Mysuru News: ಮಗಳು ಪ್ರಿಯಕರನ ಜತೆ ಓಡಿಹೋಗಿದ್ದು, ಮರ್ಯಾದೆ ಹಾಳಾಯಿತೆಂದು ಆಕೆಯ ಪೋಷಕರು ನದಿಗೆ ಹಾಾರಿ ಪ್ರಾಣ ಬಿಟ್ಟಿ ಘಟನೆ ಮೈಸೂರಿನಲ್ಲಿ ನಡೆದಿದೆ.
ಮೈಸೂರು ಜಿಲ್ಲೆಯ ಹೆಚ್.ಡಿ.ಕೋಟೆ ತಾಲೂಕಿನ ಬೂದನೂರು ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಮಹದೇವಸ್ವಾಮಿ, ಪತ್ನಿ ಮಂಜುಳಾ, ಮಗಳು ಹರ್ಷಿತಾ ಕೆರೆಗೆ ಹಾಕಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಇವರ ಮನೆ ಮಗಳಾದ ಅರ್ಪಿತಾ ಪ್ರಿಯಕರನ ಜತೆ ಓಡಿ ಹೋಗಿದ್ದಳು. ಈ ಹಿನ್ನೆಲೆ ಮನನ“ಂದ ಕುಟುಂಬ ಆತ್ಮಹತ್ಯೆಯ ನಿರ್ಧಾರ ಮಾಡಿದೆ.
ಬೂದನೂರು ಕೆರೆಯ ಏರಿ ಮೇಲೆ ಬೈಕ್, ಮೂವರ ಚಪ್ಪಲಿ ಪತ್ತೆಯಾಗಿದೆ. ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಮತ್ತು ಪೋಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಮೃತದೇಹಗಳ ಪತ್ತೆಗಾಗಿ ಶೋಧ ಕಾರ್ಯ ಮುಂದುವರೆದಿದೆ. ನಾಪತ್ತೆಯಾದವರಿಗಾಗಿ ಹುಡುಕಾಟವೂ ನಡೆದಿದೆ. ಹೆಚ್.ಡಿ.ಕೋಟೆ ಪೋಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ನಿನ್ನೆಯಷ್ಟೇ ಹಾಸನದಲ್ಲಿ ಯುವತಿಯ“ಬ್ಬಳು ತಾಳಿ ಕಟ್ಟುವ ಸಂದರ್ಭದಲ್ಲಿ ಮದುವೆ ಬೇಡವೆಂದು ಹೇಳಿ ಎಲ್ಲರಿಗೂ ಶಾಕ್ ನೀಡಿದ್ದಳು. ಕಡೆಗೂ ವಧು ವರನ ಕುಟುಂಬದವರು ಪೋಲೀಸ್ ಠಾಣೆಯ ಮೇಟ್ಟಿಲೇರುವಂತೆ ಮಾಡಿದ್ದಳು. ಬಳಿಕ ಪ್ರಿಯಕರನ ಜತೆ ವಿವಾಹವಾದಳು.