Thursday, June 19, 2025

Latest Posts

‘KMF ಅಡಾ ಇಡೋ ಕಾಲ ಬಂದಿದೆ. ಖಾಸಗಿಯವರಿಗೆ ಅದನ್ನು ಕೊಡುವ ಸನ್ನಿವೇಶ ಬರ್ತಾ ಇದೆ’

- Advertisement -

Hassan News: ಹಾಸನ: ಹಾಸನದ ಪ್ರವಾಸಿ ಮಂದಿರದಲ್ಲಿ ಮಾಜಿ ಸಚಿವ ರೇವಣ್ಣ, ಶಾಸಕ ಬಾಲಕೃಷ್ಣ ಜಂಟಿ ಸುದ್ದಿಗೋಷ್ಠಿ ನಡೆಸಿದ್ದು, ಇಸ್ರೇಲ್- ಪ್ಯಾಲಿಸ್ಟೈನ್ ಯುದ್ಧದ ಬಗ್ಗೆ ರೇವಣ್ಣ ಪ್ರತಿಕ್ರಿಯಿಸಿದ್ದು, ತಾಯ್ನಾಡಿಗೆ ಕನ್ನಡಿಗರನ್ನ ಕರೆತರುವಂತೆ  ಮಾಜಿ ಸಚಿವ ರೇವಣ್ಣ ಒತ್ತಾಯಿಸಿದ್ದಾರೆ.

ಇಸ್ರೇಲ್ ನಲ್ಲಿ ನಮ್ಮ ಜಿಲ್ಲೆಯ 20 ಕುಟುಂಬ ಸಿಲುಕಿದ್ದಾರೆ. ಇಸ್ರೇಲ್ ನಲ್ಲಿ ಭಾರತದ 2000 ಸಾವಿರ ಕುಟುಂಬ ಕೆಲಸ ಮಾಡುತ್ತಿದ್ದು, ಕೇಂದ್ರ ಹಾಗೂ ರಾಜ್ಯ ಸರ್ಕಾರ ಗಮನ ಹರಿಸಿ ವಾಪಾಸ್ ಕರೆಸಬೇಕು. ಕೂಡಲೇ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರ ಅ ಕುಟುಂಬಗಳ ನಮ್ಮ ತಾಯ್ನಾಡಿಗೆ  ಮರಳಿ ಕರೆತರಲು, ಇಡೀ ನಮ್ಮ ರಾಜ್ಯದ ಪ್ರಜೆಗಳ ರಕ್ಷಣೆ ಮಾಡೋದು ಅವರ ರಾಜ್ಯ ಸರಕಾರದ ಜವಾಬ್ಧಾರಿ ಎಂದು ಹೇಳಿದ್ದಾರೆ.

ಇನ್ನು ಕೆಎಂಎಫ್‌ ವಿರುದ್ಧ ವಾಗ್ದಾಳಿ ನಡೆಸಿರುವ ರೇವಣ್ಣ, ಬೆಳೆ ಸಮಸ್ಯೆ, ನೀರಿನ ಸಮಸ್ಯೆ, ಬರಗಾಲ ಸಮಸ್ಯೆ ಕುರಿತಂತೆ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ. ಕರ್ನಾಟಕ ಹಾಲು ಮಹಾಮಂಡಳಿ ಅಂತ ಇದೆ.  ಅದು ಇವತ್ತು ರಾಜ್ಯದ ರೈತರ ಹಿತ ಕಾಪಾಡ್ತಾ ಇಲ್ಲ. ರೈತರ ಲೂಟಿ ಮಾಡುವ ಕಾರ್ಯಕ್ರಮ ನಡೀತಾ ಇದೆ.

