Sunday, June 1, 2025

Latest Posts

ನಿಮಗೆ ಜಾನಕಿದೇವಿಯ ದೇವಸ್ಥಾನದ ಬಗ್ಗೆ ಗೊತ್ತೇ..?

- Advertisement -

ರಾಮಾಯಣದಲ್ಲಿ ಬರುವ ಮುಖ್ಯವಾದ ಸ್ತ್ರೀ ಎಂದರೆ ಸೀತೆ. ಪತಿವೃತಾ ಶಿರೋಮಣಿಯಾದ ಸೀತೆ, ರಾವಣನ ಬಳಿಯಲ್ಲಿ ಇದ್ದರೂ ರಾಮನ ಜಪವೇ ಮಾಡುತ್ತಿದ್ದಳು. ಆದರೂ ಕೂಡ ರಾಮ ಆಕೆಯ ಮೇಲೆ ಅನುಮಾನಪಟ್ಟು ಆಕೆಯನ್ನು ಕಾಡಿಗೆ ಕಳುಹಿಸಿದ. ಆದರೂ ಕೂಡ ಆಕೆ ಪಾತಿವೃತ್ಯ ಬಿಡಲಿಲ್ಲ. ಕೊನೆಗೂ ಆಕೆ ರಾಮನನ್ನು ಸೇರಲಾಗಲಿಲ್ಲ. ಇಂಥ ಪುಣ್ಯವತಿಗಾಗಿ ದೇವಸ್ಥಾನವೊಂದನ್ನ ಕಟ್ಟಲಾಗಿದೆ. ಎಲ್ಲಿದೆ ಆ ದೇವಸ್ಥಾನ ಅನ್ನೋ ಬಗ್ಗೆ ತಿಳಿಯೋಣ ಬನ್ನಿ..

ಜನಕ ರಾಜನ ಸಾಕು ಮಗಳಾದ ಜಾನಕಿಗಾಗಿ ನೇಪಾಳದಲ್ಲಿ ದೇವಸ್ಥಾನವನ್ನ ಕಟ್ಟಲಾಗಿದೆ. ನೇಪಾಳದ ಜನಕಪುರಿಯಲ್ಲಿಯೇ ಜನಕರಾಜನಿಗೆ ಜಾನಕಿಿ ಸಿಕ್ಕಿದಳು ಎಂದು ಹೇಳಲಾಗುತ್ತದೆ. ಹಾಗಾಗಿ ಇಲ್ಲಿ ಜಾನಕಿಗಾಗಿ ದೇವಸ್ಥಾನವನ್ನು ಕಟ್ಟಲಾಗಿದೆ. ಇಲ್ಲಿ ರಾಮನಿಗೂ ಪೂಜೆ ಸಲ್ಲಿಸಲಾಗುತ್ತದೆ. ಆದರೆ ಮೊದಲ ಪ್ರಾಶಸ್ತ್ಯಸೀತೆಗೆ ಇದೆ. ಹೌದು.. ನಾವು ನೀವೆಲ್ಲ ಕಂಡ ರಾಮನ ದೇವಸ್ಥಾನದಲ್ಲಿ ರಾಮ, ಸೀತೆ, ಲಕ್ಷ್ಮಣ ಮಮತ್ತು ಆಂಜನೇಯನನ್ನು ಪೂಜಿಸಲಾಗುತ್ತದೆ. ಅಲ್ಲಿ ರಾಮನಿಗೆ ಅಗ್ರಸ್ಥಾನ. ಆದರೆ ಈ ಜಾನಕಿ ದೇವಸ್ಥಾನದಲ್ಲಿ ಸೀತೆಗೆ ಅಗ್ರಸ್ಥಾನ.

ರಾಮಾಯಣದಲ್ಲಿ ಹೇಳಿರುವಂತೆ ಜನಕರಾಜ ಮಕ್ಕಳಿಲ್ಲವೆಂದು ಕೊರಗುತ್ತಿದ್ದ. ಆದರೆ ಒಂದು ದಿನ ಜನಕರಾಜ ತನ್ನ ಹೊಲ ಉಳುಮೆ ಮಾಡಿಸುತ್ತಿದ್ದ ವೇಳೆ, ಹೊಲದಲ್ಲಿ ಪೆಟ್ಟಿಗೆ ಸಿಗುತ್ತದೆ. ಆ ಪೆಟ್ಟಿಗೆಯಲ್ಲಿ ಪುಟ್ಟ ಹೆಣ್ಣು ಮಗುವಿರುತ್ತದೆ. ದೇವರು ತನಗೆ ಮಕ್ಕಳಿಲ್ಲವೆಂಬ ಕೊರಗನ್ನು ನೀಗಿಸಿದ ಎಂಬ ಖುಷಿಯಲ್ಲಿ ಆ ಮಗುವನ್ನು ಜನಕರಾಜ ಸಾಕುತ್ತಾನೆ. ಆ ಮಗುವೇ ಜಾನಕಿ ಮಾತೆ.

ಈ ಜಾನಕಿ ಸಿಕ್ಕ ಜಾಗದಲ್ಲೇ ಜಾನಕಿ ಮಾತೆಯ ದೇವಸ್ಥಾನ ನಿರ್ಮಿಸಲಾಗಿದೆ. ಇದನ್ನು ನೌಲಖಾ ಮಂದಿರವೆಂದು ಕರೆಯಲಾಗುತ್ತದೆ. ಕ್ರಿ.ಶ. 1910ರಲ್ಲಿ ಬ್ರಿಶ್‌ವಾನು ಎಂಬ ರಾಣಿ ನಿರ್ಮಿಸಿದಳು. ಇನ್ನು ಕೆಲವರು ಈ ಸ್ಥಳದಲ್ಲಿ ಸೀತಾದೇವಿಯ ಟಿನ್ನದ ಮೂರ್ತಿ ಸಿಕ್ಕಿತ್ತು, ಈ ಕಾರಣಕ್ಕೆ ದೇವಸ್ಥಾನ ಕಟ್ಟಿಸಲಾಯಿತು ಎಂದು ಹೇಳುತ್ತಾರೆ.

ಇನ್ನು  ಇಲ್ಲಿ ಸೀತೆ ಮತ್ತು ರಾಮನ ವಿವಾಹ ನಡೆದ ವಿವಾಹ ಮಂಟಪವಿದೆ. ರಾಮ ಶಿವ ಧನಸ್ಸು ಮುರಿದಿದ್ದು ಈ ಜಾಗದಲ್ಲಿ ಎಂದು ಹೇಳಲಾಗಿದ್ದು, ಆ ಸ್ಥಳ ಈಗ ದೊಡ್ಡ ಮೈದಾನವಾಗಿದೆ. ಮತ್ತು ಅಲ್ಲಿ ಪ್ರತೀ ವರ್ಷ ಮಕರ ಮೇಳ ನಡೆಯುತ್ತದೆ. ಇನ್ನು ಇಲ್ಲಿ ಬರುವ ಭಕ್ತರಿಗೆ ದೇವಿಯ ಪೂಜೆ ಮಾಡುವ ಅವಕಾಶ ಕೂಡ ಸಿಗುತ್ತದೆ. ಭಾರತ, ನೇಪಾಳ, ಶ್ರೀಲಂಕಾದಿಂದ ಭಕ್ತರು ಸೀತಾಾದೇವಿಯ ದರ್ಶನ ಮಾಡಲು ಬರುತ್ತಾರೆ.

- Advertisement -

Latest Posts

Don't Miss