Bengaluru News: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸೋಮವಾರ ರಾಾತ್ರಿ ನಡೆದ ಕೆಸಿಸಿ ಫೈನಲ್ ಪಂದ್ಯವನ್ನು ಡಿ.ಕೆ.ಶಿವಕುಮಾರ್, ಸಚಿವ ಚೆಲುವರಾಯಸ್ವಾಮಿ, ಸೇರಿ ಹಲವರು ವೀಕ್ಷಿಸಿದರು. ಈ ವೇಳೆ ಉಪಮುಖ್ಯಮಂತ್ರಿಗಳು ಮಾತನಾಡಿದ್ದು, ನಮ್ಮ ಸ್ಯಾಂಡಲ್ವುಡ್ ನಟರು, ಪತ್ರಕರ್ತರು, ಕ್ರಿಕೇಟ್ ಆಟಗಾರರು ಸೇರಿ, ಒಟ್ಟಿಗೆ ಕ್ರಿಕೇಟ್ ಆಡುವ ಮೂಲಕ, ದೇಶದಲ್ಲಿ ಹೊಸ ಪ್ರಯತ್ನಕ್ಕೆ ಮುಂದಾಗಿದ್ದಾರೆ ಎಂದರು.

ಈ ಬಗ್ಗೆ ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿರುವ ಡಿಕೆಶಿ, ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ನಮ್ಮ ಸ್ಯಾಂಡಲ್ ವುಡ್ ಸಿನಿ ತಾರೆಯರ ಕೆಸಿಸಿ ಕ್ರಿಕೆಟ್ ಪಂದ್ಯಾವಳಿಯನ್ನ ಅಭಿನಯ ಚಕ್ರವರ್ತಿ ಶ್ರೀ ಕಿಚ್ಚ ಸುದೀಪ್ ಅವರೊಂದಿಗೆ ವೀಕ್ಷಿಸಿದೆ. ಹಾಗೆಯೇ ಸಿನಿಮಾ ತಂಡದವರಿಂದ ನೆನಪಿನ ಕಾಣಿಕೆ ಸ್ವೀಕರಿಸಿದೆ. ಕನ್ನಡ ಚಿತ್ರರಂಗವು ಕೆಸಿಸಿ ಪಂದ್ಯಾವಳಿ ಮೂಲಕ ಇಡೀ ದೇಶಕ್ಕೆ ಮಾದರಿಯಾಗಿದ್ದು, ಇದಕ್ಕೆ ನಮ್ಮ ಸರ್ಕಾರ ಇನ್ನು ಮುಂದೆಯೂ ಪ್ರೋತ್ಸಾಹ ನೀಡಲಿದೆ ಎಂದಿದ್ದಾರೆ.
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ನಮ್ಮ ಸ್ಯಾಂಡಲ್ ವುಡ್ ಸಿನಿ ತಾರೆಯರ ಕೆಸಿಸಿ ಕ್ರಿಕೆಟ್ ಪಂದ್ಯಾವಳಿಯನ್ನ ಅಭಿನಯ ಚಕ್ರವರ್ತಿ ಶ್ರೀ @KicchaSudeep ಅವರೊಂದಿಗೆ ವೀಕ್ಷಿಸಿದೆ. ಹಾಗೆಯೇ ಸಿನಿಮಾ ತಂಡದವರಿಂದ ನೆನಪಿನ ಕಾಣಿಕೆ ಸ್ವೀಕರಿಸಿದೆ. ಕನ್ನಡ ಚಿತ್ರರಂಗವು ಕೆಸಿಸಿ ಪಂದ್ಯಾವಳಿ ಮೂಲಕ ಇಡೀ ದೇಶಕ್ಕೆ ಮಾದರಿಯಾಗಿದ್ದು, ಇದಕ್ಕೆ ನಮ್ಮ… pic.twitter.com/mO6DlVUKWf
— DK Shivakumar (@DKShivakumar) December 25, 2023
‘ಬಿಜೆಪಿಗರು ಅಪಪ್ರಚಾರ ಮಾಡುತ್ತಿರುವುದು ಅವರ ಹತಾಶ ಮನಸ್ಥಿತಿಗೆ ಹಿಡಿದ ಕನ್ನಡಿ ಅಷ್ಟೇ’