ನೇರವಾಗಿ ರೈತರ ಬಳಿ ಖರೀದಿ ಮಾಡೋಕೆ ಏನ್ ರೋಗ, ರೆವೆನ್ಯೂ ಮಿನಿಸ್ಟರ್ 7 ತಾಲೂಕನ್ನು ಬರಗಾಲ ಅಂತ ಘೋಷಣೆ ಮಾಡ್ತೀವಿ ಅಂತ ಹೇಳಿದ್ರು..? ಇವರು ಬಡವರ ಬಗ್ಗೆ ಕರುಣೆ ತೋರಬೇಕು ಹೊರತು ಯಾರೋ ಮೂರೂ ಜನ ಕುಟುಂಬಕ್ಕೆ ಅಲ್ಲ. Kmf ಅಡ ಇಡೋ ಕಾಲ ಬಂದಿದೆ. ಸದ್ಯದಲ್ಲೇ kmf ಮುಳುಗಿಸಿ ಖಾಸಗಿ ಅವರ ಹಿಡಿತಕ್ಕೆ ಕೊಡೋ ಸನ್ನಿವೇಶ ಬರ್ತಾ ಇದೆ. ದೇವೇಗೌಡರು ಪ್ರಧಾನಿಯಾಗಿದ್ದಾಗ ಬೆಂಗಳೂರಿಗೆ  ಮೆಗಾ ಡೈರಿ ಮಾಡಿ ಕೊಟ್ರು. ಮುಖ್ಯಮಂತ್ರಿಗಳು ಅವರಿಗೆ ಗೊತ್ತು ಇದ್ದೆ.. ಇದನ್ನ ಕಳ್ಳರ ತಪ್ಪಿಸೋದಾಕ್ಕೆ ದಯಮಾಡಿ ಮುಖ್ಯಮಂತ್ರಿಗಳು ಗಮನ ಹರಿಸಬೇಕು ಎಂದು ರೇವಣ್ಣ ಮನವಿ ಮಾಡಿದ್ದಾರೆ.

ಸರ್ಕಾರ ಬಂದು ಐದು ನಿಮಿಷಕ್ಕೆ ಕೊಬ್ಬರಿ 15000 ಮಾಡ್ತೀನಿ ಅಂದ್ರು . ದೇವೇಗೌಡರು ಕೆರೆದುಕೊಂಡು ದೆಹಲಿಗೆ ಹೋಗಬೇಕು ಆಗಬೇಕು ಆಗುತ್ತೆ. ಗ್ಯಾರಂಟಿ ಮಾಡಿ ಬಿಟ್ಟು 2 ಗಂಟೆ ಕರೆಂಟ್ ಇಲ್ಲ. ಜೋಳ 2 ಸಾವಿರ ದಿಂದ 3 ಸಾವಿರ ಮಾಡಿ ನೇರವಾಗಿ ಖರೀದಿ ಮಾಡ್ಬೇಕು . 7 ವಿಧಾನ ಸಭಾ ಕ್ಷೇತ್ರವನ್ನು ಬರಗಾಲ ಅಂತ ಘೋಷಣೆ ಮಾಡಬೇಕು. ಕಾವೇರಿಯನ್ನು ತಮಿಳುನಾಡಿಗೆ ಅಡ ಇಟ್ಟವರೆ. ಮೂರೂ ನಾಲ್ಕು ದಿನ ಟೈಂ ಕೊಟ್ಟಿದಿನಿ kmf ಎಂ.ಡಿ ದಯವಿಟ್ಟು ಕಣ್ಣು ಬಿಡಿ ರೈತರ ಕಡೆ ಗಮನ ಕೊಡಿ ಎಂದು ರೇವಣ್ಣ ಹೇಳಿದ್ದಾರೆ.

ವಾಣಿಜ್ಯನಗರಿಯಲ್ಲಿ 21ದಿನದ ಗಣಪತಿಗೆ ವಿದಾಯ: ಸಂಭ್ರಮಿಸಿದ ಯುವಕರು..!

ಬಾಲಕಿಯ ವಿದ್ಯಾಭ್ಯಾಸಕ್ಕೆ ನೆರವಾದ ಖ್ಯಾತ ಕ್ರಿಕೇಟಿಗ ಕೆ.ಎಲ್.ರಾಹುಲ್

ಕಲಘಟಗಿ, ಅಳ್ನಾವರ, ಅಣ್ಣಿಗೇರಿ “ಬರ ತಾಲೂಕು” ಎಂದು ಘೋಷಣೆ: ಸಚಿವ ಸಂತೋಷ್ ಲಾಡ್ ಯಶಸ್ವಿ

- Advertisement -

Latest Posts

Don't Miss