Hubballi News: ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ಮಾತನಾಡಿದ, ಮೂರು ಸಾವಿರ ಮಠದ ಪೀಠಾಧ್ಯಕ್ಷ ಮೂಜಗು ಸ್ವಾಮೀಜಿ, ಸನಾತನ ಧರ್ಮ ನಮ್ಮ ಭಾರತ ದೇಶ ಹುಟ್ಟಿದಾಗಿನಿಂದಲೂ ಇದೆ. ಸನಾತನ ಎಂದರೆ ಬಹಳ ಪುರಾತನವಾದದ್ದು ಅಂತಾ ಅರ್ಥ. ಸನಾತನ ಅನ್ನುವುದರಲ್ಲಿ ಜಾತಿ ವ್ಯವಸ್ಥೆಯೂ ಇಲ್ಲಾ. ಸನಾತನವನ್ನು ಕೊರೋನ ಎನ್ನುವವರು ಸನಾತನ ಎಷ್ಟು ಪುರಾತನ ಎನ್ನುವುದು ತಿಳಿದುಕೊಳ್ಳಲಿ ಎಂದು ಹೇಳಿದ್ದಾರೆ.
ತಿಳುವಳಿಕೆ ಕೊರತೆಯಿಂದ ಈ ರೀತಿ ಹೇಳಿಕೆ ಕೊಡುತ್ತಿದ್ದಾರೆ. ಸನಾತನದ ಇತಿಹಾಸವನ್ನು ತಿಳಿದುಕೊಂಡವರು ಈ ಬಗ್ಗೆ ತಲೆಕೆಡಿಸಿಕೊಳ್ಳುವ ಅವಶ್ಯಕತೆ ಇಲ್ಲ. ಸನಾತನ ಎನ್ನುವುದು ಪ್ರತಿಯೊಂದು ಹಳ್ಳಿಹಳ್ಳಿಗಳಲ್ಲಿದೆ. ಸನಾತನವನ್ನು ಯಾರಿಂದಲೂ ಕಿತ್ತೊಗೆಯಲು ಸಾಧ್ಯವಿಲ್ಲ. ಸಂವಿಧಾನ ರಚನೆ ಮಾಡಿದವರು ಎಲ್ಲಾ ಧರ್ಮಗಳನ್ನು ಸಮಾನವಾಗಿ ಕಾಣಬೇಕು ಎಂದು ಹೇಳಿದ್ದಾರೆ. ಸನಾತನ ಧರ್ಮವನ್ನು ಅವರು ಅಲ್ಲಗಳೆದಿಲ್ಲ. ರಾಜಕೀಯದವರು ಹೇಳಿದ ತಕ್ಷಣವೇ ಅದನ್ನ ಸರಿ ಎಂದು ಭಾವಿಸುವ ಅಗತ್ಯವಿಲ್ಲ ಎಂದು ಸ್ವಾಮೀಜಿ ಹೇಳಿದ್ದಾರೆ.
ಧರ್ಮಗಳ ಬಗ್ಗೆ ಧರ್ಮ ಗುರುಗಳು ಹೇಳುತ್ತಾರೆ. ಧರ್ಮದ ವಿಚಾರದಲ್ಲಿ ರಾಜಕಾರಣಿಗಳು ಪ್ರವೇಶ ಮಾಡಬಾರದು. ಪಕ್ಷದ ಲಾಭಕ್ಕಾಗಿ, ಚುನಾವಣೆ ಸಂದರ್ಭದಲ್ಲಿ ಇಂತಹ ವಿಷಯ ಬಳಸಿಕೊಳ್ಳುತ್ತಾರೆ. ಮತದಾರರು ಬುದ್ಧಿವಂತರಾಗಬೇಕು. ಇಂಡಿಯಾ ಇತ್ತೀಚೆಗೆ ಬಂದಿದ್ದು. ಬ್ರಿಟಿಷರು ಬಂದ ನಂತರ ಬಂದಿರುವ ಶಬ್ದ ಇಂಡಿಯಾ. ದೇಶ ಹುಟ್ಟಿದಾಗಿನಿಂದಲೂ ನಮ್ಮ ದೇಶದ ಹೆಸರು ಭಾರತವೇ ಆಗಿದೆ. ಊರುಗಳ ಇಂಗ್ಲೀಷ್ ಹೆಸರುಗಳನ್ನು ಬದಲಾಯಿಸಿದ್ದೇವೆ. ಇಂಗ್ಲೀಷರು ಇಟ್ಟಂತಹ ಇಂಡಿಯಾ ಹೆಸರು ಬಿಟ್ಟು ಭಾರತ ಎನ್ನುವುದರಲ್ಲಿ ತಪ್ಪಿಲ್ಲ ಎಂದು ಮೂಜಗು ಸ್ವಾಮೀಜಿ ಹೇಳಿದ್ದಾರೆ..
‘ಅಧರ್ಮ ಅಳಿಸಲು ಶ್ರೀಕೃಷ್ಣನ ಅವತಾರದಂತೆ ನರೇಂದ್ರ ಮೋದಿಯವರು ದೇಶದಲ್ಲಿ ಇದ್ದಾರೆ’
ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ: ಸಂಗ್ರಹ ಘಟಕದ ಬಳಿ ಚರಂಡಿಗೆ ಪೋಲಾಗುತ್ತಿರುವ ನೀರು