Friday, June 20, 2025

Latest Posts

‘ಹೊಳೆನರಸಿಪುರದವರನ್ನ ಹಾಸನಕ್ಕೆ ಕರೆತಂದು ಗೆಲ್ಲಿಸ್ತೀವಿ ಅನ್ನೋ ಭ್ರಮೆಯಲ್ಲಿದ್ರೆ, ಹೊರಬನ್ನಿ’

- Advertisement -

ಹಾಸನ : ಹಾಸನ ವಿಧಾನಸಭಾ ಕ್ಷೇತ್ರದಲ್ಲಿ ಕೆಲವು ಮತದಾರರನ್ನು ಕೈಬಿಡಲಾಗುತ್ತಿದೆ ಎಂಬ ಮಾಜಿಸಚಿವ ಎಚ್.ಡಿ.ರೇವಣ್ಣ ಅರೋಪ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಶಾಸಕ ಪ್ರೀತಂಗೌಡ, ಹಾಸನ ವಿಧಾನಸಭಾ ಕ್ಷೇತ್ರ ಸೇರಿದಂತೆ ಇಡೀ‌ ಜಿಲ್ಲೆಯಲ್ಲಿ ಏನಾದ್ರು ಮತದಾರರ ಪಟ್ಟಿಯಲ್ಲಿ ಸಮಸ್ಯೆ ಇದ್ದರೆ ಅದನ್ನು ಎಲ್ಲಾ ಜನಪ್ರತಿನಿಧಿಗಳು ಸೇರಿ ಸರಿ ಮಾಡುವ ಕೆಲಸ ಮಾಡೋಣ ಎಂದಿದ್ದಾರೆ.

ಈ ಬಗ್ಗೆ ಮಾತು ಮುಂದುವರಿಸಿದ ಪ್ರೀತಂ, ಹಾಸನ ಜಿಲ್ಲಾ ಕೇಂದ್ರ ಆಗಿರುವುದರಿಂದ ಮನೆ ಹಾಸನದಲ್ಲಿ ಇಟ್ಟುಕೊಂಡಿರುತ್ತಾರೆ. ಅರಸೀಕೆರೆ,‌ ಆಲೂರು, ದುದ್ದ, ಶಾಂತಿಗ್ರಾಮ,‌ ಹೊಳೆನರಸೀಪುರದವರು ಇರ್ತಾರೆ. ಎರಡು ಕಡೆ ಮತದಾರರು ಇರುವುದನ್ನು ಬಹಳ ವರ್ಷದಿಂದ ಕೇಳ್ಕಂಡು, ನೋಡ್ಕಂಡು ಬಂದಿದ್ದೇವೆ. ಈಗ ಆಧಾರ್ ಲಿಂಕ್ ಆಗುವ ಸನ್ನಿವೇಶ ಒದಗಿ ಬಂದಿದೆ ಎಂದಿದ್ದಾರೆ.

‘ನಾನು ಸಿದ್ದರಾಮಯ್ಯ ಅವರು ಹೊಡೆದಾಡಲು ಆಗಲ್ಲ’

ಅಲ್ಲದೇ, ಎರಡು ಕಡೆ ಇರುವಂತಹದ್ದು, ಹೆಚ್ಚು ದಿನಗಳು‌ ಇರೋದಿಲ್ಲ. ಏಕೆಂದರೆ ಆಧಾರ್ ಲಿಂಕ್ ಆದ ತಕ್ಷಣ ಆಲೂರು ಇಲ್ಲಾ ಹಾಸನದಲ್ಲಿ ಇಟ್ಕೊಬೇಕು, ದುದ್ದ ಇಲ್ಲಾ ಹಾಸನದಲ್ಲಿ ಇಟ್ಕೊಬೇಕು. ಆ ಪರಿಸ್ಥಿತಿಯಲ್ಲಿ ನ್ಯಾಚುರಲ್ ಆಗಿ ಯಾರದಾದ್ದರು ಒಬ್ಬರದ್ದು ಡಿಲಿಟ್ ಆಗುವಂತಹ ಪರಿಸ್ಥಿತಿ ಇರುತ್ತೆ. ಅದನ್ನ ಬೇರೆ ಅರ್ಥದಲ್ಲಿ ತಿಳಿದುಕೊಳ್ಳುವುದು ಬೇಡ. ಏನಾದರೂ ನ್ಯೂನತೆ ಇದ್ದರೆ ಅಧಿಕಾರಿಗಳನ್ನು ಕರೆಸಿ ಎಲ್ಲಾ ಜನಪ್ರತಿನಿಧಿಗಳು ಸೇರಿ ಅದರ ಬಗ್ಗೆ ಕ್ರಮ ವಹಿಸಲು ಹೇಳ್ತೇವೆ ಎಂದಿದ್ದಾರೆ.

ಹಾಸನದಲ್ಲಿಯೂ ನಡೀತಿದ್ಯಾ ಓಟರ್ ಲಿಸ್ಟ್ ಡಿಲಿಟ್ ಮಾಡೋ ಕೆಲ್ಸ ..?

ಅಲ್ಲದೇ, ಯಾವುದೇ ತರಹದ ಮತದಾರರ ಪಟ್ಟಿ ಪರಿಷ್ಕರಣೆ ಮಾಡುವ ಮೂಲಕ ಚುನಾವಣೆ ಗೆಲ್ತಿವಿ ಅನ್ನುವ ಭ್ರಮೆಯಲ್ಲಿ ಯಾವುದೇ ಚುನಾಯಿತ ಪ್ರತಿನಿಧಿಗಳು ಇರೋದು ಬೇಡ. ಹೊಳೆನರಸೀಪುರ ಕ್ಷೇತ್ರದಿಂದ ಹಾಸನಕ್ಕೆ ಕರೆದುಕೊಂಡು ಬಂದು ಓಟು ಸೇರಿಸಿ ಚುನಾವಣೆ ಮಾಡ್ತಿವಿ ಅನ್ನುವ ಭ್ರಮೆಯಲ್ಲಿದ್ದರೆ, ಆ ಭ್ರಮೆಯಿಂದ ಹೊರಬರಲಿ. ನಾನೇನಾದ್ರು ಮತದಾರರ ಪಟ್ಟಿಯಲ್ಲಿ ಬೇರೆಯವರ ಹೆಸರು ಡಿಲಿಟ್ ಮಾಡಿ ನಾನು ಚುನಾವಣೆ ಗೆಲ್ತಿನಿ ಅಂದ್ರೆ ನಾನು ಆ ಭ್ರಮೆಯಿಂದ ಹೊರಬರಲಿ. ಇದನ್ನು ನಿಮ್ಮ ಮೂಲಕ ಎಲ್ಲರಿಗೂ ಹೇಳಲು ಇಷ್ಟಪಡ್ತಿನಿ ಎಂದು ಪ್ರೀತಂಗೌಡ ರೇವಣ್ಣಗೆ ಟಾಂಗ್ ಕೊಟ್ಟಿದ್ದಾರೆ.

- Advertisement -

Latest Posts

Don't Miss