ಚಿತ್ರದುರ್ಗ: ಜಿಲ್ಲಾ ಪೌರಾಡಳಿತ ನಿರ್ದೇಶನಾಲಯ ಜಿಲ್ಲಾ ನಗರಾಭಿವೃದ್ಧಿ ಕೋಶ ಪಟ್ಟಣ ಪಂಚಾಯಿತಿ ವತಿಯಿಂದ ಹಮ್ಮಿಕೊಂಡಿರುವ ಪೌರಕಾರ್ಮಿಕರ ದಿನಾಚರಣೆಯನ್ನು ಹಿನ್ನೆಲೆ ಪಟ್ಟಣದ ಎಲ್ಲಾ ಪೌರಕಾರ್ಮಿಕರಿಗೆ ಕ್ರೀಡೆ ವ್ಯಾಯಾಮ ಮತ್ತು ಸಂಗೀತ ಕಾರ್ಯಕ್ರಮಗಳ ಮುಖಾಂತರ ಸನ್ಮಾನ ಮಾಡಲಾಯಿತು.
ಶಿವಕುಮಾರ್ ಮುಖ್ಯ ಅಧಿಕಾರಿಗಳು ಹೇಳುವಂತೆ ಇಂದು ಪೌರ ಕಾರ್ಮಿಕರ ಶ್ರೇಷ್ಠವಾದ ಹಬ್ಬ ಈ ಕಾರ್ಮಿಕರ ದಿನಾಚರಣೆಯನ್ನು ಪೌರಾಡಳಿತ ನಿರ್ದೇಶನಾಲಯ ಜಿಲ್ಲಾಧಿಕಾರಿಗಳ ಯೋಜನೆಯಂತೆ ಪೌರ ಕಾರ್ಮಿಕರಿಗೆ ಆರೋಗ್ಯ ತಪಾಸಣೆ, ಪ್ರೋತ್ಸಾಹ ಧನ, ಕ್ರೀಡಾ ಮತ್ತು ಸಂಬಂಧಿಸಿದ ಪರಿಕರಗಳನ್ನು ನೀಡಿ ಅರ್ಥಪೂರ್ಣವಾಗಿ ಆಚರಣೆ ಮಾಡಲಾಯಿತು. ಪಟ್ಟಣದ ಒಟ್ಟು 23 ಜನ ಪೌರಕಾರ್ಮಿಕರಿಗೆ ಪಟ್ಟಣ ಪಂಚಾಯಿತಿಯ ಸದಸ್ಯರು ಹಾಗೂ ಮುಖ್ಯ ಅಧಿಕಾರಿಗಳು ಸನ್ಮಾನ ಮಾಡಿ ಗೌರವಿಸಲಾಯಿತು
ವಿಶೇಷವೆಂದರೆ:- ನೇರ ಪಾವತಿ ಕಾರ್ಮಿಕರಿಂದ ಕಾಯಂ ಪೌರಕಾರ್ಮಿಕರನ್ನಾಗಿ ತಿಪ್ಪೇಸ್ವಾಮಿ. ಮುನಿಯಪ್ಪ. ರುದ್ರಪ್ಪ. ಎಂಬುವವರನ್ನು ಕಾಯಂಗೊಳಿಸಲಾಯಿತು. ಈ ಸಂದರ್ಭದಲ್ಲಿ ಪಟ್ಟಣ ಪಂಚಾಯತಿ ಸದಸ್ಯರಾದ ಸೈಯದ್ ಅನ್ವರ್, ತಿಪ್ಪೇಸ್ವಾಮಿ, ದುರುಗಪ್ಪ, ಓಬಣ್ಣ ಪಟ್ಟಣ ಪಂಚಾಯತಿ ಮುಖ್ಯ ಅಧಿಕಾರಿ ಶಿವಕುಮಾರ್ ಆರೋಗ್ಯ ನಿರೀಕ್ಷಕರಾದ ರುದ್ರಮುನಿ ಕಂದಾಯ ವಸೂಲಿದಾರ ಸಂದೀಪ್ ಮತ್ತು ಟಿ ತಿಪ್ಪೇಸ್ವಾಮಿ . ಪಟ್ಟಣ ಪಂಚಾಯಿತಿ ನೌಕರರು ಪಾರಿಜಾತ ಮತ್ತಿತರರು ಭಾಗಿಯಾಗಿದ್ದರು.
ವರದಿ :- ಆಂಜನೇಯ ನಾಯಕನಹಟ್ಟಿ
Udupi: ಪರಶುರಾಮ ಥೀಮ್ ಪಾರ್ಕ್ ಗುಣಮಟ್ಟ ಪರೀಕ್ಷಿಸಿದ ಸಚಿವೆ ಹೆಬ್ಬಾಳ್ಕರ್..!
Reliance-Apple: ಐಫೋನ್ ಗ್ರಾಹಕರಿಗೆ ಭರ್ಜರಿ ಆಫರ್ ನೀಡಲಿದೆ ರಿಲಾಯನ್ಸ್ ಜಿಯೋ..!