ಬಿಹಾರ : ಪಟ್ನಾ(patna) ಸಾಹಿಬ್ ಗುರುದ್ವಾರ ಶ್ರೀ ಹರ್ಮಂದಿರ್ ಸಾಹಿಬ್(Sri Harmandir Sahib) ನ ಮುಖ್ಯ ಗ್ರಂಥಿ, ಭಾಯಿ ರಾಜೇಂದ್ರಸಿಂಗ್(Bhai Rajendra Singh)ಇಂದು ನಿಧನರಾಗಿದ್ದಾರೆ. ಅವರ ಕುತ್ತಿಗೆ ಮೇಲೆ ಸಣ್ಣ ಚಾಕುವಿನಿಂದ ಮಾಡಲಾದ ಗಾಯದ ಗುರುತು ಕಂಡುಬಂದಿದ್ದು, ರಕ್ತಸ್ರಾವವಾಗಿದೆ. ಇದರಿಂದ ಅವರು ಸಾವು ಸಹಜವಲ್ಲ, ಸಹಜವಾಗಿ ಸತ್ತಿಲ್ಲ ಎಂದು ಅವರನ್ನು ಯಾರಾದರೂ ಕೊಲೆ ಮಾಡಿದ್ದಾರಾ? ಅಥವಾ ಅವರೆ ಚಾಕುವಿನಿಂದ ಕತ್ತು ಕುಯ್ದುಕೊಂಡು ಆತ್ಮಹತ್ಯೆ(Suicide) ಮಾಡಿಕೊಂಡಿದ್ದಾರಾ ಎಂಬುದು ಪೋಸ್ಟ್ ಮಾರ್ಟಂ(Post mortem)ಮೂಲಕ ಸತ್ಯ ತಿಳಿಯಬೇಕಿದೆ. ಇನ್ನು ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಬೇರೆ ಕೆಲವು ಸಮಸ್ಯೆಗಳಿಂದ ಬಳಲುತ್ತಿದ್ದ ಭಾಯಿ ರಾಜೇಂದ್ರ ಸಿಂಗ್ರನ್ನು ಜನವರಿ 13ರಂದು ಪಟ್ನಾದ ಪಿಎಂಸಿಎಚ್ ಆಸ್ಪತ್ರೆಗೆ(Super Specialty Hospital PMCH) ದಾಖಲು ಮಾಡಲಾಗಿತ್ತು. ಅವರು, ಭಾನುವಾರ ರಾತ್ರಿ 2.45ರ ಹೊತ್ತಿಗೆ ಮೃತಪಟ್ಟಿದ್ದಾರೆ. ಈ ಬಗ್ಗೆ ಮಾಧ್ಯಮಗಳಿಗೆ ಹೇಳಿಕೆ ನೀಡಿದ ರಾಜೇಂದ್ರ ಸಿಂಗ್ ಪುತ್ರ ದಯಾ ಸಿಂಗ್(Son Daya Singh), ನನ್ನ ತಂದೆಯವರ ಆರೋಗ್ಯ ಹದಗೆಟ್ಟಿತ್ತು. ಆದರೆ ಚಿಕಿತ್ಸೆಯ ಬಳಿಕ ತುಂಬ ಸುಧಾರಣೆಯಾಗಿತ್ತು. ಆದರೆ ನಿನ್ನೆ ಅವರ ಒಮ್ಮೆಲೇ ಉಸಿರಾಡಲು ಕಷ್ಟಪಟ್ಟರು. ವೈದ್ಯರನ್ನು ಕರೆಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗಲಿಲ್ಲ. ಅವರ ಕುತ್ತಿಗೆಯ ಮೇಲೆ ಚಿಕ್ಕ ಚಾಕುವಿನಿಂದ ಹೊಡೆದ ಗುರುತು ಇದೆ. ಮೃತದೇಹದ ಪೋಸ್ಟ್ಮಾರ್ಟಮ್ ಆದ ಬಳಿಕವಷ್ಟೇ ಸತ್ಯ ಸ್ಪಷ್ಟವಾಗಲಿದೆ ಎಂದು ತಿಳಿಸಿದ್ದಾರೆ.
ಗುರುದ್ವಾರದ ಮುಖ್ಯಗ್ರಂಥಿ ಭಾಯಿ ರಾಜೇಂದ್ರ ಸಿಂಗ್ ಸಾವಿಗೆ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಅವತಾರ್ ಸಿಂಗ್, ಪ್ರಧಾನ ಕಾರ್ಯದರ್ಶಿ ಇಂದ್ರಜಿತ್ ಸಿಂಗ್ ಮತ್ತು ಇತರ ಪದಾಧಿಕಾರಿಗಳು, ಸದಸ್ಯರು ಸಂತಾಪ ಸೂಚಿಸಿದ್ದಾರೆ. ಗುರುದ್ವಾರ ಪ್ರಬಂಧಕ್ ಸಮಿತಿ ಸದಸ್ಯ ಮಹೇಂದ್ರ ಪಾಲ್ ಸಿಂಗ್ ದಿಲ್ಲೋನ್, ಸರ್ದಾರ್ ರಾಜಾ ಸಿಂಗ್, ತ್ರಿಲೋಕ್ ಸಿಂಗ್ ನಿಶಾದ್ ಇತರರು ದುಃಖ ವ್ಯಕ್ತಪಡಿಸಿದ್ದು, ಸೂಕ್ತ ತನಿಖೆಗೆ ಆಗ್ರಹಿಸಿದ್ದಾರೆ.