Sunday, September 8, 2024

Latest Posts

ಹೆಣ್ಣು ಮಕ್ಕಳು ಮನೆಯಲ್ಲಿ ಅಪ್ಪಿ ತಪ್ಪಿಯೂ ಈ ತಪ್ಪುಗಳನ್ನು ಮಾಡಬೇಡಿ…!

- Advertisement -

Devotional tips:

ಆಚಾರಗಳು ಪ್ರತಿಯೊಬ್ಬರ ಮನೆಯಲ್ಲೂ ಇರುತ್ತದೆ , ಆಚಾರ ವಿಚಾರಗಳಲ್ಲಿ ತಿಳಿದೋ ತಿಳಿಯದೆಯೋ ಎಲ್ಲರು ಕೆಲವೊಂದು ತಪ್ಪುಗಳನ್ನು ಮಾಡುತ್ತಾರೆ , ತಪ್ಪುಗಳನ್ನು ಮಾಡುವುದರಿಂದ ಮನೆಯಲ್ಲಿ ಮಹಾಲಕ್ಷ್ಮಿ ನೆಲೆಸುವುದಿಲ್ಲ ಹಾಗು ದರಿದ್ರ ಲಕ್ಷ್ಮಿ ಮನೆಗೆ ಪ್ರವೇಶ ಮಾಡುತ್ತಾಳೆ ,ನಿಮ್ಮ ಕಷ್ಟಗಳಿಗೆ ಖಂಡಿತವಾಗಿ ನೀವೇ ಕಾರಣವಾಗುತ್ತೀರಾ , ತಪ್ಪುಗಳನ್ನು ಸರಿ ಮಾಡಿಕೊಂಡು ನೋಡಿ ನಿಮ್ಮ ಕುಟುಂಬ ಬಹಳ ಸಂತೋಷದಿಂದ ಇರುತ್ತದೆ .

ಮನೆಯಲ್ಲಿ ಸ್ತ್ರೀಯು ನಗುನಗುತ್ತಾ ಲವಲವಿಕೆಯಿಂ ಓಡಾಡಿಕೊಂಡು ಇದ್ದರೆ ಮಹಾಲಕ್ಷ್ಮೀದೇವಿಯ ಪ್ರವೇಶವಾಗುತ್ತದೆ .ಕೆಲವೊಂದು ನಿಯಮಗಳನ್ನು ಪಾಲಿಸಿದರೆ ಖಂಡಿತ ನಿಮ್ಮ ಮನೆ ಸುಖ ಶಾಂತಿ ನೆಮದ್ದಿಯಿಂದ ಇರುತ್ತದೆ .

ಮೊದಲನೆಯದಾಗಿ: ಯಾವುದೇ ಕಾರಣಕ್ಕೂ ಎಂಥಹ ಸಂದರ್ಭದಲ್ಲಿಯು ನೀವು ಸೂರ್ಯ ಉದಯಿಸುವ ಮುಂಚೆ ಅಥವಾ ಸೂರ್ಯಾಸ್ತದ ಸಮಯದಲ್ಲಿ ಬಟ್ಟೆಗಳನ್ನೂ ಗೆಯಬಾರದು ಏಕೆಂದರೆ ಸಮಯದಲ್ಲಿ ಮನೆಗೆ ಮಹಾಲಕ್ಷ್ಮಿಯ ಪ್ರವೇಶವಿರುತ್ತದೆ .

ಎರಡನೆಯದಾಗಿ : ಕೆಲವು ಹೆಣ್ಣು ಮಕಳಲ್ಲಿ ಉಗುರನ್ನು ಬೆಳೆಸುವ ಅಭ್ಯಾಸವಿರುತ್ತದೆ ಹಾಗು ಉಗುರು ಕಚ್ಚುವ ಅಬ್ಯಾಸವಿರುತ್ತದೆ ಇದರಿಂದ ಹೆಣ್ಣು ಮಕ್ಕಳಲ್ಲಿ ಕೋಪ ಹೆಚ್ಚಾಗಿ ಬರುತ್ತದೆ ,ಹಾಗು ದರಿದ್ರ ಲಕ್ಷ್ಮಿ ಮನೆಗೆ ಪ್ರವೇಶ ಮಾಡುತ್ತಾಳೆ , ಇದರಿಂದ ಹಣಕಾಸಿನ ತೊಂದರೆ ಹಾಗು ಅರೋಗ್ಯ ತೊಂದರೆ ಬರುವ ಸಾಧ್ಯತೆಗಳು ಹೆಚ್ಚಾಗಿರುತ್ತದ್ದೆ .ಆದಕಾರಣ ಉಗುರನ್ನು ಉದ್ದ ಉದ್ದ ಬೆಳೆಸಬಾರದು ,ತಕ್ಷಣ ತೊಂದರೆ ಯಾಗದಿದ್ದರು ಮುಂದಿನ ದಿನಗಳಲ್ಲಿ ತೊಂದರೆ ಯಾಗುವ ಸಾಧ್ಯತೆಗಳು ಹೆಚ್ಚಾಗಿರುತ್ತದೆ .

