ಕರ್ನಾಟಕ ಟಿವಿ ನಡೆಸಿದ ಪ್ರಾಂತ್ಯವಾರು ಮೆಗಾ ಸರ್ವೆಯಲ್ಲಿ ದಕ್ಷಿಣ ಕನ್ನಡ ಭಾಗದಲ್ಲಿ 8 ಸ್ಥಾನವಿದ್ದು, 6 ಸ್ಥಾನ ಬಿಜೆಪಿ ಗೆಲ್ಲಲಿದೆ, 1 ಕಾಂಗ್ರೆಸ್ ಮತ್ತು ಇತರೆ 1 ಗೆಲ್ಲಲಿದೆ ಎಂದು ಹೇಳಲಾಗಿದೆ. ರಮಾನಾಥ್ ರೈ, ಮಿಥುನ್ ರೈರಂಥ ಘಟಾನುಘಟಿಗಳಿರುವಂಥ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ, ಬಿಜೆಪಿಗೆ ಹೆಚ್ಚು ಓಟ್ ಬೀಳುವ ನಿರೀಕ್ಷೆಗಳಿದೆ. ಬಂಟ್ವಾಳದಿಂದ ರಾಜೇಶ್ ನಾಯ್ಕ್ಗೆ ಗೆಲುವಾಗುವ ನಿರೀಕ್ಷೆ ಇದೆ. ಪುತ್ತೂರಿನಲ್ಲಿ ಬಿಜೆಪಿ ಈ ಬಾರಿ ಗೆಲುವುದು ಡೌಟ್ ಆಗಿದ್ದು, ಪಕ್ಷೇತರರಾಗಿ ನಿಂತ, ಅರುಣ್ ಕುಮಾರ್ ಪುತ್ತಿಲ ಗೆಲ್ಲುವ ನಿರೀಕ್ಷೆ ಇದೆ.
ಇನ್ನು ಉತ್ತರ ಕನ್ನಡ ಜಿಲ್ಲೆಯಲ್ಲಿ 6 ಸ್ಥಾನಗಳಿದ್ದು, 4 ಸ್ಥಾನ ಬಿಜೆಪಿ ಗೆಲ್ಲಲಿದೆ, ಕಾಂಗ್ರೆಸ್ 2 ಸ್ಥಾನ ಗೆಲ್ಲುವ ನಿರೀಕ್ಷೆ ಇದೆ. ಇಲ್ಲಿ ಹಳಿಯಾಳ, ಕಾರವಾರ, ಕುಮಟಾ, ಭಟ್ಕಳ, ಶಿರಸಿ ಯಲ್ಲಾಪುರ ಕ್ಷೇತ್ರವಿದ್ದು, ಇಲ್ಲೂ ಕೂಡ ಕೇಸರಿ ಕಹಳೆ ಮೊಳಗುವ ನಿರೀಕ್ಷೆ ಇದೆ.
ಉಡುಪಿ ವಿಧಾನಸಭಾ ಕ್ಷೇತ್ರದಲ್ಲಿ 5 ಸ್ಥಾನಗಳಿದ್ದು, 4 ಬಿಜೆಪಿ ಗೆದ್ದರೆ, 1 ಸ್ಥಾನ ಕಾಂಗ್ರೆಸ್ ಗೆಲ್ಲಲಿದೆ ಎಂದು ಹೇಳಲಾಗಿದೆ. ಬೈಂದೂರು, ಕುಂದಾಪುರ, ಉಡುಪಿ, ಕಾಪು, ಕಾರ್ಕಳ ಕ್ಷೇತ್ರಗಳಲ್ಲಿ ಬಿಜೆಪಿ ಹೆಚ್ಚಿನ ಸ್ಥಾನ ಗೆಲ್ಲುತ್ತದೆ ಎಂದು ಅಂದಾಜಿಸಲಾಗಿದೆ. ಇನ್ನಷ್ಟು ಮಾಹಿತಿಯನ್ನು ಈ ವೀಡಿಯೋ ಮೂಲಕ ತಿಳಿದುಕೊಳ್ಳಬಹುದು.
ಕರ್ನಾಟಕ ಟಿವಿ ಪ್ರಾಂತ್ಯವಾರು ಸರ್ವೆ: ಬೆಂಗಳೂರು ನಗರ 28 ವಿಧಾನಸಭಾ ಕ್ಷೇತ್ರ