Bengaluru Political News: ಬೆಂಗಳೂರಿನಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಮಾಜಿ ಸಿಎಂ ಯಡಿಯೂರಪ್ಪ, ವಿರೋಧ ಪಕ್ಷದ ನಾಯಕನ ಆಯ್ಕೆ ವಿಳಂಬ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.
ಈಗಾಗಲೇ ವಿರೋಧ ಪಕ್ಷದ ಆಯ್ಕೆ ತಡವಾಗಿದೆ. ಆದಷ್ಟು ಬೇಗ ಮಾಡಲು ನಾನು ಒತ್ತಾಯ ಮಾಡ್ತೀನಿ. ಚಳಿಗಾಲದ ಅಧಿವೇಶನದ ಒಳಗೆ ವಿಪಕ್ಷ ನಾಯಕನ ಆಯ್ಕೆಯಾಗಲಿದೆ. ನೂರಕ್ಕೆ ನೂರು ಆಯ್ಕೆ ಆಗಲಿದೆ, ಹೈಕಮಾಂಡ್ ಗೆ ಒತ್ತಾಯ ಮಾಡ್ತೇವೆ ಎಂದು ಹೇಳಿದ್ದಾರೆ.
ಪ್ರಧಾನಿಗಳ ಭೇಟಿಗೆ ಅವಕಾಶ ಕೊಡಿಸುವಂತೆ ಸಿಎಂ ಹೇಳಿಕೆ ವಿಚಾರದ ಬಗ್ಗೆ ಮಾತನಾಡಿದ ಯಡಿಯೂರಪ್ಪ, ಗರಂ ಆಗಿದ್ದಾರೆ. ಪ್ರಧಾನಿಗಳ ಬಗ್ಗೆ ದಿನ ಬೆಳಗಾದ್ರೆ ಹಗುರವಾಗಿ ಮಾತಾಡಿದ್ರೆ, ನಿಮ್ಮನ್ನು ಯಾರು ಹತ್ತಿರಕ್ಕೆ ಸೇರಿಸ್ತಾರೆ..? ಜವಬ್ದಾರಿಯುತ ಸ್ಥಾನದಲ್ಲಿರುವವರು ಈ ರೀತಿ ಎಲ್ಲಾ ಮಾತಾಡೋದು ಬಿಟ್ಟು, ಹೋಗಿ ಎರಡು ದಿನ ಕೂತ್ಕೋಬೇಕು. ಜನರ ಬಗ್ಗೆ ಕಾಳಜಿ ಇದ್ದರೆ, ದೆಹಲಿಗೆ ಹೋಗಿ ಎರಡು ದಿನ ಕಾದು ಕುಳಿತು, ಪ್ರಧಾನಿಗಳು ಭೇಟಿ ಮಾಡಬೇಕು, ಅವಾಗ ನಿಮಗೆ ಸಮಯ ಕೊಡ್ತಾರೆ. ಅವಾಗ ರಾಜ್ಯದ ಅಭಿವೃದ್ಧಿ, ಬರ ಪರಿಹಾರ ಸಮಸ್ಯೆ ಬಗೆಹರಿಯುತ್ತದೆ. ಅದ ಬಿಟ್ಟು ಗಂಡ ಹೆಂಡತಿ ಜಗಳದ ನಡುವೆ ಕೂಸು ಬಡವಾಯ್ತು ಅನ್ನುವ ಹಾಗೇ, ನಿಮ್ಮ ಈ ಬೇಜವಬ್ದಾರಿತನದ ಮಾತಿಂದ ರಾಜ್ಯದ ಅಭಿವೃದ್ಧಿ ಕುಂಠಿತ ಆಗ್ತಿದೆ. ಅದಕ್ಕಾಗಿ ಈ ರೀತಿ ಎಲ್ಲಾ ಮಾತಾಡೋದು ಬಿಟ್ಟು, ಮೋದಿ ಭೇಟಿ ಮಾಡಿ ಎಂದು ತಿರುಗೇಟು ಕೊಟ್ಟ ಯಡಿಯೂರಪ್ಪ.
ಆಪರೇಷನ್ ಕಮಲ ಆರೋಪ ವಿಚಾರಕ್ಕೆ ಸಂಬಂಧಿಸಿದಂತೆ ಉತ್ತರಿಸಿದ ಯಡಿಯೂರಪ್ಪ, ಈ ತರ ಬೇಜವಾಬ್ದಾರಿ ಆರೋಪ ಮಾಡೋದು ಸರಿಯಲ್ಲ. ಆ ತರ ಇದ್ರೆ ತನಿಖೆ ಮಾಡಿಸಲಿ. ಈ ರೀತಿ ವಿನಾಕಾರಣ ಆರೋಪ ಸರಿಯಲ್ಲ ಎಂದರು.
