Political News: ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದಿರುವ ಹಣಕಾಸು ದುರ್ವ್ಯವಹಾರ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯನವರೇ ರಾಜೀನಾಮೆ ಕೊಡಬೇಕಾದ ಪರಿಸ್ಥಿತಿ ಬಂದಿದೆ. ಆ ಕಾರಣಕ್ಕೇನೆ ಸಚಿವ ನಾಗೇಂದ್ರ ಅವರನ್ನ ಮೊದಲೆ ಬಲಿ ಕೊಡುವ ಕೆಲಸವನ್ನ ಸಿಎಂ ಮಾಡಿದ್ದಾರೆಂದು ಶಾಸಕ ಮಹೇಶ್ ಟೆಂಗಿನಕಾಯಿ ಆರೋಪಿಸಿದರು.
ಹುಬ್ಬಳ್ಳಿಯಲ್ಲಿ ಮಾದ್ಯಮದ ಜತೆಗೆ ಮಾತನಾಡಿದ ಅವರು, ನಾಗೇಂದ್ರ ರಾಜೀನಾಮೆಯೊಂದಿಗೆ ಇದು ನಿಲ್ಲೊದಿಲ್ಲ. ಪ್ರಕರಣದಲ್ಲಿ ಇನ್ನು ಹಲವರ ತಲೆದಂಡಗಳಾಗಲಿವೆ. ವಿಶೇಷವಾಗಿ ಹಣಕಾಸು ಖಾತೆಯನ್ನ ಸ್ವತಃ ಸಿಎಂ ಸಿದ್ದರಾಮಯ್ಯನವರೇ ನಿರ್ವಹಣೆ ಮಾಡುತ್ತಿದ್ದಾರೆ. ಅಂದರೆ ನಿಮ್ಮ ಖಾತೆಯಿಂದಲೇ ಹಣದ ವರ್ಗಾವಣೆಯಾಗಿದೆ. ನಿಮ್ಮ ಮೂಗಿನಡಿಯಲ್ಲೇ ಅವ್ಯವ್ಯಹಾರ ನಡೆದಿದೆ. ಇದಕ್ಕೆ ಯಾರೂ ಹೊಣೆಯಾಗ್ತಾರೆ.
ಇವತ್ತು ಸರ್ಕಾರವನ್ನೇ ವಜಾಗೊಳಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಭ್ರಷ್ಟಾಚಾರವೆಂಬುವುದು ಹದ್ದುಮೀರಿ ಹೋಗಿದೆ. ಅದರಲ್ಲೂ ವಿಶೇಷವಾಗಿ ವಾಲ್ಮಿಕಿ ಅಭಿವೃದ್ಧಿ ನಿಗಮದ ಹಗರಣ ಸರ್ಕಾರಕ್ಕೆ ಖಂಡಿತ ಉರುಳಾಗುತ್ತದೆ. ಹೀಗಾಗಿ ಈ ಸರ್ಕಾರ ಬಿದ್ದರೂ ಕೂಡ ಆಶ್ಚರ್ಯ ಪಡಬೇಕಿಲ್ಲ. ನಿಗಮದ ಹಣ ರಾಜ್ಯದ ಗಡಿದಾಟಿ ವರ್ಗಾವಣೆಗೊಂಡಿವೆ. ನಿಗಮದ ಖಾತೆಯಲ್ಲಿದ್ದ ಹಣ ಹೈದರಾಬಾದ್ ಗೆ ಹೇಗೆ ಹೊಯಿತು. ಇದೆಲ್ಲ ನೊಡಿದರೆ ಇದು ದೊಡ್ಡ ಹಗರಣವಾಗಿದ್ದು, ಇದರಲ್ಲಿ ಹಲವರು ರಾಜೀನಾಮೆ ಅಲ್ಲ ಜೈಲು ಪಾಲಾಗಬೇಕಾಗುತ್ತದೆ ಎಂದು ಹೇಳಿದರು.
ಹುಬ್ಬಳ್ಳಿಯ ಮೂರು ದಿಗ್ಗಜರು ದಿಲ್ಲಿಗೆ : ಮಂತ್ರಿ ಸ್ಥಾನ ಯಾರ ಹೆಗಲಿಗೆ..?

