Thursday, March 20, 2025

Latest Posts

ಮಠದಲ್ಲಿ ಸಿಂಗಂ ಅಣ್ಣಾಮಲೈ..!

- Advertisement -

ಕರ್ನಾಟಕ ಟಿವಿ : ಪೊಲೀಸ್ ಇಲಾಖೆಗೆ ರಾಜೀನಾಮೆ ಕೊಟ್ಟಿರುವ ನಮ್ಮ ಸಿಂಗಂ ಅಣ್ಣಾಮಲೈ ಮಠಕ್ಕೆ ಭೇಟಿ ನೀಡಿದ್ರು.. ರಾಜೀನಾಮೆ ನೀಡಿದ ನಂತರ ಹಲವು ಕಾರ್ಯಕ್ರಮಗಳಲ್ಲಿ ಭಾಗಿಯಾಗ್ತಿರುವಅಣ್ಣಾ ಮಲೈ ಇಂದು ಉತ್ತರ ಕನ್ನಡ ಜಿಲ್ಲೆ ಶಿರಸಿಯ ಸೋಂದಾ ಊರಿನ ವಾಧಿರಾಜ ಮಠಕ್ಕೆ ಭೇಟಿ ನೀಡಿದ್ರು.

ಶ್ರೀಗಳ ಜೊತೆ ಆಧ್ಯಾತ್ಮದ ಬಗ್ಗೆ ಅಣ್ಣಾಮಲೈ ಚರ್ಚೆ

ಸ್ನೇಹಿತರೊಂದಿಗೆ ಮಠಕ್ಕೆ ಭೇಟಿ ನೀಡಿದ್ದ ಅಣ್ಣಾಮಲೈ ಸೋಂದಾ ಮಠದ ಶ್ರೀಗಳೊಂದಿಗೆ ಆಧ್ಯಾತ್ಮದ ಬಗ್ಗೆ ಚರ್ಚೆ ಮಾಡಿದ್ರು. ಇದೇ ವೇಳೆ ವಿಶ್ವ ವಲ್ಲಭ ತೀರ್ಥ ಶ್ರೀಪಾದರಿಂದ ಮಂತ್ರಾಕ್ಷತೆ ಪಡೆದ್ರು..

ಈ ಹಿಂದೆ ಐಪಿಎಸ್ ಹುದ್ದೆಗೆ ರಾಜೀನಾಮೆ ನೀಡಿದ ನಂತರ ಅಣ್ಣಾಮಲೈ ಸ್ನೇಹಿತರೊಂದಿಗೆ ಶಬರಿಮಲೆಗೂ ಭೇಟಿ ನೀಡಿ ಅಯ್ಯಪ್ಪನ ದರ್ಶನ ಪಡೆದಿದ್ರು..

- Advertisement -

Latest Posts

Don't Miss