Saturday, July 27, 2024

Latest Posts

ಮಲಯಾಳಂ ನಟ ಲಾಲೇಟ್ಟ ಸಿನಿಮಾಗೆ ನಿರ್ದೇಶನ ಮಾಡಲಿದ್ದಾರೆ ಚಂದನವನದ ನಿರ್ದೇಶಕ…!

- Advertisement -

Film News:

ಮೋಹನ್‌ಲಾಲ್‌ ಮಲಯಾಳಂ ಚಿತ್ರರಂಗದ ಸ್ಟಾರ್ ನಟರಲ್ಲಿ ಒಬ್ಬರು. ಸಾಲು ಸಾಲು ಸಿನಿಮಾಗಳಲ್ಲಿ ಸದಾ ಬ್ಯುಸಿ ಇರುವ ಈ ನಟ, ಈಗಲೂ ಬಾಕ್ಸ್ ಆಫೀಸ್‌ನಲ್ಲಿ ಕೋಟಿ ಕೋಟಿ ಕಮಾಯಿ ಮಾಡುವಂತಹ ಚಾರ್ಮ್‌ ಹೊಂದಿದ್ದಾರೆ. ಸದ್ಯ ಅವರೊಂದು ಹೊಸ ಸಿನಿಮಾ ಶುರು ಮಾಡಿದ್ದಾರೆ. ವಿಶೇಷವೆಂದರೆ, ಆ ಸಿನಿಮಾಗೆ ಕನ್ನಡದ ನಿರ್ದೇಶಕರೊಬ್ಬರು ಡೈರೆಕ್ಷನ್ ಮಾಡಲಿದ್ದಾರೆ.

ಹೌದು, ಸ್ಯಾಂಡಲ್‌ವುಡ್‌ನಲ್ಲಿ ಈಗಾಗಲೇ ‘ಅಧ್ಯಕ್ಷ’, ‘ರನ್ನ’, ‘ವಿಕ್ಟರಿ’, ‘ಪೊಗರು’ ಸಿನಿಮಾಗಳನ್ನು ಮಾಡಿ ಫೇಮಸ್ ಆಗಿರುವ ನಂದಕಿಶೋರ್ ಈಗ ಮಲಯಾಳಂ ಚಿತ್ರರಂಗಕ್ಕೆ ಕಾಲಿಟ್ಟಿದ್ದು, ಮೋಹನ್‌ಲಾಲ್‌ ಸಿನಿಮಾಗೆ ನಿರ್ದೇಶನ ಮಾಡುವ ಚಾನ್ಸ್ ಗಿಟ್ಟಿಸಿಕೊಂಡಿದ್ದಾರೆ. ‘ಹೌದು, ನಾನು ಮಲಯಾಳಂ ಸೂಪರ್ ಸ್ಟಾರ್ ಮೋಹನ್‌ಲಾಲ್ ಅವರ ಸಿನಿಮಾವನ್ನು ನಾನು ನಿರ್ದೇಶನ ಮಾಡುತ್ತಿದ್ದೇನೆ. ಇದೊಂದು ಪಕ್ಕಾ ಕಮರ್ಷಿಯಲ್ ಕಥೆ ಇರುವ ಸಿನಿಮಾ. ಮೋಹನ್‌ಲಾಲ್ ಅವರ ಪಾತ್ರಕ್ಕೆ ಸಾಕಷ್ಟು ಆಯಾಮಗಳಿರುತ್ತವೆ’ ಎಂದು ನಂದಕಿಶೋರ್ ತಿಳಿಸಿದ್ದಾರೆ.

2023 ಜುಲೈನಲ್ಲಿ ಶೂಟಿಂಗ್ ಶುರು
ಈ ಸಿನಿಮಾದ ಒಂದು ಮುಖ್ಯ ಪಾತ್ರಕ್ಕೆ ತೆಲುಗು ಚಿತ್ರರಂಗದ ಖ್ಯಾತ ನಟರೊಬ್ಬರಿಗೆ ಅಪ್ರೋಚ್ ನೀಡಲಾಗುತ್ತದೆಯಂತೆ. ಆದರೆ ಅವರು ಯಾರು ಅನ್ನೋದು ಮಾತ್ರ ಇನ್ನೂ ಬಹಿರಂಗಗೊಂಡಿಲ್ಲ. 2023ರ ಜುಲೈನಲ್ಲಿ ಈ ಸಿನಿಮಾದ ಶೂಟಿಂಗ್ ಆರಂಭಿಸುವುದಕ್ಕೆ ಚಿತ್ರತಂಡ ಪ್ಲ್ಯಾನ್ ಮಾಡಿಕೊಂಡಿದೆ. ಶೂಟಿಂಗ್ ಆರಂಭವಾದ ಮೇಲೆ ಇನ್ನಷ್ಟು ಮಾಹಿತಿಯನ್ನು ಚಿತ್ರತಂಡ ಹಂಚಿಕೊಳ್ಳಲಿದೆಯಂತೆ. ಸದ್ಯ ಈ ಸಿನಿಮಾಗೆ ‘ವೃಷಭ’ ಎಂದು ಶೀರ್ಷಿಕೆ ಇಡಲಾಗಿದೆ.

