Saturday, June 21, 2025

Latest Posts

‘ನನ್ನ ವಯಸ್ಸು ಮಜಾ ಮಾಡುವ ವಯಸ್ಸಲ್ಲ. ಮತ್ತು ಮಜಾ ಮಾಡುವ ವ್ಯಕ್ತಿಯು ನಾನಲ್ಲ’

- Advertisement -

Political News: ಚಿತ್ರದುರ್ಗ: ನಾಯಕನಹಟ್ಟಿ: ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದ ಎಲ್ಲಾ ನನ್ನ ಅಭಿಮಾನಿಗಳಿಗೂ ಮತ್ತು ಜನತೆಗೆ ನನ್ನ ಮೇಲೆ ವಿಶ್ವಾಸವನ್ನಿಟ್ಟು ಐದು ಬಾರಿ ಶಾಸಕನಾಗಿ ಮಾಡಿದ್ದು, ಮತ್ತು ಬಳ್ಳಾರಿ ಗ್ರಾಮಾಂತರ ಹಾಗೂ ಕೂಡ್ಲಿಗಿ ಕ್ಷೇತ್ರದಲ್ಲಿ ನನ್ನ ಗೆಲುವಿಗೆ ಕಾರಣರಾದವರಿಗೆ, ನಾನು ಚಿರಋಣಿಯಾಗಿರುತ್ತೇನೆ ಎಂದು  ಮೊಳಕಾಲ್ಮೂರು ಕ್ಷೇತ್ರದ ಶಾಸಕರಾದ  ಎನ್ ವೈ ಗೋಪಾಲಕೃಷ್ಣರವರು ಸನ್ಮಾನ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.

ನಾಯಕನಹಟ್ಟಿಯ ಶ್ರೀ ಗುರು ತಿಪ್ಪೇರುದ್ರಸ್ವಾಮಿ ಸಮುದಾಯ ಭವನದಲ್ಲಿ ತಳಕು ಮತ್ತು ನಾಯಕನಹಟ್ಟಿ ಹೋಬಳಿಯ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಮತ್ತು ಅಭಿಮಾನಿಗಳು ಎನ್ ವೈ ಗೋಪಾಲಕೃಷ್ಣ ರವರಿಗೆ ಮತ್ತು ಚಳ್ಳಕೆರೆ ವಿಧಾನಸಭಾ ಕ್ಷೇತ್ರದ ಟಿ ರಘುಮೂರ್ತಿ ರವರಿಗೆ ಸನ್ಮಾನ ಮಾಡಿದರು.

ಸನ್ಮಾನವನ್ನು ಸ್ವೀಕರಿಸಿ ಮಾತನಾಡಿದ ಶಾಸಕ ಎನ್ ವೈ ಗೋಪಾಲಕೃಷ್ಣರವರು ಮೊಳಕಾಲ್ಮೂರು ಕ್ಷೇತ್ರ ಅತಿ ಹಿಂದುಳಿದ ಕ್ಷೇತ್ರ ಈ ಕ್ಷೇತ್ರದಲ್ಲಿ ನಾನು ಐದು ಬಾರಿ ಶಾಸಕನಾಗಿದ್ದೇನೆ. ನಾನು ಶಾಸಕನಾದ ಮೇಲೆ ಪೊಲೀಸ್ ಠಾಣೆ ಗಳು,  ಮುರಾರ್ಜಿ ಶಾಲೆಗಳು, ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಗಳು,ತಳಕು ಪೊಲೀಸ್ ವಸತಿಗಳು, ನಾಯಕನಹಟ್ಟಿಗೆ ದಿನದ 24 ಗಂಟೆಗಳ ಕಾಲ ವಿದ್ಯುತ್ ಸರಬರಾಜು ಮಾಡಿರುವುದು, ಇನ್ನು ಅನೇಕ ಅಭಿವೃದ್ಧಿ ಕೆಲಸಗಳನ್ನು ನನ್ನ ಅವಧಿಯಲ್ಲಿ ಮಾಡಿದ್ದು.

