ಹಾಸನ: ಹಾಸನದಲ್ಲಿ ಸಕಲೇಶಪುರ ಕ್ಷೇತ್ರದ ಚುನಾವಣಾ ಕಣ ರಂಗೇರಿದ್ದು, ಜೆಡಿಎಸ್ ಅಭ್ಯರ್ಥಿ ಹೆಚ್. ಕೆ. ಕುಮಾರಸ್ವಾಮಿ ಪರ ನಾರ್ವೆ ಸೋಮಶೇಖರ್ ಪ್ರಚಾರ ಆರಂಭಿಸಿದ್ದಾರೆ. ಪ್ರಚಾರ ವೇಳೆ ಮಾಜಿ ಜಿ.ಪಂ.ಸದಸ್ಯೆ ಚಂಚಲಾ ಕುಮಾರಸ್ವಾಮಿ, ನಟಿ ದಾಮಿನಿ ಕೂಡ ಸಾಥ್ ಕೊಟ್ಟಿದ್ದಾರೆ.
ಸಕಲೇಶಪುರ ಕ್ಷೇತ್ರದ ಗೊರೂರಿನಲ್ಲಿ ಬೈಕ್ ರ್ಯಾಲಿ ನಡೆದಿದ್ದು, ಸಾವಿರಾರು ಕಾರ್ಯಕರ್ತರು, ಅಭಿಮಾನಿಗಳ ಜೊತೆ ಬೈಕ್ ರ್ಯಾಲಿ ನಡೆಸಿ ಸೋಮಶೇಖರ್ ಪ್ರಚಾರ ನಡೆಸಿದ್ದಾರೆ. ಈ ವೇಳೆ ಮಾತನಾಡಿದ ಸೋಮಶೇಖರ್, ಈ ಬಾರಿ ಹೆಚ್.ಡಿ.ಕುಮಾರಸ್ವಾಮಿ ಸಿಎಂ ಆಗ್ತಾರೆ. ಹೆಚ್.ಕೆ.ಕುಮಾರಸ್ವಾಮಿ ಗೆಲ್ಲಿಸಿ ಹೆಚ್ಡಿಕೆ ಕೈ ಬಲಪಡಿಸೋಣ. ಹೆಚ್.ಡಿ.ಕುಮಾರಸ್ವಾಮಿ 5 ವರ್ಷ ಕಾಲ ಸಿಎಂ ಮಾಡಲು ಬೆಂಬಲಿಸುತ್ತೇನೆ. ಈ ಬಾರಿ ಹೆಚ್ಡಿಕೆ ತಿಂಗಳುಗಳ ಕಾಲ ಸಿಎಂ ಅಲ್ಲ, ಪೂರ್ಣ 5 ವರ್ಷ ಸಿಎಂ ಆಗಿರ್ತಾರೆ. ಹೆಚ್ಡಿಕೆ ಜೊತೆ ನಾ ಇರುತ್ತೇನೆ ಎಂದು ಹೇಳಿದ್ದಾರೆ.
ದೇವೇಗೌಡರು 91 ನೇ ವಯಸ್ಸಿನಲ್ಲೂ ಜನರಿಗಾಗಿ ಸರ್ಕಾರ ತರಲು ಹೋರಾಡುತ್ತಿದ್ದಾರೆ. ದೇವೇಗೌಡರ ಹೋರಾಟಕ್ಕೆ ಎಲ್ಲರೂ ಬೆಂಬಲ ನೀಡಿ ಎಂದು ನಾರ್ವೆ ಸೋಮಶೇಖರ್ ಮನವಿ ಮಾಡಿದ್ದಾರೆ.
‘ಸ್ವರೂಪ್ಗಾಗಿ ಭವಾನಿ ತ್ಯಾಗ ಮಾಡಿದ್ದಾರೆ, ಅವನನ್ನು 3ನೇ ಮಗ ಎಂದಿದ್ದಾರೆ’
ಪ್ರಧಾನಮಂತ್ರಿಗೇ ಬಿಜೆಪಿಯವರು ಬೀದಿಗೆ ಇಳ್ಸಿದ್ದಾರೆ : ಪ್ರಧಾನಿ ರೋಡ್ಶೋ ಬಗ್ಗೆ ರೇವಣ್ಣ ವ್ಯಂಗ್ಯ