲೋಪ ಶಿವನನ್ನು ನೋಡಿದ ಬಳಿಕ ಸರಿಯಾತು ಎಂದು ಅರಿತ ರಾಜ ಶಿವನ ಜೊತೆ ತಡತಗೈ ವಿವಾಹ ಮಾಡಿಸುತ್ತಾನೆ. ನಂತರ ಶಿವ ಸುಂದರೇಶ್ವರನಾಗಿ ಮತ್ತ ತಡತಗೈ ಮೀನಾಕ್ಷಿಯಾಗಿ ಮಧುರೈನಲ್ಲಿ ನೆಲೆಸುತ್ತಾರೆ.
![](http://karnatakatv.net/wp-content/uploads/2020/10/sudarshan-bhat-1.jpg)
ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816
ಉತ್ತರ ಕನ್ನಡ, ದಕ್ಷಿಣ ಕನ್ನಡದ ಪ್ರಖ್ಯಾತ ಜ್ಯೋತಿಷ್ಯರು, ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ,
ಉದ್ಯೋಗ, ವ್ಯಾಪಾರ, ಮದುವೆ, ಸಂತಾನ, ಆರೋಗ್ಯ, ಸ್ರಿö್ತÃ-ಪುರುಷ ವಶೀಕರಣ, ಮಾಟ-ಮಂತ್ರ,
ಶತ್ರು ನಾಶ, ಭೂಮಿ ವಿಚಾರ, ಸತಿ-ಪತಿ ಕಲಹ, ಮದುವೆದುಷ್ಟ ಶಕ್ತಿ, ದೃಷ್ಟಿ ದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ ದೈವಿಕ ಶಕ್ತಿಯಿಂದ
೨ ದಿನಗಳಲ್ಲಿ ಪರಿಹಾರ (೧೦೦% ಪರಿಹಾರ ಗ್ಯಾರಂಟಿ )
ಒಂದೇ ಕರೆಯಲ್ಲಿ ನಿಮ್ಮ ಜೀವನ ಬದಲಾಯಿಸುತ್ತಾರೆ.
ಫೋನಿನ ಮೂಲಕ ಪರಿಹಾರ