Sunday, September 8, 2024

Latest Posts

ನಿಮ್ಮ ಜೀವನದಲ್ಲಿ ಯಾವುದು ಕೆಟ್ಟದ್ದು..? ರಾಮಚರಿತ ಮಾನಸದಲ್ಲಿ ಹೇಳಿದ್ದೇನು..?

- Advertisement -

ಜೀವನದಲ್ಲಿ ಉನ್ನತ ಯಶಸ್ಸು ಗಳಿಸಬೇಕು. ನಾಲ್ಕು ಜನರ ನಂಬಿಕೆ ಗಳಿಸಬೇಕು. ಮನೆ ಮಂದಿಯ ಪ್ರೀತಿ ಗಳಿಸಬೇಕು. ಜೀವನದಲ್ಲಿ ನೆಮ್ಮದಿ, ಶಾಂತಿ ನೆಲೆಸಿರಬೇಕು ಅಂದ್ರೆ ನಮ್ಮಲ್ಲಿ ಕೆಲ ಗುಣಗಳಿರಬಾರದು. ಯಾವುದು ಆ ಕೆಟ್ಟ ಗುಣಗಳು ಅನ್ನೋ ಬಗ್ಗೆ ರಾಮಚರಿತ ಮಾನಸದಲ್ಲಿ ತಿಳಿಸಲಾಗಿದೆ. ಆ ಬಗ್ಗೆ ಮಾಹಿತಿ ತಿಳಿಯೋಣ ಬನ್ನಿ..

ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816

ರಾಮಚರಿತ ಮಾನಸದ ಪ್ರಕಾರ ಸಿಟ್ಟು ಮನುಷ್ಯನನ್ನು ಸುಟ್ಟು ಹಾಕುತ್ತದೆ. ಯಾವ ಮನುಷ್ಯನಲ್ಲಿ ಕೋಪ ಹೆಚ್ಚಿರುತ್ತದೆಯೋ, ಆತ ಯಾರಲ್ಲಿಯೂ ಉತ್ತಮನೆಂದು ಎನ್ನಿಸಿಕೊಳ್ಳುವುದಿಲ್ಲ. ಸ್ನೇಹಿತರು ಕೂಡ ಇಂಥವರಿಂದ ದೂರ ಸರಿಯುತ್ತಾರೆ. ಇಂಥವರ ವೈವಾಹಿಕ ಸಂಬಂಧ ಕೂಡ ಉತ್ತಮವಾಗಿರುವುದಿಲ್ಲ. ಒಟ್ಟಾರೆಯಾಗಿ ಯಾರಿಗೆ ಕೋಪ ಹೆಚ್ಚಿರುತ್ತದೆಯೋ ಅವರು ಜೀವನದಲ್ಲೆಂದೂ ಉದ್ಧಾರವಾಗುವುದಿಲ್ಲ.

ಎರಡನೇಯದಾಗಿ ರಾಮಚರಿತ ಮಾನಸ ಹೇಳುವುದೇನೆಂದರೆ ನಾವು ಯಾವುದಕ್ಕೆ ಹೆಚ್ಚು ಪ್ರಾಮುಖ್ಯತೆ ನೀಡುತ್ತೇವೋ ಅಂಥವು ನಮಗೆ ನಷ್ಟ ಉಂಟು ಮಾಡುತ್ತದೆ. ಉದಾಹರಣೆಗೆ ನಾವು ಯಾರನ್ನು ಮಿತಿ ಮೀರಿ ಪ್ರೀತಿಸುತ್ತೆವೋ, ಅವರಿಂದಲೇ ಮನಸ್ಸಿಗೆ ನೋವುಂಟಾಗುತ್ತದೆ. ಹಾಗಾಗಿ ಪ್ರೀತಿ, ಕಾಳಜಿ ಎಲ್ಲದರಲ್ಲೂ ಮಿತಿ ಇರಬೇಕು. ಅಗತ್ಯಕ್ಕಿಂತ ಹೆಚ್ಚು ಪ್ರಾಮುಖ್ಯತೆ ಯಾವುದಕ್ಕೂ ನೀಡಬಾರದು.

