Friday, June 20, 2025

Latest Posts

ಮಂಡ್ಯದಲ್ಲಿ ಮತ್ತೊಮ್ಮೆ ಆಪರೇಷನ್ ಕಮಲ..? ಸಚಿವ ಅಶೋಕ್ ಸೂಚನೆ..?

- Advertisement -

ಮಂಡ್ಯ: ಮಂಡ್ಯದಲ್ಲಿ ನಡೆದ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ, ಸಚಿವ ಆರ್. ಅಶೋಕ್, ಡಿಸೆಂಬರ್‌ಗೆ ಮತ್ತೊಂದು ಆಪರೇಷನ್ ಕಮಲ ಮಾಡುವ ಸೂಚನೆ ನೀಡಿದಂತಿದೆ.

ಕಾಂಗ್ರೆಸ್-ಜೆಡಿಎಸ್ ನಿಂದ ಮತ್ತಷ್ಟು ಶಾಸಕರು ಬಿಜೆಪಿ ಸೇರ್ಪಡೆ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿ ಅಶೋಕ್, ಸೇರ್ಪಡೆ ಬಗ್ಗೆ ಡಿಸೆಂಬರ್‌ಗೆ ನಿರ್ಧಾರವಾಗುತ್ತೆ. ಬಹಳಷ್ಟು ಜನರ ಹತ್ತಿರ ಮಾತನಾಡಿದ್ದೇವೆ. ಬಿಜೆಪಿಗೆ ಬರುವಂತವರ ಸಂಖ್ಯೆ ಜಾಸ್ತಿಯಾಗುತ್ತೆ. ನರೇಂದ್ರ ಮೋದಿ, ಅಮಿತ್ ಶಾ, ನಡ್ಡಾ, ಯಡಿಯೂರಪ್ಪ, ಎಲ್ಲರೂ ಚುನಾವಣೆ ತಯಾರಿ ಮಾಡಿದ್ದಾರೆ. ಕೇಂದ್ರ ಹಾಗೂ ರಾಜ್ಯದಲ್ಲಿ ಮತ್ತೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುತ್ತೆ ಎಂದು ಹೇಳಿದ್ದಾರೆ.

ನಿಮಿಷಾಂಬಾ ದೇಗುಲಕ್ಕೆ ಭೇಟಿ ನೀಡಿದ ನಟ ಶಿವರಾಜ್‌ಕುಮಾರ್ ದಂಪತಿ..

ಅಲ್ಲದೇ, ಅತಂತ್ರ ಸರ್ಕಾರ ಇನ್ನು ಯಾವತ್ತೂ ಬರಲ್ಲ. ಕಾಂಗ್ರೆಸ್-ಜೆಡಿಎಸ್ ಸೇರಿ ಅತಂತ್ರ ಸರ್ಕಾರ ಮಾಡಿದ್ರು. ಅತಂತ್ರ ಸರ್ಕಾರದ ಸ್ಥಿತಿ ಬಗ್ಗೆ ಜನರಿಗೆ ಗೊತ್ತಿದೆ. 2006ರಲ್ಲಿ ಬಿಜೆಪಿ ಸರ್ಕಾರ ರಚನೆ ಮಾಡಿದ್ವಿ. ಮೋಸ ಮಾಡಿ ಬೀಳಿಸಿದ್ರು. ಮತ್ತೆ ಕಾಂಗ್ರೆಸ್ ಜೊತೆ ಸರ್ಕಾರ ರಚನೆ ಮಾಡಿದ್ರು ಅದು ಬಿದ್ದೋಯ್ತು. ಈ ಬಾರಿ ಸ್ಪಷ್ಟವಾದ ಬಹುಮತ ನೀಡ್ತಾರೆ. ದೇಶದಲ್ಲಿ ಮತ್ತೊಮ್ಮೆ ಬಿಜೆಪಿ ಸರ್ಕಾರ ಆಡಳಿತಕ್ಕೆ ಬರುತ್ತೆ ಎಂದಿದ್ದಾರೆ.

ಅಲ್ಲದೇ, ಮಂಡ್ಯದಲ್ಲಿ ಇನಷ್ಟು ಜನ ಬಿಜೆಪಿಗೆ  ಸೇರ್ಪಡೆಯಾಗುತ್ತಾರೆ. ಡಿಸೆಂಬರ್ ಗೆ ಸ್ಪಷ್ಟ ಚಿತ್ರಣ ಹೊರ ಬೀಳುತ್ತೆ. ಒಳ್ಳೆಯ ನಾಯಕರು ಬಿಜೆಪಿಗೆ ಬರ್ತಾರೆ. ಈಗಾಗಲೇ ನಾರಾಯಣ ಗೌಡ್ರು ಖಾತೆ ತೆರೆದಿದ್ದಾರೆ. ಮತ್ತಷ್ಟು ಮಂಡ್ಯದಲ್ಲಿ ಬಿಜೆಪಿ ಅರಳುತ್ತೆ ಎಂದು ಹೇಳುವ ಮೂಲಕ ಪರೋಕ್ಷವಾಗಿ ಆಪರೇಷನ್ ಕಮಲದ ಬಗ್ಗೆ ಅಶೋಕ್ ಸೂಚನೆ ನೀಡಿದ್ದಾರೆ.

- Advertisement -

Latest Posts

Don't Miss