Saturday, June 21, 2025

Latest Posts

ಬಿಆರ್ ಟಿಎಸ್ ನೌಕರರಿಗೆ ಒಂದು ದಿನದ ತರಬೇತಿ

- Advertisement -

Hubballi News: ಹುಬ್ಬಳ್ಳಿ: ಇಲ್ಲಿಯ ಕೆಎಲ್ಇ ತಾಂತ್ರಿಕ ವಿಶ್ವವಿದ್ಯಾಲಯ ಸ್ಕೂಲ್ ಆಫ್ ಮ್ಯಾನೇಜ್ ಮೆಂಟ್ ಸ್ಟಡಿಸ್ ಮತ್ತು ರೀಸರ್ಚ್ ನಲ್ಲಿ ಗುರುವಾರ ಹುಬ್ಬಳ್ಳಿ ಧಾರವಾಡ ತ್ವರಿತ ಬಸ್ ಸಂಚಾರ ವ್ಯವಸ್ಥೆಯ (ಎಚ್ಡಿ ಬಿಆರ್ಟಿಎಸ್) ನೌಕರರಿಗೆ ಒಂದು ದಿನದ ತರಬೇತಿ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಎನ್ ಡಬ್ಲ್ಯುಕೆಆರ್ಟಿಸಿ ಆಡಳಿತಾಧಿಕಾರಿ ಗುರುಪ್ರಸಾದ ಹೊಗಾಡಿ ಅವರು ಮಾತನಾಡಿ, ಉದ್ಯೋಗಿಗಳ ಕೌಶಲ ಮತ್ತು ಜ್ಞಾನ ಹೆಚ್ಚಿಸುವಲ್ಲಿ ತರಬೇತಿಯು ಪ್ರಮುಖ ಪಾತ್ರ ವಹಿಸಿದೆ ಎಂದು ಹೇಳಿದರು.

ವಿಭಾಗೀಯ ನಿಯಂತ್ರಣಾಧಿಕಾರಿ ವಿವೇಕಾನಂದ ವಿಶ್ವಜ್ಞ ಮಾತನಾಡಿ, ನೌಕರರ ಸಮಸ್ಯೆಗಳನ್ನು ಪರಿಹರಿಸಲು ತರಬೇತಿ ವಿನ್ಯಾಸಗೊಳಿಸಲಾಗಿತ್ತು ಎಂದರು. ಸಂಪನ್ಮೂಲ ವ್ಯಕ್ತಿ ಡಾ. ನಾಗರಾಜ ನವಲಗುಂದ ಅವರು, ಉತ್ತಮ ಗ್ರಾಹಕ ಸೇವಾ ಕೌಶಲಗಳನ್ನು ಅಭಿವೃದ್ಧಿಪಡಿಸುವುದು ಮತ್ತು ಪ್ರಯಾಣಿಕರ ಕುಂದುಕೊರತೆ ಪರಿಹಾರ ಕುರಿತು ವಿವರಿಸಿದರು.

ಡಾ. ಮೃತ್ಯುಂಜಯ ಚವಣ್ಣವರ ಅವರು, ವೈಯಕ್ತಿಕ ಹಣಕಾಸು ನಿರ್ವಹಣೆ ಬಗ್ಗೆ, ಡಾ. ಜಿ.ಎಸ್. ಹಿರೇಮಠ ಮತ್ತು ಡಾ. ಸುವರ್ಣ ನಿಂಬಗಲ್ ಅವರು, ಕೆಲಸದ ಸ್ಥಳದಲ್ಲಿ ವೃತ್ತಿಪರ ನಡವಳಿಕೆ ನಿಮಿರ್ಸುವುದು ಮತ್ತು ಒತ್ತಡ ನಿರ್ವಹಣೆ ಕುರಿತು ಮಾತನಾಡಿದರು.

ಅಧಿಕಾರಿಗಳಾದ ರಾಜ್ಕುಮಾರ್ ಜಿ.ಎಂ., ಮಂಜುನಾಥ ಜೆ., ಸಂತೋಷ ಕಾಮತ್,- ರವಿ ಅಂಚಿಗಾವಿ, ಇತರರು ಉಪಸ್ಥಿತರಿದ್ದರು.

‘ನಾನೇ ಅಂತರ್ಜಾತಿ ವಿವಾಹ ಆಗಿದ್ದೇನೆ. ನಾನೇನು ಚೇಂಜ್ ಆಗಿದ್ದೀನಾ..?’

ಶಿಕ್ಷಕರ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಅ.21 ರಂದು ಹುಬ್ಬಳ್ಳಿಯಿಂದ ಧಾರವಾಡಕ್ಕೆ ಪಾದಯಾತ್ರೆ

ಕೆಪಿಸಿಸಿ ಕಾರ್ಯಾಧ್ಯಕ್ಷ ಸ್ಥಾನಕ್ಕೆ ತಮ್ಮ ಹೆಸರು ಪ್ರಸ್ತಾಪ ವಿಚಾರಕ್ಕೆ ಸ್ಪಷ್ಟನೆ ನೀಡಿದ ಸವದಿ..

- Advertisement -

Latest Posts

Don't Miss