ಮನುಷ್ಯನಾದವನು ಎಲ್ಲರಿಗೂ ಒಳ್ಳೆಯದನ್ನು ಬಯಸಬೇಕು. ಸಾಧ್ಯವಾದಲ್ಲಿ ತನ್ನ ಕೈಲಾದಷ್ಟು ಒಳ್ಳೆಯದನ್ನ ಮಾಡಬೇಕು. ಅದನ್ನು ಬಿಟ್ಟು ಬೇರೆಯವರು ಅಭಿವೃದ್ಧಿ ಹೊಂದಿದರೆ, ಅವರ ಮೇಲೆ ಅಸೂಯೆ ಪಡುವುದು. ಅವರಿಗೆ ಕೆಟ್ಟದ್ದು ಬಯಸುವುದು, ಅವರ ಬಗ್ಗೆ ಬೇರೆಯವರ ಬಳಿ ಇಲ್ಲ ಸಲ್ಲದ್ದನ್ನ ಮಾತುಡುವುದೆಲ್ಲ ಮಾಡಿದರೆ, ಅಂಥ ಮನುಷ್ಯ ಜೀವನದಲ್ಲೆಂದೂ ಯಶಸ್ಸು ಕಾಣುವುದಿಲ್ಲ. ಅವನ ಯೋಚನೆ ಕೆಳಮಟ್ಟದಾಗಿದ್ದು, ಅವನೆಂದು ಮೇಲೆ ಬರಲು ಸಾಧ್ಯವಾಗುವುದಿಲ್ಲ.

ಇನ್ನು ಅಹಂಕಾರ ಮತ್ತು ದುರಾಸೆಯೂ ಕೂಡ ವಿಷದಂತೆ. ಇಂಥ ಬುದ್ಧಿ ಇರುವ ವ್ಯಕ್ತಿ ಆದಷ್ಟು ಬೇಗ ಜೀವನದಲ್ಲಿ ಪಾಠ ಕಲಿಯುತ್ತಾನೆ. ನಮ್ಮ ಇತಿ ಮಿತಿಗೆ ತಕ್ಕಷ್ಟು ಬದುಕಬೇಕೆ ಹೊರತು. ಕಂಡಿದ್ದು, ಕೊಂಡುಕೊಳ್ಳಬೇಕು ಅನ್ನೋ ಆಸೆ ಇರುವವನು ಜೀವನದಲ್ಲಿ ಅಭಿವೃದ್ಧಿ ಕಾಣಲು ಸಾಧ್ಯವೇ ಇಲ್ಲ. ದುರಾಸೆಯಿಂದ ಮನುಷ್ಯನ ಜೀವನವೇ ನಾಶವಾಗುತ್ತದೆ. ಇನ್ನು ತನ್ನಲ್ಲಿರುವ ಸೌಂದರ್ಯ, ವಿದ್ಯೆ, ಆಸ್ತಿ ಪಾಸ್ತಿ ಬಗ್ಗೆ ಯಾರಿಗೆ ಅಹಂಕಾರವಿರುತ್ತದೆಯೋ, ಅಂಥವರಿಗೆ ದೇವರು ತಕ್ಕ ಪಾಠ ಕಲಿಸುತ್ತಾನೆ.

ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816
ಉತ್ತರ ಕನ್ನಡ, ದಕ್ಷಿಣ ಕನ್ನಡದ ಪ್ರಖ್ಯಾತ ಜ್ಯೋತಿಷ್ಯರು, ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ,
ಉದ್ಯೋಗ, ವ್ಯಾಪಾರ, ಮದುವೆ, ಸಂತಾನ, ಆರೋಗ್ಯ, ಸ್ತ್ರೀ-ಪುರುಷ ವಶೀಕರಣ, ಮಾಟ-ಮಂತ್ರ,
ಶತ್ರು ನಾಶ, ಭೂಮಿ ವಿಚಾರ, ಸತಿ-ಪತಿ ಕಲಹ, ಮದುವೆದುಷ್ಟ ಶಕ್ತಿ, ದೃಷ್ಟಿ ದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ ದೈವಿಕ ಶಕ್ತಿಯಿಂದ
೨ ದಿನಗಳಲ್ಲಿ ಪರಿಹಾರ (೧೦೦% ಪರಿಹಾರ ಗ್ಯಾರಂಟಿ )
ಒಂದೇ ಕರೆಯಲ್ಲಿ ನಿಮ್ಮ ಜೀವನ ಬದಲಾಯಿಸುತ್ತಾರೆ.
ಫೋನಿನ ಮೂಲಕ ಪರಿಹಾರ

- Advertisement -

Latest Posts

Don't Miss