- Advertisement -
Political News: ಸಮಾನ ಮನಸ್ಕ ವೇದಿಕೆಯಿಂದ ಬೆಂಗಳೂರಿನ ಬಸವ ಸಮಿತಿಯಲ್ಲಿ ನಡೆದ ನಮ್ಮ ನಾಡು ನಮ್ಮ ಆಳ್ವಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ಸಂಗೀತ ನಿರ್ದೇಶಕ ಹಂಸಲೇಖ, ಪ್ರಧಾನಿ ಮೋದಿ ವಿರುದ್ಧ ವ್ಯಂಗ್ಯವಾಡಿದ್ದಾರೆ.
ಪ್ರಧಾನಿ ಮೋದಿ ಸಂಸತ್ಗೆ ನಮಸ್ಕರಿಸಿ, ಒಳಗೆ ಹೋದರು. ಸಂಸತ್ನ್ನೇ ಬದಲಾಯಿಸಿ ಬಿಟ್ಟರು. ಇದೀಗ ಸಂವಿಧಾನಕ್ಕೆ ನಮಸ್ಕರಿಸಿದ್ದಾರೆ. ಸಂವಿಧಾನವೂ ಈಗ ಬದಲಾಗಲಿದೆ ಎಂದು ಹಂಸಲೇಖ ಹೇಳಿದ್ದಾರೆ.
ಪ್ರಧಾನಿ ಮೋದಿ ಸಂವಿಧಾನದ ಪುಸ್ತಕ ಹಿಡಿದು ನಮಸ್ಕರಿಸಿದ ಫೋಟೋ ವೈರಲ್ ಆಗಿದ್ದು, ಈ ಬಗ್ಗೆ ಹಂಸಲೇಖ ಹೇಳಿಕೆ ನೀಡಿದ್ದಾರೆ. ಪ್ರಧಾನಿ ಮೋದಿ ತಬಹುಮತ ಪಡೆದು ಗೆದ್ದು ಬಂದು, ದೇಶಕ್ಕೆ ಏನೋ ಮಾಡುತ್ತಾರೆ ಎಂದು ನಾನು ಆಶಿಸಿದ್ದೆ. ಆದರೆ, ಮೋದಿ ಸಂಸತ್ ನಮಸ್ಕರಿಸಿ, ಒಳಗೆ ಹೋದರು. ಸಂಸತ್ ಬದಲಾಯಿತು. ಇದೀಗ ಸಂವಿಧಾನಕ್ಕೆ ನಮಸ್ಕರಿಸಿದ್ದಾರೆ. ಸಂವಿಧಾನವೂ ಬದಲಾಗಲಿದೆ ಎಂದು ವ್ಯಂಗ್ಯವಾಡಿದ್ದಾರೆ.
- Advertisement -