ಕ್ಷೇತ್ರದ ಜನತೆ ನನ್ನ ಮೇಲೆ ವಿಶ್ವಾಸವನ್ನು ಇಡಿ. ಈ ಕ್ಷೇತ್ರವನ್ನ ಸರ್ವತೋಮುಖ ಅಭಿವೃದ್ಧಿಗೆ ಕೊಂಡೋಯ್ಯುತ್ತೇನೆ, “ನಾನು ನನ್ನದು ನನ್ನಿಂದಲೇ ಎನ್ನುವ ಅಹಂಕಾರವನ್ನು ಬಿಟ್ಟು ” ಪಕ್ಷಾತೀತವಾಗಿ ಅಭಿವೃದ್ಧಿಯ ಕಡೆ ಕೈಜೋಡಿಸಿದರೆ ಮಾತ್ರ ಅಭಿವೃದ್ಧಿ ಸಾಧ್ಯ. ಕ್ಷೇತ್ರದಲ್ಲಿ ಸನ್ಮಾನ ಸಮಾರಂಭಕ್ಕಿಂತಲೂ ಕ್ಷೇತ್ರದ ಅಭಿವೃದ್ಧಿಗಾಗಿ ಸಂವಾದ ಕಾರ್ಯಕ್ರಮವನ್ನು ಇಟ್ಟುಕೊಳ್ಳುವುದು  ಉತ್ತಮ.

ಕೂಡ್ಲಿಗಿ ಕ್ಷೇತ್ರದ ಜನತೆ ಪಕ್ಷಾತೀತವಾಗಿ ಅಭಿವೃದ್ಧಿಯ ಕಾರ್ಯಗಳಿಗೆ ಸಾತ್ ಕೊಟ್ಟಿದ್ದರಿಂದ ಕ್ಷೇತ್ರ ಅಭಿವೃದ್ಧಿಯಾಯಿತು. ಅದೇ ರೀತಿ ಚಳ್ಳಕೆರೆ ಕ್ಷೇತ್ರದ ಶಾಸಕ  ರಘುಮೂರ್ತಿಯವರು ಮತ್ತು ನಾನು ಇಬ್ಬರು ಸೇರಿಕೊಂಡು, ಈ ಕ್ಷೇತ್ರಗಳಿಗೆ ಭದ್ರಾ ಮೇಲ್ದಂಡೆ ಯೋಜನೆಯಿಂದ ಕೆರೆಗಳಿಗೆ ಕೆರೆಗಳಿಗೆ ನೀರು ಹರಿಸುವ ಕೆಲಸ ಮಾಡುತ್ತೇವೆ.

ಗೃಹ  ಮಂತ್ರಿಗಳಾದ ಸನ್ಮಾನ್ಯ ಡಾ. ಜಿ ಪರಮೇಶ್ವರ್ ರವರೊಂದಿಗೆ ಮಾತನಾಡಿ, ನಾಯಕನಹಟ್ಟಿಗೆ ಅಗ್ನಿಶಾಮಕ ಠಾಣೆಯನ್ನು ಸ್ಥಾಪಿಸಲು ಮನವಿ ಮಾಡುತ್ತೇವೆ. ಈ ಕ್ಷೇತ್ರದ ಜನತೆ ನನ್ನ ಮೇಲೆ ಅಭಿಮಾನ ಮತ್ತು ನಂಬಿಕೆಯನ್ನು ಇಟ್ಟಿದ್ದಾರೆ. ನಾನು ಕೂಡ ಅಷ್ಟೇ ಪ್ರಾಮಾಣಿಕವಾಗಿ ಕ್ಷೇತ್ರದ ಅಭಿವೃದ್ಧಿಗೆ ಕೆಲಸ ಮಾಡುತ್ತೇನೆ ಎಂದರು .

