Sunday, November 16, 2025

Latest Posts

Mandya News: ಜಮೀನು ಸಮಸ್ಯೆ ಬಗೆಹರಿಯದ ಕಾರಣ, ಡಿಸಿ ಕಚೇರಿ ಎದುರು ಆತ್ಮಹತ್ಯೆಗೆ ಯತ್ನಿಸಿದ ರೈತ

- Advertisement -

Mandya News: ಮಂಡ್ಯ: ಜಮೀನು ಸಮಸ್ಯೆ ಬಗೆಹರಿಯದ ಕಾರಣ, ರೈತನೋರ್ವ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಮಂಡ್ಯದಲ್ಲಿ ನಡೆದಿದೆ. ಮಂಡ್ಯದ ಡಿಸಿ ಕಚೇರಿ ಎದುಗಿನ ಪಾರ್ಕ್‌ನಲ್ಲಿ, ಮಂಜೇಗೌಡ ಎಂಬ ರೈತ ಬೆಂಕಿ ಹಚ್ಚಿಕ“ಂಡು ಆತ್ಮಹತ್ಯೆಗೆ ಯತ್ನಿಸಿದ್ದಾರೆ.

ಕೆ.ಆರ್‌.ಪೇಟೆ ತಾಲೂಕಿನ ಮೂಡನಹಳ್ಳಿ‌ ಗ್ರಾಮದ ಮಂಚೇಗೌಡ ಎಂಬುವವರಿಗೆ ಹಲವು ವರ್ಷಗಳಿಂದ ಜಮೀನು ಸಮಸ್ಯೆ ಬಗೆಹರಿದಿರಲಿಲ್ಲ. ಈ ಸಂಬಂಧ ಹಲವು ವರ್ಷಗಳಿಂದ ಪದೇ ಪದೇ ತಾಲೂಕು ಕಚೇರಿ, ಜಿಲ್ಲಾಧಿಕಾರಿ ಕಚೇರಿಗೆ ಹೋಗುತ್ತಿದ್ದರು.

ಇಷ್ಟಾದರೂ ಸಮಸ್ಯೆ ಬಗೆಹರಿಯದ ಕಾರಣ, ಮನನ“ಂದು ಮಂಜೇಗೌಡ ಇಂದು ಡಿಸಿ ಕಚೇರಿ ಎದುರು ಆತ್ಮಹತ್ಯೆಗೆ ಯತ್ನಿಸಿದ್ದಾರೆ.  ಜಿಲ್ಲಾಧಿಕಾರಿ ಕಚೇರಿ ಎದುರಿನ ಪಾರ್ಕ್ ನಲ್ಲಿ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದಾರೆ. ತಕ್ಷಣ ಅಲ್ಲೇ ಇದ್ದ ಜನ ಬೆಂಕಿ ಆರಿಸಿ, ರೈತನ ಪ್ರಾಣ ಉಳಿಸಿದ್ದಾರೆ. ಅಲ್ಲದೇ ಮಂಜೇಗೌಡರನ್ನು ಮಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.

- Advertisement -

Latest Posts

Don't Miss