Sunday, September 8, 2024

Latest Posts

40% ಕಮಿಷನ್ ಕುರಿತು ನ್ಯಾಯಮೂರ್ತಿಗಳಿಗೆ ದಾಖಲೆ ಸಲ್ಲಿಸಿದ ಕೆಂಪಣ್ಣ!

- Advertisement -

Political News: ಬೆಂಗಳೂರು: 40% ಕಮಿಷನ್ ಆರೋಪ ಕುರಿತು ತನಿಖೆ ನಡೆಸ್ತಿರುವ ನ್ಯಾಯಮೂರ್ತಿ H.N.ನಾಗಮೋಹನ ದಾಸ್ ಆಯೋಗಕ್ಕೆ ಗುತ್ತಿಗೆದಾರರ ಸಂಘದ ಅಧ್ಯಕ್ಷ ಡಿ.ಕೆಂಪಣ್ಣ ಪಿಡಬ್ಲ್ಯೂಡಿ, ನೀರಾವರಿ ಹಾಗೂ ಬಿಬಿಎಂಪಿ ಸೇರಿದಂತೆ ಹಲವು ಇಲಾಖೆಗಳ ಭ್ರಷ್ಟಾಚಾರದ ದಾಖಲೆಗಳನ್ನು ದಾಖಲೆ ನೀಡಿದ್ದಾರೆ.

ಬಳಿಕ ಬೆಂಗಳೂರಲ್ಲಿ ಪ್ರತಿಕ್ರಿಯಿಸಿದ ಕೆಂಪಣ್ಣ, ಇಂದು ನಾವು ನ್ಯಾಯಮೂರ್ತಿ ನಾಗಮೋಹನ್ ದಾಸ್ಗೆ ದಾಖಲೆ ಸಲ್ಲಿಸಿದ್ದೇವೆ. ನಾವು ನೀಡಿರುವ ದಾಖಲೆಗಳ ಬಗ್ಗೆ ಈಗ ಚರ್ಚೆ ಮಾಡಲ್ಲ. ಇನ್ನು ಅಡಿಷನಲ್ ದಾಖಲೆಗಳನ್ನ ಕೇಳಿದ್ದಾರೆ. ಇನ್ನು 10 ದಿನದೊಳಗೆ ಇನ್ನುಳಿದ ದಾಖಲೆಗಳನ್ನ ನೀಡುತ್ತೇವೆ ಎಂದು ತಿಳಿಸಿದರು.

40 ಪರ್ಸೆಂಟ್ ಕಮಿಷನ್ ಬಗ್ಗೆಯೂ ದಾಖಲೆಗಳನ್ನ ನೀಡಿದ್ದೇವೆ. ಈಗಿನ ಸರ್ಕಾರದ ಬಗ್ಗೆ 1 ಅಥವಾ 2 ಪ್ರಕರಣಗಳಿವೆ. ನ್ಯಾಯಮೂರ್ತಿಗಳು ತನಿಖೆ ಮಾಡುತ್ತಾರೆ ಎಂದು ಅವರು ತಿಳಿಸಿದರು.

2028ಕ್ಕೂ ನೀನೇ ಈ ರಾಜ್ಯ ಆಳಬೇಕು ಕಣಪ್ಪ : ಸಿದ್ದರಾಮಯ್ಯಗೆ ಹಾರೈಸಿದ ನಿಂಗಯ್ಯ

ಜನತಾ ದರ್ಶನದ ವೇಳೆ ಅಧಿಕಾರಗಳ ಮೇಲೆ ಗರಂ ಆದ ಸಿಎಂ ಸಿದ್ದರಾಮಯ್ಯ.. ಯಾಕೆ ಗೊತ್ತಾ..?

ಆಸ್ತಿ ಬರೆಯಿಸಿಕೊಂಡು ತಾಯಿಗೆ ಮೋಸ ಮಾಡಿದ ಮಗ: ಸಿಎಂಗೆ ದೂರು

- Advertisement -

Latest Posts

Don't Miss