ನನ್ನ ವಯಸ್ಸು ಮಜಾ ಮಾಡುವ ವಯಸ್ಸಲ್ಲ. ಮತ್ತು ಮಜಾ ಮಾಡುವ ವ್ಯಕ್ತಿಯು ನಾನಲ್ಲ. ಕಾಂಗ್ರೆಸ್ ಪಕ್ಷದ  ಎ ಐಸಿಸಿ ವತಿಯಿಂದ ನನ್ನನ್ನು ತೆಲಂಗಾಣ ವಿಧಾನಸಭಾ  ಚುನಾವಣೆಯಲ್ಲಿ ಭಾಗವಹಿಸುವಂತೆ ಆದೇಶಿಸಿದ್ದರು. ಅದರ ಪೂರಕವಾಗಿ ನಾವು ತೆಲಂಗಾಣಕ್ಕೆ ಹೋಗಿದ್ದೆ. ಕೆಲವು ಬಿಜೆಪಿ ಕಾರ್ಯಕರ್ತರು ಸಾಮಾಜಿಕ ಜಾಲತಾಣಗಳಲ್ಲಿ ಶಾಸಕ ಎನ್ ವೈ ಗೋಪಾಲಕೃಷ್ಣರವರು ಮೋಜು ಮಸ್ತಿ ಮಾಡುವುದಕ್ಕೆ ತೆಲಂಗಾಣಕ್ಕೆ ಹೋಗಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ಆಧಾರ ರಹಿತ ಇಲ್ಲಸಲ್ಲದ ಕಾಮೆಂಟ್ಗಳನ್ನು ಮಾಡಿದ್ದಾರೆ. ಇದು ಬಿಜೆಪಿ ಪಕ್ಷದವರಿಗೆ ಶೋಭೆ ತರುವಂತದ್ದಲ್ಲ. ಕ್ಷೇತ್ರದ ಅಭಿವೃದ್ಧಿಗಾಗಿ ನನ್ನ ಜೊತೆ ಸಂವಾದ ನಡೆಸಲಿ ಎಂದು ಶಾಸಕ ಎನ್ ವೈ ಗೋಪಾಲಕೃಷ್ಣರವರು ಮಾತನಾಡಿದರು.

ಚಳ್ಳಕೆರೆ ಶಾಸಕ ರಘುಮೂರ್ತಿ ಮಾತನಾಡಿ, ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದ  ವಿಶೇಷವಾದಂತಹ ಕ್ಷೇತ್ರ .7 ಬಾರಿ ಶಾಸಕರಾಗಿರುವ ಎನ್ ವೈ  ಗೋಪಾಲಕೃಷ್ಣ ರವರಿಗೆ ಕಾಂಗ್ರೆಸ್ ಪಕ್ಷ ಸೂಕ್ತ ಸ್ಥಾನ ಮಾನ ಕೊಡಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ. ಎನ್.ವೈ.  ಗೋಪಾಲಕೃಷ್ಣ ಅಣ್ಣನವರು ನೇರವಾಗಿ ಮಾತನಾಡುವಂತಹ ವ್ಯಕ್ತಿ.  ಮೊಳಕಾಲ್ಮೂರು ಕ್ಷೇತ್ರದ ಜನತೆ 5 ಬಾರಿ ಶಾಸಕರಾಗಿ ಆಯ್ಕೆ ಮಾಡಿದ್ದೀರಾ ಈ ಕ್ಷೇತ್ರದ ಜನತೆಗೆ ತುಂಬು ಹೃದಯದ ಧನ್ಯವಾದಗಳು ಸಲ್ಲಿಸುತ್ತೇನೆ ಎಂದರು.

