Chitradurga News : ರಾಜ್ಯಾದ್ಯಂತ ಇಂದು ಶಕ್ತಿ ಯೋಜನೆಯನ್ನು ಬಹಳ ಅದ್ಧೂರಿಯಾಗಿ ಜಾರಿಮಾಡಲಾಗಿದೆ. ಅದೇ ರೀತಿ ಚಿತ್ರದುರ್ಗದಲ್ಲಿ ಹಬ್ಬದ ರೀತಿ ಸಡಗರ ಸಂಭ್ರಮದಿಂದ ಈ ಯೋಜನೆಯನ್ನು ಶಾಸಕ ವೀರೇಂದ್ರ ಪಪ್ಪಿ ಅವರ ಅಧ್ಯಕ್ಷತೆಯಲ್ಲಿ ಉದ್ಘಾಟಿಸಲಾಯಿತು. ಇನ್ನು ಈ ಕಾರ್ಯಕ್ರಮದಲ್ಲಿ ಸಚಿವ ಡಿ ಸುಧಾಕರ್ ಭಾಗವಹಿಸಿದ್ದು ಬಹಳ ವಿಶೇಷ. ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಜೈಕಾರ ಹಾಕಿ ಸಿಹಿ ಹಂಚಿ ಸಂಭ್ರಮಿಸಲಾಯಿತು. ಮಹಿಳೆಯರಿಗೆ ಉಚಿತ ಪ್ರಯಾಣ ನೀಡಿರುವುದು ನಮ್ಮ ಸರ್ಕಾರದ ಹೆಮ್ಮೆ, ಹಾಗಾಗಿ ಎಲ್ಲಾ ಮಹಿಳೆಯರು ರಾಜ್ಯಾದ್ಯಂತ ಉಚಿತ ಪ್ರಯಾಣ ಮಾಡಲಿ ಎಂಬುದು ನಮ್ಮ ಆಶಯ ಅಂತ ತಿಳಿಸಿದ್ರು.
‘ಬಿಜೆಪಿ ಸಚಿವರ ಸರ್ಕಾರದ ನಡೆ ಹೇಗಿತ್ತು ಅಂತ ನಾನು ಹೇಳಬೇಕಾದ ಅಗತ್ಯವಿಲ್ಲ’
‘ನಾವು ಕೊಟ್ಟ ಮಾತಿನಂತೆ ನಡೆದುಕೊಂಡಿದ್ದೇವೆ, ಮುಂದಿನ ದಿನಗಳಲ್ಲಿ ಉಳಿದ ಗ್ಯಾರಂಟಿ ಜಾರಿ ಮಾಡಲಿದ್ದೇವೆ’
ಕೋಲಾರದಲ್ಲಿ ಶಕ್ತಿ ಯೋಜನೆಗೆ ಭೈರತಿ ಸುರೇಶ್ರಿಂದ ಚಾಲನೆ: ಮೊದಲ ಉಚಿತ ಬಸ್ ಟಿಕೇಟ್ ಪಡೆದ ರಮಾಮಣಿ