Sunday, June 22, 2025

Latest Posts

ಯಮಧರ್ಮರಾಜನನ್ನೇ ಹಿಮ್ಮೆಟ್ಟಿಸಿದ ಶಕ್ತಿಯುತವಾದ ಮಂತ್ರ..!

- Advertisement -

Devotional story:

ಸಾಮಾನ್ಯವಾಗಿ ಮನುಷ್ಯರಿಗೆ ಸಾವಿನ ಭಯವಿರುತ್ತದೆ ದರೆ ಹುಟ್ಟು ಸಾವು ಎನ್ನುವುದು ಬ್ರಹ್ಮ ಮೊದಲೇ ನಿರ್ಣಯಿಸಿರುತ್ತಾರೆ,ದರೆ ಕೆಲವೊಂದು ಮಂತ್ರಗಳಿಗೆ ಸಾವನ್ನು ಜಯಿಸುವ ಶಕ್ತಿ ಇರುತ್ತದೆ. ಇದರ ಕುರಿತಾಗಿ ನಾವು ಪುರಾಣಗಳಲ್ಲಿ ಹಲವಾರು ಕುರುಹುಗಳನ್ನು ಕಾಣಬಹುದು ,ಹೌದು ಮಂತ್ರವೇ ಮಹಾ ಮೃತ್ಯು೦ಜಯ ಮಂತ್ರ , ಮಂತ್ರದಿಂದ ಅಕಾಲಿಕ ಮರಣದಿಂದ ಪಾರಾಗಬಹುದು ಮಂತ್ರವು ಭಗವಾನ್ಶಿವನಿಗೆ ಸಂಬಂಧಿಸಿದ ಶಕ್ತಿ ಯುತ ಮಂತ್ರವಾಗಿದೆ. ಗುಣಪಡಿಸಲಾಗದ ಕಾಯಿಲೆಗಳನ್ನು ಗುಣಪಡಿಸಲು ಮಹಾಮೃತ್ಯುಂಜಯ ಮಂತ್ರವನ್ನು ಜಪಿಸುವ ಬಗ್ಗೆ ಧರ್ಮಗ್ರಂಥಗಳಲ್ಲಿ ಹಾಗು ಪುರಾಣಗಳಲ್ಲಿ ಉಲ್ಲೇಖವಿದೆ ಯಮಧರ್ಮ ರಾಜನ್ನು ಓಡಿಸಿ ಸಾವನ್ನು ಗೆಲ್ಲುವ ಶಕ್ತಿ ಮಂತ್ರಕ್ಕಿದೆ .ಹಾಗಾದರೆ ಮಹಾಮೃತ್ಯುಜಯ ಮಂತ್ರದ ವಿಶೇಷತೆಗಳನ್ನು ತಿಳಿದು ಕೊಳ್ಳೋಣ ಬನ್ನಿ

ಮಂತ್ರ :
ಓಂ ತ್ರ್ಯಂಬಕಂ ಯಜಾಮಹೆ ಸುಗಂಧಿಂ ಪುಷ್ಟಿವರ್ಧನಂ
ಉರ್ವಾರುಕಮಿವ ಬಂಧನಾನ್ಮೃತ್ಯೋರ್ಮುಕ್ಷೀಯ ಮಾಮೃತಾತ್.