ಮೂರನೆಯದಾಗಿ :ಮನೆಯಲ್ಲಿ ಹೆಚ್ಚು ಸಮಯ ಹೆಣ್ಣು ಮಕ್ಕಳು ನಿದ್ರಿಸಿದರೆ ಮನೆಯಲ್ಲಿ ಮಹಾಲಕ್ಷ್ಮೀದೇವಿ ನೆಲೆಸುವುದಿಲ್ಲ ,ಹಾಗು ಸಮಸ್ಯೆಗಳು ಒಂದೊಂದೇ ಎದುರಾಗುತ್ತಾ ಹೋಗುತ್ತದೆ ,ಯಾವುದೇ ಕೆಲಸಕ್ಕೆ ಕೈ ಹಾಕಿದರೂ ಕೂಡ ಯಶಸ್ಸು ಸಿಗುವುದಿಲ್ಲ ,ಕೆಲ ಹೆಣ್ಣು ಮಕ್ಕಳು ಮುಂಜಾನೆ ಬೇಗ ಳುವುದಿಲ್ಲ ಹಾಗು ಇನ್ನು ಕೆಲವರು ಹಗಲಲ್ಲಿ ಹೆಚ್ಚು ನಿದ್ದೆ ಮಾಡುತ್ತಾರೆ ತರಹದ ತಪ್ಪುಗಳನ್ನು ಎಂದಿಗೂ ಮಾಡಬಾರದು .

ನಾಲ್ಕನೆಯದಾಗಿ :ಮಂಗಳವಾರ ಹಾಗು ಶುಕ್ರವಾರ ಹೆಣ್ಣು ಮಕ್ಕಳು ಮನೆಯಲ್ಲಿ ಕಣ್ಣೀರನ್ನು ಹಾಕಬಾರದು ,ಕೆಲವರು ಮಾನಸಿಕವಾಗಿ ಕೆಲವೊಂದು ನೋವುಗಳನ್ನು ಜೀವನದಲ್ಲಿ ಅನುಭವಿಸಿ ,ಯಾವಾಗಲು ಕಣ್ಣೀರನ್ನು ಹಾಕುತ್ತಿರುತ್ತಾರೆ ರೀತಿ ಮಾಡುವುದರಿಂದ ಮನೆ ಏಳಿಗೆಯಾಗುವುದಿಲ್ಲ ,ಮನೆಯ ಸದಸ್ಯರು ಯಾವುದೇ ಕೆಲಸಕ್ಕೆ ಹೋದರೂ ಯಾವ ಕೆಲಸದಲ್ಲಿಯೂ ಯಶಸ್ಸು ಸಿಗುವುದಿಲ್ಲ ,ಮನೆಯಲ್ಲಿ ಹೆಣ್ಣು ಮಕ್ಕಳು ಯಾವಾಗಲು ನಗುನಗುತ್ತಾ ಇರಬೇಕು ,ಹಾಗು ಪ್ಲಾಸ್ಟಿಕ್ ಹೂವುಗಳನ್ನು ದೇವರಿಗೆ ಮುಡಿಸಬಾರದು ಹಾಗು ತಪ್ಪದೆ ರಂಗೋಲಿಯನ್ನು ಹಾಕಬೇಕು ಇದರಿಂದ ಮಹಾಲಕ್ಷ್ಮಿ ದೇವಿಯ ಆಶೀರ್ವಾದ ಲಭಿಸುತ್ತದೆ .

