Thursday, March 28, 2024

Latest Posts

ಜೆಡಿಎಸ್ ಭದ್ರಕೋಟೆ ಛಿದ್ರ ಮಾಡುತ್ತೇವೆ.- ಸಂಸದೆ ಸುಮಲತಾ

- Advertisement -

ರಾಜಕೀಯ ಸುದ್ದಿ:

ಮೇಲಿಕೋಟೆ ಕ್ಷೇತ್ರದಲ್ಲಿ ಕಾಂಗ್ರೆಸ್ ಷಡ್ಯಂತ್ರ.’ನಡೆಸುತ್ತಿದೆ ಚುನಾವಣೆಯಲ್ಲಿ ಗೆಲ್ಲೊಕ್ಕೆ ಕಾಂಗ್ರೆಸ್ ನವರ ಕೈಯಲ್ಲಿ ಕ್ಯಪಾಸಿಟಿ ಇಲ್ಲ ಎಂದು ಮಂಡ್ಯದಲ್ಲಿ ಶಾಸಕ ಡಾ.ಕೆ.ಅನ್ನದಾನಿ ಗಂಭೀರ ಆರೋಪ ಮಾಡಿದ್ದಾರೆ ಡಾ.ಕೆ.ಅನ್ನದಾನಿ ಮುಂದುವರೆದು ಮಾತನಾಡುತ್ತಾ ಈಗಾಗಲೇ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರ ನಡೆಯುತ್ತಿದೆ‌.ಕಾಂಗ್ರೆಸ್-ಬಿಜೆಪಿ ಇನ್ನೂ ಅಭ್ಯರ್ಥಿಗಳ ಘೋಷಣೆ ಮಾಡಿಲ್ಲ‌  ಆದರೆ ಜೆಡಿಎಸ್ ಮೊದಲ ಪಟ್ಟಿಯಲ್ಲಿ 90 ಅಭ್ಯರ್ಥಗಳ ಪಟ್ಟಿ ಬಿಡುಗಡೆ ಮಾಡಿದೆ. ಎರಡನೇ ಪಟ್ಟಿ ಶೀಘ್ರದಲ್ಲೆ ಬಿಡುಗಡೆಯಾಗಲಿದೆ. ನಾನು ನನ್ನ ಕ್ಷೇತ್ರಕ್ಕೆ ಅಭ್ಯರ್ಥಿಯಾಗಿ ಘೋಷಣೆಯಾಗಿದ್ದೇನೆ‌ ಎಲ್ಲಾ ಪಕ್ಷದಲ್ಲಿ ಚುನಾವಣಾ ಷಡ್ಯಂತ್ರ ನಡೆಯುತ್ತಿದೆ. ನಾವು ಸಹ ಅದಕ್ಕೆ ತಕ್ಕಂತೆ ತಂತ್ರಗಾರಿಕೆ ಮಾಡ್ತೆವೆ ಅವೇಲ್ಲವನ್ನು ಮೆಟ್ಟಿ ನಿಲ್ಲುತ್ತದೆ ನಮ್ಮ ಕೆಲಸ. ಪುಟ್ಟರಾಜು ಬಲಿಷ್ಠ ಅಭ್ಯರ್ಥಿಯಾಗಿದ್ದಾರೆ‌ ರೈತ ಸಂಘದ ಜೊತೆ ಕೈ ಜೊಡಿಸಿ ಷಡ್ಯಂತ್ರ.

‘ಸಂಸದೆಗೆ ಮಂಡ್ಯದ ತಳಮಟ್ಟದ ರಾಜಕಾರಣ ಗೊತ್ತಿಲ್ಲ.’
ಜೆಡಿಎಸ್ ಭದ್ರಕೋಟೆ ಛಿದ್ರ ಮಾಡುತ್ತೇವೆ ಎಂದು ಮಂಡ್ಯ  ಸಂಸದೆ ಸುಮಲತಾ ಹೇಳಿಕೆ ವಿಚಾರ‌ಕ್ಕೆ ವಿರುದ್ದವಾಗಿ ಮಂಡ್ಯದಲ್ಲಿ ಶಾಸಕ ಅನ್ನದಾನಿ ವಾಗ್ದಾಳಿ ನಡೆಸಿದ್ದಾರೆ. ಯಾರು ಛಿದ್ರ ಮಾಡ್ತಾರೆ ನೋಡೋಣ ಎಂದರು.ಎಲ್ಲವು ಜನರ ಕೈಯಲ್ಲಿದೆ  ಜನರು ಛಿದ್ರ ಮಾಡೋದು, ಅವರಲ್ಲ,ನಾನಲ್ಲ‌ ಮತದಾರರು ಛಿದ್ರ ಮಾಡುದ್ರೆ ಯಾರು ಏನು ಮಾಡಕ್ಕಾಗಲ್ಲಎಂದು ಸುಮಲತಾ ವಿರುದ್ದ ಹರಿಹಾಯ್ದರು.