ಮಹಾಮೃತ್ಯುಜಯ ಮಂತ್ರವನ್ನು ಮಾರ್ಕಂಡೇಯ ಸ್ತುತಿಸಿದರು ಅಲ್ಪಾಯುಷಿ ಯಾದ ಮಾರ್ಕಂಡೇಯ ಮಂತ್ರವನ್ನು ಸ್ತುತಿಸಿ ಪೂರ್ಣಾಯುಷ್ಯ ಪಡೆದನು ಎಂಬ ಉಲ್ಲೇಖ ವಿದೇ .ಹಾಗೆಯೆ ಮಂತ್ರವನ್ನು ಸ್ತುತಿಸಿ ಸತಿದೇವಿ ದಕ್ಷಪ್ರಜಾಪತಿಯ ಶಾಪದಿಂದ ಚಂದ್ರನನ್ನು ಸಾವಿನಿಂದ ಪಾರುಮಾಡಿದಳು ,ಮಹಾಮೃತ್ಯುಂಜಯ ಮಂತ್ರವನ್ನು ನಿರಂತರವಾಗಿ ಜಪಿಸುವ ವ್ಯಕ್ತಿಯನ್ನು ಯಮಲೋಕಕ್ಕೆ ಕರೆದುಕೊಂಡು ಹೋಗಲು ಯಮರಾಜನು ಕೂಡ ಯೋಚಿಸಬೇಕು ಎಂದು ಶಿವ ಪುರಾಣದಲ್ಲಿ ಹೇಳಲಾಗಿದೆ. ಅಕಾಲಿಕ ಮರಣದ ಭಯವನ್ನು ಹೊಂದಿದ್ದರೆ ಅಥವಾ ದೀರ್ಘಕಾಲದ ಆರೋಗ್ಯದ ಸಮಸ್ಯೆಗಳಿಂದ ಬಳಲುತ್ತಿದ್ದರೆ ನೀವು ತಪ್ಪದೇ ಮಹಾಮೃತ್ಯುಂಜಯ ಮಂತ್ರವನ್ನು ಪಠಿಸಬೇಕೆಂದು ಶಿವ ಪುರಾಣದಲ್ಲಿ ಉಲ್ಲೇಖಿಸಲಾಗಿದೆ

ಆದರೆ ಮಹಾಮೃತ್ಯುಂಜಯ ಮಂತ್ರವನ್ನು ಪಠಿಸುವಾಗ ಕೆಲವೊಂದು ನಿಯಮಗಳನ್ನು ಅನುಸರಿಸಬೇಕು ಮಂತ್ರವನ್ನು ಪಠಿಸುವ ಸಮಯದಲ್ಲಿ ತಪ್ಪುಗಳನ್ನು ಮಾಡದೇ ಎಚ್ಚರ ವಹಿಸಿ .ಮಹಾಮೃತ್ಯುಜಯ ಮಂತ್ರವನ್ನು ಯಾವಾಗ ಪಠಿಸಬೇಕು..?ಯಾರು ಪಠಿಸಬೇಕು..? ಯಾವಸಮಯದಲ್ಲಿ ಪಠಿಸಿದರೆ ಸೂಕ್ತ