ಎಷ್ಟೋ ಜನರ ಮನೆಯಲ್ಲಿ ತುಳಸಿ ಗಿಡವನ್ನು ಇಟ್ಟಿರುವುದಿಲ್ಲ ತುಳಸಿ ಪೂಜೆಯನ್ನು ಮಾಡುವುದಿಲ್ಲ ,ಆದರೆ ತಪ್ಪದೆ ಪ್ರತಿ ಮುತೈದೆಯರು ತುಳಸಿ ಗಿಡವನ್ನು ಪೂಜಿಸಬೇಕು ,ತುಳಸಿ ಗಿಡವು ಮನೆಗೆ ರಕ್ಷಣೆಯನ್ನು ಕಲ್ಪಿಸುತ್ತದೆ ಹಾಗು ಮನೆಯ ಏಳಿಗೆ ಯಾವರೀತಿ ಇರುತ್ತದೆ ಎಂದು ತುಳಸಿ ಗಿಡ ಸೂಚನೆ ನೀಡುತ್ತದೆ .

ಕೂದಲು ಕಟ್ಟದೆ ಅಥವಾ ಒದ್ದೆಯಾದ ಕೂದಲಿನಿಂದ ಪೂಜೆ ಮಾಡಬಾರದು ,ಪುಣ್ಯ ಕ್ಷೇತ್ರಗಳಲ್ಲಿ ನದಿಯಲ್ಲಿ ಸ್ನಾನ ಮಾಡಿ ಒದ್ದೆ ಬಟ್ಟೆಯಲ್ಲಿ ಹಾಗು ಒದ್ದೆ ಕೂದಲಿನಲ್ಲಿ ಹೋಗಬಹುದು ಅದರಿಂದ ನಿಮಗೆ ವಿಶೇಷವಾದ ಫಲ ಸಿಗುತ್ತದೆ.ಆದರೆ ಮನೆಯಲ್ಲಿ ಮಾತ್ರ ಕೂದಲು ಒಣಗಿದ ನಂತರ ಕೂದಲನ್ನು ಕಟ್ಟಿ ಪೂಜೆ ಮಾಡಬೇಕು ,ತುಂಬಾ ಜನರು ತಲೆ ಸ್ನಾನ ಆದ ನಂತರ ತಲೆಗೆ ಟವಲನ್ನು ಕಟ್ಟಿ ಪೂಜೆ ಮಾಡುತ್ತಾರೆ, ಹೀಗೆ ಮಾಡಿದರೆ ಪೂಜೆಯ ಫಲ ನಿಮಗೆ ಸಿಗುವುದಿಲ್ಲ ,ದೇವರಿಗೆ ಭಕ್ತಿಯಿಂ ನಾವು ಪೂಜಿಸಬೇಕು ನಾವು ಸ್ನಾನ ಮಾಡುವುದು ನಮ್ಮ ಮೈಲಿಗೆಯನ್ನು ಕಳೆದು ಕೊಳ್ಳುವುದಕ್ಕೆ ಆದ್ದರಿಂದ ಒದ್ದೆಯಾದ ತಲೆ ಕೂದಲನಿಂದ ಪೂಜೆಯನ್ನು ಮಾಡಬಾರದು ಹೀಗೆ ಮಾಡಿದರೆ ಪೂಜೆ ಫಲ ಕೊಡುವುದಿಲ್ಲ ಇಂತಹ ತಪ್ಪುಗಳನ್ನು ನಿವು ಯಾವುದೇ ಕಾರಣಕ್ಕೂ ಮಾಡಬಾರದು ,ಮಾಡಿದರೆ ಮನೆಯ ಏಳಿಗೆಯಾಗುವುದಿಲ್ಲ ಹಾಗು ಮನೆಯಲ್ಲಿ ಸಮಸ್ಯೆಗಳು ಉಂಟಾಗುತ್ತದೆ .

ನಿಮ್ಮ ಎಲ್ಲಾ ಸಮಸ್ಯೆಗಳಿಗೆ ಅರಳಿ ಮರದಲ್ಲಿದೆ ಪರಿಹಾರ…!

ಯಮಧರ್ಮರಾಜನನ್ನೇ ಹಿಮ್ಮೆಟ್ಟಿಸಿದ ಶಕ್ತಿಯುತವಾದ ಮಂತ್ರ..!

ನಿಮ್ಮ ಮನೆಯಲ್ಲಿ ಸದಾ ಲಕ್ಷ್ಮೀ ನೆಲೆಸಬೇಕಾದರೆ ಹೀಗೆ ಮಾಡಿ :

 

- Advertisement -

Latest Posts

Don't Miss