ಚಳ್ಳಕೆರೆ ಮತ್ತು ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರವನ್ನು ಇಬ್ಬರು ಶಾಸಕರು ಜೊತೆಗೂಡಿ ಅಭಿವೃದ್ಧಿಯನ್ನು ಮಾಡುತ್ತೇವೆ ಎಂದು ಭರವಸೆ ನೀಡಿದರು. ಮಾಜಿ ಜಿಲ್ಲಾ ಪಂಚಾಯತಿ ಅಧ್ಯಕ್ಷರಾದ ಬಾಲ್ರಾಜ್ ಮಾತನಾಡಿ ಹತ್ತು ವರ್ಷಗಳ ಕಾಲ ನಮ್ಮಿಂದ ಎನ್ ವೈ  ಗೋಪಾಲ ಕೃಷ್ಣ ದೂರವಾಗಿದ್ದರು  ಮತ್ತೆ ಇದೆ ಕ್ಷೇತ್ರಕ್ಕೆ ಕಾಲಿಟ್ಟಿದ್ದಾರೆ  ಹೆಚ್ಚಿನ ಮತಗಳಿಂದ ಗೆದ್ದಿದ್ದಾರೆ .

ಚಳ್ಳಕೆರೆ ಕ್ಷೇತ್ರದ ಶಾಸಕ   ರಘುಮೂರ್ತಿ  ಮೊಳಕಾಲ್ಮೂರು  ಕ್ಷೇತ್ರದ ಎನ್ ವೈ   ಗೋಪಾಲಕೃಷ್ಣ ಇಬ್ಬರು ಶಾಸಕರು ಜೊತೆಗೂಡಿ ಈ ಭಾಗದಲ್ಲಿ ಹೆಚ್ಚಿನ ಕೆರೆಗಳಿಗೆ ನೀರು ತರುವಂತಹ ಕೆಲಸ ಮಾಡಬೇಕು. ಈ ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗಾಗಿ ಕೈಜೋಡಿಸಬೇಕೆಂದು ಮನವಿ ಮಾಡಿಕೊಂಡರು  ಚಳ್ಳಕೆರೆ ಮತ್ತು ಮೊಳಕಾಲ್ಮೂರು ಕ್ಷೇತ್ರ ಅಭಿವೃದ್ಧಿ ಆಗಬೇಕಾದರೆ ಅದು ನಿಮ್ಮಿಂದ ಸಾಧ್ಯ ಎಂದ ತಿಸಿದರು

ಇದೇ ಸಂದರ್ಭದಲ್ಲಿ ಶ್ರೀ ಗುರು ತಿಪ್ಪೇರುದ್ರಸ್ವಾಮಿ ಒಳಮಟ್ಟದ ಮುಂಭಾಗದಲ್ಲಿರುವ ಮಳಿಗೆಗಳನ್ನು ಉದ್ಘಾಟಿಸಿದರು. ಮತ್ತು 10 ಲಕ್ಷ ಅನುದಾನದ ಹೈಟೆಕ್ ಬಸ್ ತಂಗುದಾಣ ಶಂಕುಸ್ಥಾಪನೆ ಮಾಡಿದರು.

ಇಸ್ರೇಲ್- ಪ್ಯಾಲೇಸ್ತಿನ್ ಸಮಸ್ಯೆ ಬಗ್ಗೆ ಇಸ್ರೇಲ್ ಅಧ್ಯಕ್ಷರ ಬಳಿ ಪ್ರಧಾನಿ ಮೋದಿ ಮಾತು

‘ಡಯಾಲಿಸಿಸ್ ಸಮಸ್ಯೆಗೆ ಹಿಂದಿನ ಸರ್ಕಾರದಲ್ಲಾದ ಎಡವಟ್ಟುಗಳು ಕಾರಣವೇ ಹೊರತು, ನಮ್ಮ ಸರ್ಕಾರದ್ದಲ್ಲ’

‘ಬಾಂಬ್ ಎಲ್ಲಿ ಸ್ಫೋಟ ಆಗಿದೆ? ಕರೆ ಬಂದ್ರೆ ಏನಾಯ್ತು, ಅಂತಹ ಕರೆಗಳು ಸಾಕಷ್ಟು ಬರ್ತವೆ’

- Advertisement -

Latest Posts

Don't Miss