Thursday, June 19, 2025

Latest Posts

‘ಸಿದ್ದರಾಮಯ್ಯ ಒಬ್ಬ ನೀಚ ರಾಜಕಾರಣಿ, ನಿಜವಾದ ದಲಿತ ವಿರೋಧಿ’

- Advertisement -

ಮಂಡ್ಯ: ಶ್ರೀರಂಗಪಟ್ಟಣಕ್ಕೆ ಭೇಟಿ ನೀಡಿ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್, ಸಿದ್ದರಾಮಯ್ಯ ವಿರುದ್ಧ ಹಾಸ್ಯ ಮಾಡಿದ್ದಾರೆ. ಅಂಗಡಿಯಲ್ಲಿ ಸಿಎಂ ಬೊಮ್ಮಯಿ ಫೋಟೊ ಕೇಳಿದ್ವಿ. ಬೊಮ್ಮಯಿ ಫೋಟೊ ಇಲ್ಲ, ಸಿದ್ದರಾಮಯ್ಯ ಪೋಟೊ ಇದೆ ಅಂದ್ರು. ಕಳೆದ 10 ವರ್ಷದಿಂದ ಸಿದ್ದರಾಮಯ್ಯ 5 ಫೋಟೊ ಕಾಲಿಯಾಗಿಲ್ಲ. 5 ನಿಮಿಷದಲ್ಲಿ ಬೊಮ್ಮಯಿ ಫೋಟೊ ಕಾಲಿಯಾಗಿದೆ. ಕರ್ನಾಟಕದಲ್ಲಿ ಸಿದ್ದರಾಮಣ್ಣನ ಹವಾ ಇಲ್ಲ. ಬೊಮ್ಮಾಯಿ, ಯಡಿಯೂರಪ್ಪ ಹವಾ ಮಾತ್ರ ಇದೆ. ಕಲ್ಯಾಣ ರಾಜ್ಯ ಮಾಡೋದು ಬಿಜೆಪಿಯಿಂದ ಮಾತ್ರ ಎಂದು ನಳೀನ್ ಹೇಳಿದ್ದಾರೆ.

ನದಿಯ ಮೇಲೆ ಆಣೆ ಮಾಡಲು ಹೋಗಿ ಕಾಲು ಜಾರಿ ಬಿದ್ದು ಇಬ್ಬರ ದುರ್ಮರಣ..

ರಾಜ್ಯದ ಎಸ್ಸಿ ಎಸ್ಟಿ ಕಣ್ಣೀರು ವರೆಸಿದ್ದು ಬೊಮ್ಮಯಿ. ಮೀಸಲಾತಿ ಅವಕಾಶ ಕೊಟ್ಟಿದ್ದು ಬಿಜೆಪಿ ಪಕ್ಷ. ಪೌರ ಕಾರ್ಮಿಕರ ಪರ ನಿಂತಿದ್ದು ಬೊಮ್ಮಯಿ ಸರ್ಕಾರ. ರೈತರ ಮಕ್ಕಳು ವಿದ್ಯಾ ವಂತರಾಗಲು ರೈತರ ವಿದ್ಯಾನಿಧಿ ಯೋಜನೆ. ಹೈನುಗಾರಿಕೆ ಬ್ಯಾಂಕ್ ತರುವ ಸಂಕಲ್ಪವನ್ನ ಬಿಜೆಪಿ ಮಾಡುತ್ತೆ. ಯಾವ ಸಿದ್ದರಾಮಣ್ಣ? ಗೋ ಹತ್ಯೆ ನಿಷೇಧ ತಂದ್ರೆ ವಾಪಸು ತೆಗೆದುಕೊಳ್ಳಿ ಅಂತಾರೆ. ಮತಾಂತರ ನಿಷೇಧ ಕಾಯ್ದೆ ತಂದ್ರೆ ವಾಪಸ್ ಅಂತಾರೆ. ಕರ್ನಾಟಕದ ಅಭಿವೃದ್ಧಿ ಚಿಂತನೆ ಬಿಜೆಪಿ ಸರ್ಕಾರದು ಎಂದು ನಳೀನ್ ಹೇಳಿದ್ದಾರೆ.

