Friday, June 20, 2025

Latest Posts

‘ಬಿಜೆಪಿ ಸಚಿವರ ಸರ್ಕಾರದ ನಡೆ ಹೇಗಿತ್ತು ಅಂತ ನಾನು ಹೇಳಬೇಕಾದ ಅಗತ್ಯವಿಲ್ಲ’

- Advertisement -

Kolar News: ಕೋಲಾರ: ಕೋಲಾರದ ಕೆಎಸ್ಆರ್ ಟಿಸಿ ಬಸ್ ನಿಲ್ದಾಣದಲ್ಲಿ ಚಾಲನೆ ಬಳಿಕ ಉಸ್ತುವಾರಿ ಸಚಿವ ಬಿಎಸ್ ಸುರೇಶ್ ಮಾತನಾಡಿದ್ದು, ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದ ಶಕ್ತಿ ಯೋಜನೆ . ಕಾಂಗ್ರೆಸ್ ಪಕ್ಷದಲ್ಲಿ ಯಾವುದೇ ಒತ್ತಡ ಇಲ್ಲ, ನಮ್ಮದು ಬಿಜೆಪಿ ಅಲ್ಲ ಎಂದಿದ್ದಾರೆ .

ಅಲ್ಲದೇ, ಸ್ಥಳೀಯ ಶಾಸಕರ ಆಧಾರದ ಮೇಲೆ ಉಸ್ತುವಾರಿ ಕೊಟ್ಟಿದ್ದಾರೆ.  ಹಗಲು ರಾತ್ರಿ ಕಷ್ಟ ಪಟ್ಟು ಅಭಿವೃದ್ಧಿ ಮಾಡುತ್ತೇವೆ. ತ135 ಶಾಸಕರಲ್ಲಿ ಎಲ್ಲರೂ ಸಿದ್ದರಾಮಯ್ಯ ಆಪ್ತರೇ… ಅದರಲ್ಲಿ ನಾನೂ ಒಬ್ಬ.  ಶಾಸಕರು ಹೇಳಿದಂತೆ ಕೋಲಾರ ಜಿಲ್ಲೆ ಅಭಿವೃದ್ಧಿ ಮಾಡುವೆ ಎಂದು ಸುರೇಶ್ ಹೇಳಿದ್ದಾರೆ.

ನಾಳೆ ಮಧ್ಯಾಹ್ನ ವಿಧಾನಸೌಧ ಕಚೇರಿಯಲ್ಲಿ ಕೋಲಾರ ಶಾಸಕರ ಜೊತೆ ಚರ್ಚೆ ನಡೆಯಲಿದೆ. ನೀರಾವರಿ ಯೋಜನೆ ಸೇರಿದಂತೆ ಹಲವು ಅಭಿವೃದ್ಧಿ ಕೆಲಸಗಳ ನಿರೀಕ್ಷೆ ಮಾಡಬಹುದು. ಜಿಲ್ಲೆಯಲ್ಲಿ ಕೊರತೆಗಳನ್ನು ನೀಗಿಸುವ ಕೆಲಸ ಮಾಡುತ್ತೇನೆ. ಜಾತಿ ಜನಾಂಗದ ಇತಿ ಮಿತಿ ಇಲ್ಲದೆ ಕೆಲಸ ನಿರ್ವಹಿಸುತ್ತೇನೆ. ಬಿಜೆಪಿ ಸಚಿವರ ಸರ್ಕಾರದ ನಡೆ ಹೇಗಿತ್ತು ಅಂತ ನಾನು ಹೇಳಬೇಕಾದ ಅಗತ್ಯವಿಲ್ಲ.  ರಾಜ್ಯದಲ್ಲಿ ಅಭಿವೃದ್ಧಿ ಕುಂಠಿತ ಆಗಿತ್ತು, ಅದನ್ನು ಅಭಿವೃದ್ಧಿ ಪಡಿಸುವ ಕೆಲಸ ಮಾಡ್ತೇವೆ. ಆರೂ ಜನರ ಶಾಸಕರಿಗೆ ನಾವು ಆಹ್ವಾನಿಸಿದ್ದೇವೆ.ಆದ್ರೆ ಅವರ ಕ್ಷೇತ್ರಗಳಲ್ಲೂ ಚಾಲನೆ ನೀಡುವುದರಿಂದ ಅವರ್ಯಾರು ಇಲ್ಲಿಗೆ ಬಂದಿಲ್ಲ ಎಂದಿದ್ದಾರೆ.

ಇನ್ನು ವಿಧ್ಯುತ್ ದರ ಹೆಚ್ಚಳದ ಬಗ್ಗೆ ಮಾತನಾಡಿದ ಸುರೇಶ್, ವಿದ್ಯುತ್ ಬಿಲ್ ಹೆಚ್ಚಳ ಹಿಂದಿನ ಸರ್ಕಾರ ಮಾಡಿರುವುದು. ನಾವು ವಿದ್ಯುತ್ ಬೆಲೆ ಹೆಚ್ಚಳ ಮಾಡಿಲ್ಲ.  ಮುಂದಿನ ತಿಂಗಳಿಂದ ಕರೆಂಟ್ ಬಿಲ್ ನಾವೇ ಕಟ್ಟುತ್ತೇವೆ. ಐದು ಯೋಜನೆಗಳನ್ನು ನಾವು ಸಮರ್ಪಕವಾಗಿ ಜಾರಿಗೆ ತರುತ್ತೇವೆ. ಡಿಸಿಸಿ ಬ್ಯಾಂಕ್ ಸಾಲಮನ್ನಾ ಬಗ್ಗೆ ಸಿದ್ದರಾಮಯ್ಯ ಅವರನ್ನೇ ಕೇಳಬೇಕು. ಸಾಲಮನ್ನಾ ಬಗ್ಗೆ ನನಗೆ ಯಾವುದೇ ಸಂಬಂಧ ಇಲ್ಲ. ಐದು ಜನಪ್ರಿಯ ಯೋಜನೆಗಳನ್ನು ಸರ್ಕಾರಕ್ಕೆ ಹೊರೆ ಬೀಳದ ಹಾಗೆ ನಿರ್ವಹಣೆ ಮಾಡುತ್ತೇವೆ ಎಂದು ಸಚಿವ ಸುರೇಶ್ ಹೇಳಿದ್ದಾರೆ.

‘ಕೋಮುಸಂಘರ್ಷದ ಮಾತು ಬಿಟ್ಟು, ಅಭಿವೃದ್ಧಿ ಕಡೆ ಗಮನ ಕೊಡಲಿ’

420 ಸರಕಾರ ಎನಿಸಿಕೊಳ್ಳಲು ನಿಮಗೆ ಆಸೆ ಇತ್ತೇ?: ಸಿಎಂಗೆ ಛಲವಾದಿ ನಾರಾಯಣಸ್ವಾಮಿ ಪ್ರಶ್ನೆ

‘ಎಂಜಿನಿಯರ್ ಸೂಲಿಬೆಲೆ ಬಗ್ಗೆ, ಪಿಯುಸಿ ಫೇಲ್‌ ಪ್ರಿಯಾಂಕ್ ಖರ್ಗೆ ಮಾತನಾಡುವುದು ವಿಪರ್ಯಾಸ’

- Advertisement -

Latest Posts

Don't Miss