ಮುಂಜಾನೆ ಸ್ನಾನಾದಿಕಾರ್ಯಗಳನ್ನು ಮುಗಿಸಿ ಮಂತ್ರವನ್ನು ಜಪಿಸುವ ಸ್ಥಳದಲ್ಲಿ ನಿಮ್ಮ ಮುಂದೆ ಶಿವನ ವಿಗ್ರಹ, ಫೋಟೋ ಅಥವಾ ಮಹಾಮೃತ್ಯುಂಜಯ ಯಂತ್ರವನ್ನಿಟ್ಟು ಜಪಿಸಬೇಕು. ಧಾರ್ಮಿಕ ಗ್ರಂಥಗಳ ಪ್ರಕಾರ ಮುಂಜಾನೆ 2 ರಿಂದ 4 ಗಂಟೆಯ ಸಮಯದಲ್ಲಿ ಮಂತ್ರವನ್ನು ಪಠಿಸುವುದು ಅತ್ಯುತ್ತಮ ವಾಗಿರುತ್ತದೆ .ನಿಯಮಗಳ ಪ್ರಕಾರ ಮಹಾಮೃತ್ಯುಂಜಯ ಮಂತ್ರವನ್ನು ಸರಿಯಾದ ಕ್ರಮದಲ್ಲಿ ಪಠಿಸದಿದ್ದರೆ ಮಂತ್ರವನ್ನು ಪಠಿಸಿಯೂ ಪ್ರಯೋಜನವಿರುವುದಿಲ್ಲ ಹಾಗು ತಪ್ಪಾಗಿ ಮಂತ್ರವನ್ನು ಪಠಿಸಬಾರದು ,ಗ್ರಹಗಳ ದೋಷವಿದ್ದವರು ಮಹಾಮೃತ್ಯುಂಜಯ ಮಂತ್ರವನ್ನು ಪಠಿಸಿದರೆ ಗ್ರಹದೋಷಗಳ ಪರಿಹಾರ ವಾಗುತ್ತದೆ .ಆದರೆ ಸಮಯದಲ್ಲಿ ಸಾಧ್ಯವಾಗದಿದ್ದರೆ ಸೂರ್ಯಾಸ್ತದ ನಂತರ ಸ್ನಾನದ ಕಾರ್ಯಗಳನ್ನು ಮುಗಿಸಿ ಮಂತ್ರವನ್ನು ಪಠಿಸಬಹುದು ಹಾಗು 108 ಸಲ ಮಂತ್ರವನ್ನು ಪಠಿಸಬೇಕು ಹಾಗೆಯೆ 40 ದಿನಗಳು ಸತತವಾಗಿ ಮಂತ್ರವನ್ನು ಪಠಿಸಿದರೆ ಖಂಡಿತವಾಗಿಯೂ ಪರಿಹಾರ ಸಿಗುವುದು.ಹಾಗು ರುದ್ರಾಕ್ಷಿಯನ್ನು ಹಿಡಿದು ಮಂತ್ರವನ್ನು ಕನಿಷ್ಟ 5 ಬಾರಿಯಾದರೂ ಜಪಿಸಬೇಕು. ಮುಖ್ಯವಾದ ವಿಷಯವೇನೆಂದರೆ ಮಹಾಮೃತ್ಯುಂಜಯ ಮಂತ್ರದ ಪಠಣಾ ಸಂಖ್ಯೆಯು ದಿನೆ ದಿನೆ ಹೆಚ್ಚಾಗುತ್ತಾ ಹೋಗಬೇಕು ಅಂದರೆ ಇಂದು ನೀವು 5 ಬಾರಿ ಮಹಾಮೃತ್ಯುಂಜಯ ಮಂತ್ರವನ್ನು ಜಪಿಸಿದರೆ ನಾಳೆ 6 ಬಾರಿ, ನಾಡಿದ್ದು 7 ಬಾರಿ ಅಥವಾ ಇದಕ್ಕೂ ಹೆಚ್ಚು ಬಾರಿ ಜಪಿಸಬೇಕು. ಜಪಿಸುವ ಸಂಖ್ಯೆಯನ್ನು ಎಂದಿಗೂ ಕಡಿಮೆ ಮಾಡಬಾರದು ಮಂತ್ರವನ್ನು ಪಠಿಸುವಾಗ ನಿಮ್ಮ ಮನಸ್ಸು ಕೇವಲ ಮಂತ್ರದ ಮೇಲೆ ಕೇಂದ್ರೀಕೃತವಾಗಿರಬೇಕು .ಮನಸ್ಸಿನಲ್ಲಿ ಬೇರೆ ಯಾವುದೇ ಚಿಂತೆಗಳಿರಬಾರದು ಹಾಗು ಸೋಮಾರಿತನ, ಉದಾಸೀನ ಇರಬಾರದು , ಮಾಂಸಾಹಾರವನ್ನು ಸೇವಿಸಿ ಮಹಾಮೃತ್ಯುಂಜಯ ಮಂತ್ರವನ್ನು ಪಠಿಸಬಾರದು.

ನೀವು ಕೂಡ ಆರೋಗ್ಯವಾಗಿ ದೀರ್ಘ ಆಯಸ್ಸನ್ನು ಪಡೆದುಕೊಳ್ಳಬೇಕದಾರೆ ಅಥವಾ ದೀರ್ಘಕಾಲದ ಅನಾರೋಗ್ಯದಿಂದ ಮುಕ್ತಿಯನ್ನು ಪಡೆಯಬೇಕಾದರೆ ಮಹಾಮೃತ್ಯುಂಜಯ ಮಂತ್ರವನ್ನು ಪಠಿಸಲು ಆರಂಭಿಸಿ.

ಸಾವಿರ ವರ್ಷ ಮೊಸಳೆಯ ಜೊತೆ ಗಜೇ೦ದ್ರನ ಕಾದಾಟ…!

ಗಾಯತ್ರಿ ಮಂತ್ರವನ್ನು ಹೀಗೆ ಪಠಿಸಿ ಅದೃಷ್ಟ ನಿಮ್ಮದಾಗಿಸಿ ಕೊಳ್ಳಿ

ಮಾಹಾ ಸುದರ್ಶನ ಚಕ್ರದ ಬಗ್ಗೆ ನಿಮಗೆಷ್ಟು ಗೊತ್ತು …?

 

- Advertisement -

Latest Posts

Don't Miss