Special Interview: ಕಾಂಗ್ರೆಸ್ ನಾಯಕಿಯಾಗಿರುವ ನಜ್ಮಾ ಚಿಕ್ಕನೇರಳೆ ಸಂದರ್ಶನದಲ್ಲಿ ಮಾತನಾಡಿದ್ದು, ತಮ್ಮ ಬಾಲ್ಯದಲ್ಲಿ ನಡೆದ ಘಟನೆಯ“ಂದರ ಬಗ್ಗೆ ವಿವರಿಸಿದ್ದಾರೆ.
5 ನೇ ಕ್ಲಾಸಿನಲ್ಲಿರುವಾಗ ಹೊಗೆಸ“ಪ್ಪಿಗೆ ಗೊಬ್ಬರ ಹಾಕಲು ಮಕ್ಕಳನ್ನು ಕರೆಯುತ್ತಿದ್ದರು. ಹಾಗೆ ನಜ್ಮಾ ಕೆಲಸಕ್ಕೆ ಹೋದಾಗ, ಕೈ ಗಲೀಜಾಗಿದೆ ಎಂದು ಕೈ ಕ್ಲೀನ್ ಮಾಡಲು ಹೋಗಿ ಬಾವಿಯಲ್ಲಿ ಬಿದ್ದಿದ್ದರು. ಆಗ ಅವರನ್ನು ಓರ್ವ ವ್ಯಕ್ತಿ ಕಾಪಾಡಿದ್ದರು.
ಈ ಬಗ್ಗೆ ಪ್ರಶ್ನಿಸಿರುವ ನಜ್ಮಾ, ನಮ್ನನ್ನು ಉಳಿಸಲು, ನಮಗೆ ವಿದ್ಯೆ ನೀಡಲು, ಕೆಲಸ ಮಾಡಲು ಈ ಎಲ್ಲ ವಿಚಾರಗಳಲ್ಲೂ ಜಾತಿ ಧರ್ಮದ ವಿಚಾರ ಬರುವುದಿಲ್ಲ. ಆದರೆ ಮನೆಗೆ ಬರಲು, ಮನೆಗೆ ಹೋಗಲು, ತಿನ್ನುವ ವಿಷಯ ಬಂದಾಗ, ಸ್ಪರ್ಶಿಸುವ ವಿಷಯ ಬಂದಾಗ ಮಾತ್ರ, ಜಾತಿ-ಧರ್ಮದ ಬಗ್ಗೆ ಯಾಕೆ ಕೇಳುತ್ತಾರೆ ಎಂದು ನಜ್ಮಾಗೆ ಪ್ರಶ್ನೆ ಬಂದಿತ್ತಂತೆ.
ಬಳಿಕ ತನ್ನ ಮನೆಯಿಂದಲೇ ತಾರತಮ್ಯ ತೆಗೆದು ಹಾಕುವ ಪ್ರಯತ್ನವನ್ನು ನಜ್ಮಾ ಮಾಡಿದರಂತೆ. ನಂತರ ಶಾಲಾ- ಕಾಲೇಜು ದಿನಗಳಲ್ಲಿ ನವ ಕರ್ನಾಟಕ ಪತ್ರಿಕೆಯ ಕೆಲ ಪುಸ್ತಕಗಳನ್ನು ಓದುವ ಮೂಲಕ, ಹಲವು ವಿಷಯಗಳನ್ನು, ಚಿಂತನೆಗಳ ಬಗ್ಗೆ ತಿಳಿದುಕ“ಂಡರು. ರಾಜಕೀಯಕ್ಕೆ ಬರಬೇಕು ಎಂದು ನಜ್ಮಾ ಎಂದಿಗೂ ಯೋಚಿಸಿರಲಿಲ್ಲವಂತೆ. ಆದರೆ ಕಾರಣಾಂತರಗಳಿಂದ ರಾಜಕೀಯಕ್ಕೆ ಬಂದಿದ್ದು ಅಂತಾರೆ ನಜ್ಮಾ. ಸಂಪೂರ್ಣ ಸಂದರ್ಶನಕ್ಕಾಗಿ ವೀಡಿಯೋ ನೋಡಿ.




