Political news: ಬೆಳಗಾವಿಯಲ್ಲಿ ಕರ್ನಾಟಕ ಟಿವಿ ಜೊತೆ ಮಾತನಾಡಿರುವ ಸಚಿವ ಲಕ್ಷ್ಮೀ ಹೆಬ್ಬಾಳ್ಕರ್ ಪುತ್ರ, ಲೋಕಸಭೆ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮೃಣಾಲ್ ಹೆಬ್ಬಾಳ್ಕರ್, ನಾವು ಮತ್ತು ಪ್ರಿಯಾಂಕಾ ಜಾರಕಿಹೊಳಿ ಅವರು ನೂರಕ್ಕೆ ನೂರರಷ್ಟು ಗೆಲ್ಲುತ್ತೇವೆ ಅನ್ನೋ ನಂಬಿಕೆ ನಮಗಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಇನ್ನು ಇದೇ ವೇಳೆ ಮಾತನಾಡಿದ ಲಕ್ಷ್ಮೀ ಹೆಬ್ಬಾಳ್ಕರ್, ಇಷ್ಟು ದಿನ ತಾಯಿಯ ಇಲೆಕ್ಷನ್ ಒಬ್ಬ ಮಗ ಮುಂದೆ ನಿಂತು ಮಾಡಿದ. ಈಗ ಮಗನ ಎಲೆಕ್ಷನ್ ತಾಯಿ ನಡೆಸಿಕೊಡುವ ಸಂದರ್ಭ ಬಂದಿದೆ. ಸ್ವಲ್ಪ ಹೆಚ್ಚೇ ಎಮೋಷನಲ್ ಆಗುತ್ತಿದ್ದೇನೆ ಅಂತಾ ಅನ್ನಿಸುತ್ತಿದೆ ಎಂದಿದ್ದಾರೆ.
ಅಲ್ಲದೇ, ಯಾವುದೇ ಚುನಾವಣೆ ಇರಲಿ ಅದನ್ನು ನಾನು ಪ್ರತಿಷ್ಠೆಯಾಗಿಯೇ ತೆಗೆದುಕೊಂಡಿದ್ದೇನೆ. ಬೆಳಗಾವಿ ಜನತೆಯ ಪ್ರೀತಿಯೇ ನಮಗೆ ಪ್ಲಸ್ ಪಾಯಿಂಟ್. ಅಲ್ಲದೇ ಮೃಣಾಲ್ ಓರ್ವ ಯುವಕನಾಗಿರುವುದರಿಂದ ಯುವ ಪೀಳಿಗೆಯವರು ನಮಗೆ ಸಪೋರ್ಟ್ ಮಾಡುತ್ತಿದ್ದಾರೆ. ನಾನೋರ್ವ ಮಹಿಳೆಯಾಗಿರುವುದಿರಿಂದ, ಗೃಹಿಣಿಯರ ಬೆಂಬಲ ನಮಗಿದೆ ಎಂದು ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದ್ದಾರೆ.
ಮೃಣಾಲ್ ಮಾತನಾಡಿದ, ಬೆಳಗಾವಿಯನ್ನು ಕರ್ನಾಟಕದ ಎರಡನೇಯ ರಾಜಧಾನಿ ಅಂತಾ ಹೇಳಲಾಗುತ್ತದೆ. ಆದರೆ ಆಗಬೇಕಾದ ಅಭಿವೃದ್ಧಿ ಆಗಲಿಲ್ಲ. ಹಾಗಾಗಿ ಎಲ್ಲರೂ ಬದಲಾವಣೆ ಬಯಸಿದ್ದೇವೆ. ಈ ಬಾರಿ ನೂರಕ್ಕೆ ನೂರು ನಾವು ಗೆದ್ದೇ ಗೆಲ್ಲುತ್ತೇವೆ ಎಂಬ ವಿಶ್ವಾಸವಿದೆ ಎಂದಿದ್ದಾರೆ.
ಕಾಂಗ್ರೆಸ್ ಕಾನೂನು ಸುವ್ಯವಸ್ಥೆಯ ಹೊಣೆಗಾರಿಕೆಯನ್ನು ಈ ಮಾತಂಧರ ಕೈಗಿಟ್ಟು ನಿದ್ದೆ ಹೋಗಿದೆ: ಪ್ರೀತಂಗೌಡ
ಯಾವುದೇ ಸಮಯದಲ್ಲೂ ಕರ್ನಾಟಕ ಸದಾ ಕೇರಳದ ಜೊತೆ ಇರಲಿದೆ: ಡಿಸಿಎಂ ಡಿ.ಕೆ.ಶಿವಕುಮಾರ್
ಸರ್ಕಾರದ ಕುಮ್ಮಕ್ಕು ಇಂಥ ದುಷ್ಟಶಕ್ತಿಗಳಿಗೆ ಇರುವುದು ಸ್ಪಷ್ಟವಾಗಿದೆ: ಕಾಂಗ್ರೆಸ್ ವಿರುದ್ಧ ವಿಜಯೇಂದ್ರ ವಾಗ್ದಾಳಿ