ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳು ಕೊರೊನಾ ನಿಯಂತ್ರಣಕ್ಕೆ ಸಂಭoದಿಸಿದoತೆ ಮಾರ್ಗಸೂಚಿಗಳನ್ನು ಹೊರಡಿಸಿದ್ದವು, ಆದರೆ ಕಾಂಗ್ರೆಸ್ ಮಾಡಿದ್ದೇ ಬೇರೆ ಕಾಂಗ್ರೆಸ್ ಬೇಜವಬ್ದಾರಿ ತನವನ್ನು ಜನರು ಮರೆತಿಲ್ಲ ಮತ್ತು ಕ್ಷಮಿಸುವುದು ಇಲ್ಲ.ಎಂದು ಆರೋಗ್ಯ ಸಚಿವ ಡಾ,ಕೆ ಸುಧಾಕರ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಡಾ,ಕೆ ಸುಧಾಕರ್ ರವರು ಕಾಂಗ್ರೆಸ್ ಪಾದಯಾತ್ರೆಯ ಬಗ್ಗೆ ಕಿಡಿಕಾರಿದ್ದಾರೆ. ಕಾಂಗ್ರೆಸ್ ಪಾದಯಾತ್ರೆಗೆ ಸಂಭoದಿಸಿದoತೆ ಹೈಕೋರ್ಟ್ ನೀಡಿದ ನಿರ್ದೇಶನವನ್ನು ಸ್ವಾಗತಿಸುತ್ತೇವೆ. ಮತ್ತು ಕೇಂದ್ರ ಹಾಗು ರಾಜ್ಯ ಸರ್ಕಾರಗಳು ಮಾರ್ಗಸೂಚಿಗೆ ಸಂಭoದಿಸಿದoತೆ ಪೂರಕವಾಗಿವೆ. ಆದರೆ ಕಾಂಗ್ರೆಸ್ ಯಾವುದೇ ನಿಯಮವನ್ನು ಪಾಲಿಸಿಲ್ಲ, ಕಾಂಗ್ರೆಸ್ ಬೇಜವಬ್ದಾರಿ ತನವನ್ನು ಜನರೆಂತು ಮರೆತಿಲ್ಲ ಮತ್ತು ಕ್ಷಮಿಸುವುದೂ ಇಲ್ಲ, ಎಂದು ಹೇಳಿದ್ದಾರೆ.
ಜೊತೆಗೆ ಹಬ್ಬಕ್ಕೆ ಶುಭಕೋರಿರುವ ಅವರು ಮಕರ ಸಂಕ್ರಾoತಿ ಹಬ್ಬದ ಶುಭಾಶಯಗಳು, ದೇವರು ಕೊರೊನ ನಡುವೆ ಎಲ್ಲರಿಗೂ ಆರೋಗ್ಯ,ನೆಮ್ಮದಿಯ ಜೀವನವನ್ನು ಕರುಣಿಸಲಿ ಎಂದು ಹೇಳಿದ್ದಾರೆ.




