ಹುಬ್ಬಳ್ಳಿ: ಹಿರಿಯ ಪತ್ರಕರ್ತರು ಕಳೆದುಕೊಂಡಿದ್ದ ಪರ್ಸ್ ವೊಂದನ್ನು ಮರಳಿಸುವ ಮೂಲಕ ಹುಬ್ಬಳ್ಳಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳು ಮಹತ್ವದ ಕಾರ್ಯವನ್ನು ಮಾಡಿದ್ದಾರೆ.
ಹೌದು.. ಹುಬ್ಬಳ್ಳಿಯ ಹಿರಿಯ ಪತ್ರಕರ್ತರಾದ ಗುರುರಾಜ ಹೂಗಾರ ಅವರು ಕಳೆದ ಒಂದೆರಡು ದಿನಗಳ ಹಿಂದೆ ತಮ್ಮ ಪರ್ಸ್ ಕಳೆದುಕೊಂಡಿದ್ದು, ಆ ಪರ್ಸ್ ಹುಬ್ಬಳ್ಳಿಯ ಛೇಡ್ಡಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಬಿಎಸ್ಸಿ ವಿದ್ಯಾರ್ಥಿಗಳಾದ ಲೋಹಿತ್ ಅವಾನವರ, ವಿಜಯಕುಮಾರ್ ಶಿರೋಳ ಅವರಿಗೆ ಸಿಕ್ಕಿದೆ. ಸಿಕ್ಕ ಪರ್ಸನ್ನು ವಿಳಾಸ ಗುರುತಿಸಿ ತಲುಪಿಸುವ ಮೂಲಕ ಸಾಮಾಜಿಕ ಜವಾಬ್ದಾರಿ ಜೊತೆಗೆ ಕಾಳಜಿಯನ್ನು ಮೆರೆದಿದ್ದಾರೆ.
ಇನ್ನೂ ಪರ್ಸ್ ಹಾಗೂ ಡಾಕ್ಯುಮೆಂಟ್ ಹಿಂದಿರುಗಿಸಿದ ವಿದ್ಯಾರ್ಥಿಗಳಿಗೆ ಪತ್ರಕರ್ತರಾದ ಗುರುರಾಜ ಹೂಗಾರ, ಪರಶುರಾಮ ತಹಶಿಲ್ದಾರ, ಶಿವಕುಮಾರ್ ಪತ್ತಾರ, ಪಿ.ಶೇಖರ್, ಸಂಗಮೇಶ್ ಸತ್ತಿಗೇರಿ, ರೋಹನ ಹುನಸಿವಾಡಕರ, ವಿನಾಯಕ ಪೂಜಾರ, ಮಂಜುನಾಥ ಜರತಾರಘರ,ಶಂಕರ ಕುದುರಿ, ಸುರಜ್ ಪಕ್ಕಿರನಾಯ್ಕರ, ಸೇರಿದಂತೆ ಇತರರು ಅಭಿನಂದನೆ ಸಲ್ಲಿಸಿದರು.
Greenland villas: ವಿಲ್ಲಾಗಳ ಮುಂದೆ ವ್ಯವಸಾಯ ಮಾಡುತ್ತಿರುವ ರೈತರು..!