Thursday, August 28, 2025

Latest Posts

ಒಮ್ಮೆ ಮನಸ್ಸಿಗೆ ನೋವಾದರೆ, ಸಂಬಂಧವೇ ಬೇಡ ಎನ್ನುವರು ಈ ರಾಶಿಯವರು

- Advertisement -

Horoscope: ನಾವು ನಿಮಗೆ ಬೇರೆ ಬೇರೆ ರಾಶಿಗಳ ಗುಣ ಸ್ವಭಾವವನ್ನು ಹಲವು ಬಾರಿ ಹೇಳಿದ್ದೇವೆ. ಅದೇ ರೀತಿ ಇಂದು ನಾವು ಯಾವ ರಾಶಿಯವರಿಗೆ ಮನಸ್ಸಿಗೆ ಬೇಸರವಾದರೆ, ಅವರು ಸಂಬಂಧವೇ ಬೇಡವೆನ್ನುಂತೆ ಇರುತ್ತಾರೆಂದು ಹೇಳಲಿದ್ದೇವೆ.

ವೃಷಭ: ಅತೀ ಹೆಚ್ಚು ತಾಳ್ಮೆಯಿಂದ ಇರುವ ರಾಶಿಗಳಲ್ಲಿ ವೃಷಭ ರಾಶಿಗೆ 1ನೇ ಸ್ಥಾನ. ಆದರೆ ನೀವು ಇವರ ತಾಳ್ಮೆ ಕೆಡಿಸಿದರೆ, ಅಥವಾ ಇವರ ಮನಸ್ಸಿಗೆ ಅತೀ ಹೆಚ್ಚು ನೋವು ಮಾಡಿದರೆ, ಅವರು ನಿಮ್ಮನ್ನೆಂದಿಗೂ ಗೌರವಿಸುವುದಿಲ್ಲ, ಪ್ರೀತಿಸುವುದಿಲ್ಲ.

ಕರ್ಕ: ಕರ್ಕ ರಾಶಿಯವರು ಭಾವನಾತ್ಮಕ ಜೀವಿಗಳು. ಇವರು ಸಂಬಂಧಕ್ಕೆ ಹೆಚ್ಚು ಬೆಲೆ ನೀಡುತ್ತಾರೆ. ಆದರೆ ನೀವು ಅವರ ಮನಸ್ಸಿಗೆ ನೋವು ಮಾಡಿದರೆ, ಅವರು ನಿಮ್ಮನ್ನು ದ್ವೇಷಿಸಲು ಶುರು ಮಾಡುತ್ತಾರೆ. ಮೇಲಿನಿಂದ ನಿಮ್ಮನ್ನು ಗೌರವಿಸಿದರೂ, ಅವರ ಮನಸ್ಸಿನಲ್ಲಿ ನಿಮ್ಮ ಬಗ್ಗೆ ಉತ್ತಮ ಅಭಿಪ್ರಾಯವಿರುವುದಿಲ್ಲ.

ವೃಶ್ಚಿಕ: ವೃಶ್ಚಿಕ ರಾಶಿಯವರಿಗೆ ಕೋಪ ಹೆಚ್ಚು. ಇವರು ಗಂಭೀರ ಸ್ವಭಾವದವರು. ಹಿಡಿದ ಕೆಲಸ ಬಿಡದ ಛಲವಾದಿಗಳು. ಆದರೆ ಇವರ ಗೌರವಕ್ಕೆ ಧಕ್ಕೆಯಾದರೆ, ಆ ಸ್ಥಳದಲ್ಲಿ 1 ನಿಮಿಷ ಇರಲು ಅವರು ಇಚ್ಛಿಸುವುದಿಲ್ಲ. ಅಲ್ಲದೇ, ಇವರು ಸಂಬಂಧಕ್ಕೆ ಹೆಚ್ಚು ಬೆಲೆ ನೀಡುವವರು. ಹಾಗಾಗಿ ಸಂಬಂಧದಲ್‌ಲಿಯೂ ಮನಸ್ತಾಪವಾದರೆ, ಅವರ ಮತ್ತೆ ಮುಂಚಿನ ರೀತಿ ಇರಲು ಇಚ್ಛಿಸುವುದಿಲ್ಲ.

ಧನು: ಧನು ರಾಶಿಯವರು ತುಂಬಾ ಸೂಕ್ಷ್ಮ ಸ್ವಭಾವದವರು. ಅವರು ಯಾರ ಮೇಲೆಯೂ ಭಾರವಾಗಲು ಬಯಸುವವರಲ್ಲ. ಅಂಥ ಮನಸ್ಸಿನವರಿಗೆ ನೀವು ಅವಮಾನಿಸಿದರೆ, ನಿಮ್ಮ ಜತೆಗಿನ ಸಂಬಂಧದ ಬಗ್ಗೆ ಅವರಿಗೆ ಜಿಗುಪ್ಸೆ ಬರುತ್ತದೆ. ಸಂಬಂಧವೇ ಬೇಡವೆನ್ನಿಸಬಹುದು. ಹಾಗಾಗಿ ಧನು ರಾಶಿಯವರಿಗೆ ಎಂದಿಗೂ ಅವಮಾನವಾಗುವಂತೆ ಮಾಡಬೇಡಿ.

- Advertisement -

Latest Posts

Don't Miss