Saturday, May 17, 2025

Latest Posts

Mandya News: ಮಗಳ ಸ್ನೇಹಿತನ ತಂದೆಯನ್ನ ಹತ್ಯೆಗೈದು ಸೇಡು ತೀರಿಸಿಕೊಂಡ ಅಪ್ಪ

- Advertisement -

Mandya: ತನ್ನ ಮಗಳನ್ನ ಹತ್ಯೆ ಮಾಡಿದ ಹುಡುಗನ ತಂದೆಯನ್ನೇ ಹತ್ಯೆ ಮಾಡಿದ ಘಟನೆ ಮಂಡ್ಯದಲ್ಲಿ ನಡೆದಿದೆ. ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಮಾಣಿಕ್ಯಹಳ್ಳಿ ಗ್ರಾಮದಲ್ಲಿ ದೀಪಿಕಾ ಎನ್ನುವ ಶಿಕ್ಷಕಿ ಹತ್ಯೆಯಾಗಿದ್ದ ಘ”ನೆ ವರ್ಷದ ಹಿಂದೆಯಷ್ಟೇ ಸದ್ದು ಮಾಡಿತ್ತು. ಇದೀಗ ಆಕೆಯ ತಂದೆ, ದೀಪಿಕಾ ಹತ್ಯೆ ಕೇಸ್‌ನ ಆರೋಪಿಯ ತಂದೆಯನ್ನ ಹತ್ಯೆ ಮಾಡಿದ್ದಾರೆ.

2024 ಜನವರಿ 22ರಂದು ದೀಪಿಕಾ ಹತ್ಯೆ ನಡೆದಿತ್ತು. ದೀಪಿಕಾಗೆ ಅದಾಗಲೇ ವಿವಾಹವಾಗಿ 1 ಮಗುವಿತ್ತು. ಆದರೆ ದೀಪಿಕಾಗೆ ನಿತೇಶ್ ಎಂಬುವವನ ಪರಿಚಯವಾಗಿ, ಸ್ನೇಹ ಸಲುಗೆಯಾಗಿ ಬೆಳೆದಿತ್ತು. ಹೀಗಾಗಿ ಇವರು ಆಗಾಗ ಭೇಟಿಯಾಗುತ್ತಿದ್ದರು. ಈ ಬಗ್ಗೆ ದೀಪಿಕಾ ಪತಿಯ ಮನೆಯವರು ಕೇಳಿದಾಗ, ಆತ ನನ್ನ ತಮ್ಮ ಇದ್ದ ಹಾಗೆ ಎಂದು ದೀಪಿಕಾ ಹೇಳಿದ್ದಳು. ಆದರೂ ಕೂಡ ದೀಪಿಕಾ ಪತಿ ಈ ಬಗ್ಗೆ ವಾರ್ನ್ ಮಾಡಿದ್ದರು. ಹೀಗಾಗಿ ದೀಪಿಕಾ ನಿತೇಶ್‌ನನ್ನು ಭೇಟಿಯಾಗುವುದನ್ನು ಕಡಿಮೆ ಮಾಡಿದ್ದಳು.

ಹೀಗಾಗಿ ಬೇಸರಕ್ಕೆ ಓಳಗಾಗಿದ್ದ ನಿತೇಶ್, ನಂತರ 2024, ಜನವರಿ 22ರಂದು ದೀಪಿಕಾಳನ್ನು ಬೆಟ್ಟಕ್ಕೆ ಕರೆಯಿಸಿಕ“ಂಡಿದ್ದ. ಆತನಿಗಾಗಿ ದೀಪಿಕಾ ಶರ್ಟ್ ಸಹ ಖರೀದಿಸಿ ಉಡುಗೋರೆ ನೀಡಲು ಹೋಗಿದ್ದಳು. ಅಲ್ಲಿ ಅವರಿಬ್ಬರ ಮಧ್ಯೆ ಜಗಳವಾಯ್ತು. ಅದೇ ಜಗಳದಲ್ಲಿ ನಿತೇಶ್ ಅವಳನ್ನು ಹತ್ಯೆ ಮಾಡಿದ್ದ. ಈ ಬಗ್ಗೆ ಪೋಲೀಸ್ ಕೇಸ್ ಆಗಿ, ನಿತೇಶ್ ಜೈಲು ಸೇರಿದ್ದ. ಆದರೆ ಈಗಲೂ ನಿತೇಶ್ ತಾಾನು ಹತ್ಯೆ ಮಾಡಿಲ್ಲವೆಂದೇ ಹೇಳುತ್ತಿದದಾನೆ.

ಇನ್ನು ತನ್ನ ಮಗಳ ಹತ್ಯೆಗೆ ಪ್ರತೀಕಾರ ತೀರಿಸಿಕ“ಳ್ಳಲೇಬೇಕು ಎಂದು ದೀಪಿಕಾ ತಂದೆ ವೆಂಕಟೇಶ್ ಕಾದಿದ್ದು, ನಿನ್ನೆ ನಿತೇಶ್ ತಂಗಿಯ ಮದುವೆ ಫಿಕ್ಸ್ ಆಗಿತ್ತು. ಹೀಗಾಗಿ ನಿತೇಶ್ ಕೂಡ ಬೇಲ್ ಮೇಲೆ ರಿಲೀಸ್ ಆಗಿ ಬಂದಿದ್ದ. ಇದೇ ವೇಳೆ ಮದುವೆ ಮಂಟಪಕ್ಕೆ ಹೋಗಿ, ನನ್ನ ಮಗಳನ್ನು ಹತ್ಯೆ ಮಾಡಿ, ನಿಮ್ಮ ಮಗಳ ಮದುವೆಯನ್ನು ಸಂಭ್ರಮದಿಂದ ಮಾಡ್ತಿದ್ದೀರಾ ಎಂದು ಜಗಳವಾಡಿ, ನಿತೇಶ್ ತಂದೆಯ ಹತ್ಯೆ ಮಾಡಿ, ಪರಾರಿಯಾಗಿದ್ದಾನೆ. ಈ ಬಗ್ಗೆ ಮೇಲುಕೋಟೆ ಪೋಲೀಸ್ ಸ್ಟೇಶನ್‌ನಲ್ಲಿ ಪ್ರಕರಣ ದಾಖಲಾಗಿದ್ದು, ಪೋಲೀಸರು ವೆಂಕಟೇಶ್‌ಗಾಗಿ ಹುಡುಕಾಟ ನಡೆಸಿದ್ದಾರೆ.

- Advertisement -

Latest Posts

Don't Miss