ಇನ್ನು ಸಿದ್ದರಾಮಯ್ಯ ವಿರುದ್ಧ ಕಿಡಿ ಕಾರಿದ ನಳೀನ್, ಸಿದ್ದರಾಮಯ್ಯ ಒಬ್ಬ ನೀಚ ರಾಜಕಾರಣಿ. ನಿಜವಾದ ದಲಿತ ವಿರೋಧಿ ನಾಯಕ ಸಿದ್ದರಾಮಯ್ಯ. ದಲಿತರು ಸಿಎಂ ಆಗುತ್ತಾರೆ ಎಂದು ಖರ್ಗೆ ಹಾಗೂ ಪರಮೇಶ್ವರ್ ಅವರನ್ನು ಸೋಲಿಸಿದರು. ಸೋನಿಯಾ ಗಾಂಧಿ ಕಾಲು ಹಿಡಿದು ಭಿಕ್ಷೆ ಬೇಡಿ ಸಿಎಂ ಆದ್ರು. ಪಕ್ಷಕ್ಕೆ ಬಂದ ಮೇಲೂ ಕುತಂತ್ರ ಮಾಡಿದರು. ಮುಂದೆ ಡಿ.ಕೆ.ಶಿವಕುಮಾರ್ ಗೆಲ್ಲೋದಕ್ಕು ಸಿದ್ದರಾಮಯ್ಯ ಬಿಡಲ್ಲ ಎಂದು ನಳೀನ್ ಕಿಡಿ ಕಾರಿದ್ದಾರೆ.

ಕ್ರೇನ್ ವಾಹನ ಹರಿದು ವಿದ್ಯಾರ್ಥಿನಿ ದಾರುಣ ಸಾವು…

ಅಲ್ಲದೇ, ಕಾಂಗ್ರೆಸ್ ಅನ್ನು ಜನರು ತಿರಸ್ಕರಿಸುತ್ತಿದ್ದಾರೆ. ದೇಶದಲ್ಲಿ ಪರಿವರ್ತನೆಯಾಗ್ತಿದೆ. ಮುಂದಿನ ಚುನಾವಣೆಯಲ್ಲಿ 150 ಸ್ಥಾನವನ್ನ ಬಿಜೆಪಿ ಗೆಲ್ಲುತ್ತೆ. ಮತ್ತೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುತ್ತೆ. ಡಿಕೆಶಿ ಭ್ರಷ್ಟಾಚಾರದ ಬಗ್ಗೆ ಮಾತನಾಡ್ತಾರೆ? ತಿಹಾರ್ ಜೈಲಿಗೆ ಯಾಕೆ ಹೋದ್ರಿ? ನಿಮ್ಮ ಮೇಡಂ ಸೋನಿಯಾ ಗಾಂಧಿ ಯಾಕೆ ಬೇಲ್ ನಲ್ಲಿದ್ದಾರೆ.? ನಿಮ್ಮ ಬಾವ ರಾಹುಲ್ ಗಾಂಧಿ ಯಾಕೆ ಬೆಲ್ ನಲ್ಲಿದ್ದಾರೆ? ಭ್ರಷ್ಟಾಚಾರದ ಪಾರ್ಟಿ ಕಾಂಗ್ರೆಸ್. ಜನರು ಬುದ್ದಿವಂತರಾಗಿದ್ದಾರೆ, ಬಿಜೆಪಿಗೆ ಬಲ ಕೊಡ್ತಾರೆ ಎಂದು ನಳೀನ್ ಕುಮಾರ್ ವಿಶ್ವಾಸ ವ್ಯಕ್ತ ಪಡಿಸಿದ್ದಾರೆ.

- Advertisement -

Latest Posts

Don't Miss