Friday, June 20, 2025

Latest Posts

‘ಮುಂದಿನ ಚುನಾವಣೆಯಲ್ಲಿ ಸ್ಪಷ್ಟ ಬಹುಮತ ಬರೋದಕ್ಕೆ ಈಗಿನಿಂದಲೇ ಕಾರ್ಯಪ್ರವೃತ್ತರಾಗ್ತೇವೆ’

- Advertisement -

Hassan News: ಹಾಸನ: ಹಾಸನದಲ್ಲಿ ಬಿಜೆಪಿ ರಾಜ್ಯ ಉಪಾಧ್ಯಕ್ಷ, ಶಾಸಕ ಬಿವೈ ವಿಜಯೇಂದ್ರ ಮಾತನಾಡಿದ್ದು, ಸೋಲಿನಿಂದ ಬಿಜೆಪಿಗೆ ಹಿನ್ನಡೆಯಾಗಿದೆ ಅಂತಾ ಅಂದುಕೊಳ್ಳೋದಿಲ್ಲ. ಪ್ರಜಾಪ್ರಭುತ್ವದಲ್ಲಿ ಇದೆಲ್ಲಾ ಸಹಜ, ಸೋಲುಗೆಲುವು ಸಹಜ ಎಂದಿದ್ದಾರೆ.

ಅದನ್ನ ಬಿಜೆಪಿ, ನಮ್ಮ ನಾಯಕರು ಸ್ವೀಕಾರ ಮಾಡಿದ್ದಾರೆ, ನಾವೆಲ್ಲಾ ಒಪ್ಪಿಕೊಂಡಿದ್ದೇವೆ. ಆದ್ರೆ ಯಶಸ್ವಿ ವಿರೋಧ ಪಕ್ಷವಾಗಿ, ಜನರ ಸಮಸ್ಯೆಗಳಿಗೆ ಸ್ಪಂದನೆ ಮಾಡೋದ್ರ ಮೂಲಕ, ಮತ್ತೆ ಜನರಿಗೆ ಹತ್ತಿರವಾಗಿ ಜನರ ಮನಸ್ಸನ್ನು ಗೆಲ್ಲೋದ್ರ ಮೂಲಕ, ಮುಂದಿನ ಚುನಾವಣೆಯಲ್ಲಿ ಸ್ಪಷ್ಟ ಬಹುಮತ ಬರೋದಕ್ಕೆ ಈಗಿನಿಂದಲೇ ಕಾರ್ಯಪ್ರವೃತ್ತರಾಗ್ತೇವೆ ಎಂದು ಹೇಳಿದ್ದಾರೆ.

ಯಡಿಯೂರಪ್ಪ ಸೇರಿದಂತೆ ಲಿಂಗಾಯತ ನಾಯಕರ ಕಡೆಗಣೆಯಿಂದ ಬಿಜೆಪಿಗೆ ಹಿನ್ನಡೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ವಿಜಯೇಂದ್ರ, ಯಾವುದೇ ಒಂದು ಜಾತಿಯ ಆಧಾರದ ಮೇಲೆ ಒಂದು ಪಕ್ಷ ಯಶಸ್ವಿಯಾಗಿ ಅಧಿಕಾರಕ್ಕೆ ಬರೋದಕ್ಕೆ ಸಾಧ್ಯವಿಲ್ಲ. ಬಿಜೆಪಿ ವೀರಶೈವ ಲಿಂಗಾಯುತ ಸಮಾಜ ಇರಬಹುದು, ಒಕ್ಕಲಿಗ ಸಮಾಜ ಇರಬಹುದು, ಹಿಂದುಳಿದ ದಲಿತ ಸಮುದಾಯ ಇರಬಹುದು, ಎಲ್ಲಾ ಸಮಾಜಗಳನ್ನು ಒಗ್ಗೂಡಿಸಿಕೊಂಡು ಹೋಗಿರೋದು. ನಿಜ ಚುನಾವಣೆಯಲ್ಲಿ ನಮಗೆ ಹಿನ್ನಡೆಯಾಗಿದೆ. ಏನೇ ಸಣ್ಣ ಪುಟ್ಟ ವ್ಯತ್ಯಾಸಗಳಾಗಿದ್ರೂ, ತಪ್ಪುಗಳಾಗಿದ್ರೂ, ನಾಲ್ಕು ಗೋಡೆಗಳ ಮಧ್ಯೆ ಹಿರಿಯ ನಾಯಕರು ಕೂತು ಸಮಸ್ಯೆಯನ್ನು ಬಗೆಹರಿಸಿಕೊಂಡು ಹೋಗ್ತೇವೆ ಎಂದು ವಿಜಯೇಂದ್ರ ಹೇಳಿದ್ದಾರೆ.

ಯಡಿಯೂರಪ್ಪ ಅವರನ್ನ ಸಿಎಂ‌ ಸ್ಥಾನದಿಂದ ಕೆಳಗಿಳಿಸಿದ್ದೇ ಹಿನ್ನಡೆಗೆ ಕಾರಣ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ವಿಜಯೇಂದ್ರ, ನಾನಾ ರೀತಿಯ‌ ವಿಶ್ಲೇಷಣೆಗಳು ಸಹಜವಾಗಿಯೇ ಆಗ್ತವೆ. ಹಿನ್ನಡೆಯಾದ ಸಂದರ್ಭದಲ್ಲಿ ಈ ರೀತಿಯ ಚರ್ಚೆಗಳು ಸಹಜ. ಎಲ್ಲದರ ಬಗ್ಗೆ ರಾಜ್ಯ‌ ಮತ್ತು ರಾಷ್ಟ್ರ ನಾಯಕರುಗಳು ಚರ್ಚೆ ಮಾಡ್ತಾರೆ ಎಂದು ವಿಜಯೇಂದ್ರ ಹೇಳಿದ್ದಾರೆ.

ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಜತೆ ಮೈತ್ರಿ ಗಾಳಿಸುದ್ದಿ ಎಂದ ಹೆಚ್.ಡಿ.ಕುಮಾರಸ್ವಾಮಿ

‘ನಾವು ಕೊಟ್ಟ ಮಾತಿನಂತೆ ನಡೆದುಕೊಂಡಿದ್ದೇವೆ, ಮುಂದಿನ ದಿನಗಳಲ್ಲಿ ಉಳಿದ ಗ್ಯಾರಂಟಿ ಜಾರಿ ಮಾಡಲಿದ್ದೇವೆ’

‘ಬಿಬಿಎಂಪಿಯ 675 ಕೋಟಿ ರೂ.ಗಳ ಎಲ್ ಒಸಿ ಬಿಡುಗಡೆ ಮಾಡಿಲ್ಲ, ಏಕೆ?’

- Advertisement -

Latest Posts

Don't Miss