ಸಿನಿಮಾದ ಬಗ್ಗೆ ಎಕ್ಸೈಟ್ ಆಗಿರುವ ಮೋಹನ್ಲಾಲ್
ಇನ್ನು, ಈ ಸಿನಿಮಾದ ಬಗ್ಗೆ ಈಚೆಗಷ್ಟೇ ಮೋಹನ್‌ಲಾಲ್ ಅವರು ಸೋಶಿಯಲ್ ಮೀಡಿಯಾದಲ್ಲಿ ಮಾಹಿತಿ ಹಂಚಿಕೊಂಡಿದ್ದರು. ‘ಎವಿಸ್‌ ಸ್ಟುಡಿಯೋಸ್‌ನ ‘ವೃಷಭ’ ಸಿನಿಮಾವನ್ನು ಒಪ್ಪಿಕೊಂಡಿದ್ದೇನೆ. ನಂದಕಿಶೋರ್ ಇದರ ನಿರ್ದೇಶನ ಮಾಡಲಿದ್ದಾರೆ. ಅಭಿಷೇಕ್ ವ್ಯಾಸ್, ಪ್ರವೀರ್ ಸಿಂಗ್, ಶ್ಯಾಮ್ ಸುಂದರ್ ಇದರ ನಿರ್ಮಾಣ ಮಾಡಲಿದ್ದಾರೆ. ಈ ಪ್ರಾಜೆಕ್ಟ್‌ನ ಭಾಗವಾಗಿರುವುದಕ್ಕೆ ನಾನಂತೂ ತುಂಬ ಎಕ್ಸೈಟ್ ಆಗಿದ್ದೇನೆ. ಇದೊಂದು ಬಹುಭಾಷಾ ಸಿನಿಮಾವಾಗಿದ್ದು, ಆಕ್ಷನ್, ಎಮೋಷನ್ ಎಲ್ಲವೂ ಮಿಕ್ಸ್ ಆಗಿದೆ. ನಿಮ್ಮೆಲ್ಲರ ಆಶೀರ್ವಾದ ನಮಗೆ ಬೇಕು’ ಎಂದು ಬರೆದುಕೊಂಡಿದ್ದರು ಮೋಹನ್‌ಲಾಲ್‌.

 

ಹಾಗೆ ನಂದಕಿಶೋರ್ ಅವರು ಕೂಡ ಸಾಕಷ್ಟು ಬ್ಯುಸಿ ಇದ್ದಾರೆ. ನಿರ್ಮಾಪಕ ಕೆ. ಮಂಜು ಪುತ್ರ ಶ್ರೇಯಸ್ ಹಾಗೂ ರೀಷ್ಮಾ ನಾಣಯ್ಯ ನಟನೆಯ ‘ರಾಣ’ ಸಿನಿಮಾವನ್ನು ನಂದಕಿಶೋರ್ ಮುಗಿಸಿದ್ದಾರೆ. ಈಗಾಗಲೇ ಹಾಡುಗಳಿಂದಲೇ ಮೋಡಿ ಮಾಡುತ್ತಿರುವ ಈ ಸಿನಿಮಾವನ್ನು ನಂದಕಿಶೋರ್‌ ರಿಲೀಸ್ ಮಾಡಬೇಕಿದೆ. ಆದಾದ ಮೇಲೆ ಮತ್ತೊಂದು ಕನ್ನಡ ಸಿನಿಮಾವನ್ನು ಅವರು ಕೈಗೆತ್ತಿಕೊಳ್ಳಲಿದ್ದು, ಆ ಬಳಿಕ ಮೋಹನ್‌ಲಾಲ್‌ ಸಿನಿಮಾದತ್ತ ಗಮನ ಹರಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ಹೊರಗಿನಿಂದ ಬಿಗ್ ಬಾಸ್ ಮನೆಯಲ್ಲಿ ಹುಡುಗರಿಗೆ ಸಿಗುತ್ತಂತೆ ಆ ವಸ್ತು…? ಸೋನು ಗೌಡ ಲೀಕ್ ಮಾಡಿದ್ರು ಮನೆ ಸೀಕ್ರೇಟ್..!

ಗಣೇಶ ಹಬ್ಬಕ್ಕೆ ‘ಹಿರಣ್ಯ’ ಸಿನಿಮಾದ ನಯಾ ಪೋಸ್ಟರ್ ರಿಲೀಸ್…ಮಾಸ್ ಲುಕ್ ನಲ್ಲಿ ಮಿಂಚಿದ ಮ್ಯಾಸೀವ್ ಸ್ಟಾರ್ ರಾಜವರ್ಧನ್

ವಿಷ್ಣು ಅವತಾರದಲ್ಲಿ ‘ಲಕ್ಕಿ ಮ್ಯಾನ್’ ಅಪ್ಪು..!

- Advertisement -

Latest Posts

Don't Miss