ವಿಪಕ್ಷದವರಾಗಿ ನಮಗೂ ಜವಾಬ್ದಾರಿ ಇದೆ. ನಮ್ಮ ಕರ್ತವ್ಯ ಇದೆ. ತಹಾಗಾಗಿ ಜನರ ಸಮಸ್ಯೆ ಆಲಿಸಲು ರಾಜ್ಯ ಪ್ರವಾಸ ಮಾಡ್ತೀವಿ ಎಂದರು. ಇನ್ನು Z ಸೆಕ್ಯೂರಿಟಿ ವಿಚಾರದ ಬಗ್ಗೆ ಮಾತನಾಡಿದ ಮಾಜಿ ಸಿಎಂ, ನಾನು ಕೇಂದ್ರ ಗೃಹ ಸಚಿವರಿಗೆ ಮನವಿ ಮಾಡಿದ್ದೇನೆ. ಮೊದಲು ಇದ್ದ ಭದ್ರತೆಯನ್ನೇ ನೀಡಿ ಅಂತ. Z ಸೆಕ್ಯೂರಿಟಿ ಆದ್ರೆ ನನ್ನ ಬಳಿ ಜನ ಬರಲು ಸಾಧ್ಯವಿಲ್ಲ. ನಾನು ಜನರ ಜೊತೆ ಇರುವವನು. ಹಾಗಾಗಿ ಮೊದಲ ಸೆಕ್ಯೂರಿಟಿ ಕೊಡಿ ಅಂತ ಮನವಿ ಮಾಡಿದ್ದೇನೆ ಎಂದಿದ್ದಾರೆ.
ಸುರ್ಜೇವಾಲ, ವೇಣುಗೋಪಾಲ್ ರಾಜ್ಯಕ್ಕೆ ಬಂದ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ ಯಡಿಯೂರಪ್ಪ, ಅವರಲ್ಲಿ ಹೊಂದಾಣಿಕೆ ಇಲ್ಲ ಅನ್ನೋದು ಗೊತ್ತಾಗ್ತಿದೆ. ಬೆಳಗ್ಗೆ ಎದ್ರೆ ನಾಯಿ, ನರಿ ತರ ಕಿತ್ತಾಡ್ತಿದ್ದಾರೆ. ಇದರಿಂದ ಇವರಲ್ಲಿ ಎಲ್ಲವೂ ಸರಿ ಇಲ್ಲ ಅನ್ನೋದು ಸ್ಪಷ್ಟ ಎಂದು ಹೇಳಿದ್ದಾರೆ.
ನಾಳೆ ಯಡಿಯೂರಪ್ಪ ನೇತೃತ್ವದಲ್ಲಿ ಬೆಂಗಳೂರು ಪ್ರವಾಸದ ಬಗ್ಗೆ ಪ್ರತಿಕ್ರಿಯಿಸಿದ ಅವರು, ನಾಳೆ ಬೆಂಗಳೂರಿನಲ್ಲಿ ಪ್ರವಾಸ ಇಲ್ಲ. ಶಿವಮೊಗ್ಗಕ್ಕೆ ಹೋಗ್ತಾ ಇದ್ದೇನೆ. ಅಲ್ಲಿ ಕಾರ್ಯಕ್ರಮ ಇದೆ. ಅದಾದ ಬಳಿಕ ಬೆಂಗಳೂರಿಗೆ ವಾಪಸ್ ಆಗ್ತೇನೆ. ಬೆಂಗಳೂರಿಗೆ ಬಂದ ಬಳಿಕ ಬರ ಅಧ್ಯಯನ ಮಾಡ್ತೀನಿ ಅಂತ ಯಡಿಯೂರಪ್ಪ ಸ್ಪಷ್ಟನೆ ನೀಡಿದ್ದಾರೆ.
‘ಆಯ್ತಪ್ಪಾ, ನಮ್ಮ ಸರ್ಕಾರ ಬೀಳಿಸ್ಕೊಳ್ಳಿ. ಸರ್ಕಾರ ಬೀಳುತ್ತೆ ಎಂಬ ಮಾತು ಕೇಳಿ ನಮಗೂ ಸಾಕಾಗಿದೆ’
ಬಿಜೆಪಿ ಸಂಸದರು ಕೇಂದ್ರದಿಂದ ಬರಪರಿಹಾರ ಕೊಡಿಸಲಿ : ಮುಖ್ಯಮಂತ್ರಿ ಸಿದ್ದರಾಮಯ್ಯ