Hubli Political News: ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ಮಾತನಾಡಿದ ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ, 2047ಕ್ಕೆ ಭದ್ರ ಬೂನಾದಿ ಹಾಕುವ, ಸಧೃಡ ಭಾರತ ಕಟ್ಟುವ ನಿಟ್ಟಿನಲ್ಲಿ ಪ್ರಣಾಳಿಕೆ ಬಿಡುಗಡೆಯಾಗಿದೆ. ಶಾಶ್ವತ ಬಡತನ ನಿರ್ಮೂಲನೆ, ಸಮಾಜಿಕ ನ್ಯಾಯ, ಕೃಷಿಗೆ ಬೆಂಬಲ ನೀಡಲಾಗಿದೆ. ಎಲ್ಲಾ ವರ್ಗದ ಅಭಿವೃದ್ಧಿ ಒಳಗೊಂಡಿರುವ ಪರಿಪೂರ್ಣ ಪ್ರಣಾಳಿಕೆ ನಮ್ಮದು ಎಂದು ಬೊಮ್ಮಾಯಿ ಹೇಳಿದ್ದಾರೆ.
ಜನರಿಂದ ಅಭಿಪ್ರಾಯ ಸಂಗ್ರಹಣೆ ಮಾಡಿಯೇ ಪ್ರಣಾಳಿಕೆ ತಯಾರಿಸಲಾಗಿದೆ. ಜವಾಬ್ದಾರಿಯಿಂದ ಪ್ರಣಾಳಿಕೆ ತಯಾರು ಮಾಡಿದ್ದೇವೆ. ಯಾರಿಗೆ ಅಧಿಕಾರ ಬರೋದಿಲ್ಲ ಅವರು ಬಹಳಷ್ಟು ಬೇಜವಾಬ್ದಾರಿಯಿಂದ ಪ್ರಣಾಳಿಕೆ ಸಿದ್ಧಪಡಿಸಿದ್ದಾರೆ. ನಮ್ಮ ಪ್ರಣಾಳಿಕೆ ಮತ್ತು ಅವರ ಪ್ರಣಾಳಿಕೆ ಹೋಲಿಕೆ ಸರಿಯಲ್ಲಾ. ಬರುವ ದಿನಗಳಲ್ಲಿ ಏನು ಸಾಧ್ಯತೆಯಿದೆ ಅದರ ಆಧಾರದ ಮೇಲೆ ಪ್ರಣಾಳಿಕೆ ತಯಾರಿಸಿದ್ದೇವೆ. ಹೇಳಿದ್ದನ್ನು ಮಾಡೇ ಮಾಡುತ್ತೀವಿ. ಮೋದಿ ಗ್ಯಾರಂಟಿ ಶಾಶ್ವತ ಗ್ಯಾರಂಟಿ. ದೇಶ ಮತ್ತು ಬದುಕು ಕಟ್ಟುವ ಗ್ಯಾರಂಟಿ ಎಂದು ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ.
ಅಯೋಧ್ಯೆ ಮಂದಿರ ಮತ್ತು ರಾಮಲಲ್ಲಾ ಇರುವ ಬೆಳ್ಳಿ ನಾಣ್ಯ ಬಿಡುಗಡೆ ಮಾಡಿದ ಪ್ರಧಾನಿ ಮೋದಿ..
ಹೆಲ್ತ್ ಡ್ರಿಂಕ್ ಪಟ್ಟಿಯಿಂದ ಬೋರ್ನ್ವೀಟಾ ತೆಗೆದು ಹಾಕಲು ಕೇಂದ್ರ ಸರ್ಕಾರ ಆದೇಶ