ಎಂಪಿ ಎಂಎಲ್ ಎ ಏನು ಮಾಡಕ್ಕಾಗಲ್ಲ‌ ಸಂಸದೆಗೆ ಮಂಡ್ಯದ ತಳಮಟ್ಟದ ರಾಜಕಾರಣ ಗೊತ್ತಿಲ್ಲ.

ಪಾಪ ಅವರಿಗೆ ಜೆಡಿಎಸ್ ಬಗ್ಗೆ ಗೊತ್ತಿಲ್ಲ‌ ಜೆಡಿಎಸ್ ಬಗ್ಗೆ ಅಂಬರೀಶ್ ಅವರಿಗೆ ಗೊತ್ತಿತ್ತು ಈ ಪಾರ್ಟಿ ದೇವೇಗೌಡ್ರು ಕಟ್ಟಿರುವ ಪಾರ್ಟಿ ಎಷ್ಟು ಶಕ್ತಿ ಇದೆ ಅವರಿಗೆ ಗೊತ್ತಿದೆ ಬಹುಶಃ ಸಂಸದೆಗೆ ಗೊತ್ತಿಲ್ಲ, ಛಿದ್ರ ಮಾಡ್ತಿನಿ ಅಂತ ಹೇಳಿದ್ದಾರೆ ಯಾವ ಶಕ್ತಿ ಇಟ್ಟಿಕೊಂಡು ಹೊಗ್ತಿದ್ದೇವೆ ಆ ಶಕ್ತಿನೆ ಅಂತಿಮ ನೋಡೋಣ ಯಾರ ಯಾರು ಯಾವ ಅಭ್ಯರ್ಥಿ ಮುಗಿಸ್ತಾರೆ ಎಂದು ಜನರು ತೀರ್ಮಾನ ಮಾಡ್ತಾರೆ.

ಸಚಿವ ನಾರಾಯಣ್ ಗೌಡ ಹೇಳಿಕೆ ವಿಚಾರ:

ಜೆಡಿಎಸ್ ನಿಂದ ಯಾವ ಅನ್ಯಾಯ ಆಗಿಲ್ಲ ಕೆ.ಆರ್‌.ಪೇಟೆಯಲ್ಲಿ ಟಿಕೆಟ್ ಕೊಟ್ಟು ಆಶೀರ್ವಾದ ಮಾಡಿದ್ದಾರೆ ದೇವೇಗೌಡ್ರು ಮನೆಯವರಿಂದ ಹೇಗೆ ಅನ್ಯಾಯ ಆಗುತ್ತದೆ. ಅವರನ್ನ ಚೆನ್ನಾಗಿ ನೊಡ್ಕೊಂಡಿದ್ದಾರೆ, ಪ್ರೀತಿಸಿದ್ದಾರೆ ಮೋಸ ಹೇಗೆ ಆಗುತ್ತೆ.? ಎಂದು ಮಾಧ್ಯಮ ಮಿತ್ರರೊಂದಿಗೆ ಮಾತನಾಡಿದರು.

ಆನೆ ಹಾವಳಿ ತಡೆಯಲು ತಡೆಗೋಡೆ ನಿರ್ಮಾಣ

ತಮ್ಮನ ಅಕ್ರಮ ಸಂಬಂಧಕ್ಕೆ ಅಣ್ಣನ ಸಜೀವದಹನ

ಬಿಜೆಪಿ ಸೇರಲಿದ್ದಾರಾ ಕಿಚ್ಚ ಸುದೀಪ್…?

- Advertisement -

Latest Posts

Don't Miss