ಹಾಸನ: ಬೇಲೂರು: ಜೆಡಿಎಸ್ ಅಭ್ಯರ್ಥಿ ಕೆ.ಎಸ್.ಲಿಂಗೇಶ್ ಪರ ಮತಯಾಚನೆಗೆ ಕಾರ್ಯಕರ್ತರು ಬಂದಾಗ ಪೇಟೇಹಳ್ಳಿ ಗ್ರಾಮಸ್ಥರು ಘೇರಾವ್ ಹಾಕಿದ್ದಾರೆ.
ಬೇಲೂರು ತಾಲೂಕು ಮಾದೀಹಳ್ಳಿ ಹೋಬಳಿ ಪೇಟೇಹಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಕಳೆದ ಐದು ವರ್ಷಗಳಿಂದ ಗ್ರಾಮಕ್ಕೆ ಬಾರದ ಶಾಸಕರಿಗೆ ಇಂದು ಮತ ಬೇಕೆಂದು ಕೇಳಲು ಬಂದಿದ್ದೀರ ಎಂದು ಗ್ರಾಮದ ಮಹಿಳೆಯರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಸ್ತೆ ಹಾಳಾಗಿದೆ. ಚರಂಡಿಗಳಿಲ್ಲಾ ಆಗಿರುವ ಕೆಲಸ ಕಳಪೆಯದ್ದು. ಕಷ್ಟ ಕೇಳಲು ಬಾರದ ಶಾಸಕರು ನಮಗೆ ಬೇಡ ಎಂದು ಗ್ರಾಮಸ್ಥರ ಆಕ್ರೋಶ ಹೊರಹಾಕಿದ್ದಾರೆ.
ಸಂಪೂರ್ಣ ಜೆಡಿಎಸ್ ಗೆ ಮತ ನೀಡುವ ಊರಲ್ಲಿ ಇಂದು ವೀರೋಧ ವ್ಯಕ್ತ್ಪಡಿಸಿದ್ದು, ನಮ್ಮನ್ನ ತಿರಸ್ಕರಿಸಿದ ಪಕ್ಷ ನಮಗೆ ಬೇಡ ಎಂದು ಇಲ್ಲಿನ ಯುವಕರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ಇಷ್ಟೇ ಅಲ್ಲದೇ, ಗ್ರಾಮಸ್ಥರ ಹಾಗೂ ಮತಯಾಚನೆಗೆ ಬಂದಿದ್ದ ಕಾರ್ಯಕರ್ತರ ನಡುವಿನ ಮಾತಿನ ಚಕಮಕಿಯನ್ನು ವೀಡಿಯೋ ಮಾಡುತ್ತಿದ್ದ ಯೂಟ್ಯೂಬರ್ ಮೊಬೈಲ್ ಕೀಳಲು ಮಹಿಳಾ ಕಾರ್ಯಕರ್ತೆ ಮುಂದಾದ ಘಟನೆಯೂ ನಡೆಯಿತು.
ಗ್ರಾಮದೊಳಗೆ ಓಟು ಕೇಳಲು ಬಾರದಂತೆ ಯುವಕರು, ಮಹಿಳೆಯರು ಘೇರಾವ್ ಹಾಕಿದ್ದು, ಘಟನೆ ನಡೆದು ಕೆಲ ಹೊತ್ತಿನ ಬಳಿಕ, ಗ್ರಾಮದೊಳಗೆ ನಾಲ್ಕೈದು ಕಾರುಗಳಲ್ಲಿ ಬಂದ ಜೆಡಿಎಸ್ ಮುಖಂಡರು, ಗುಂಡಾಗಿರಿ ವರ್ತನೆ ತೋರಿ ಯುವಕರಿಗೆ ಜೀವ ಬೆದರಿಕೆ ಹಾಕಿದ್ದಾರೆ.
ಮಂಡ್ಯ ಲೋಕಸಭೆ ಚುನಾವಣೆಯಲ್ಲಿ ಮ್ಯಾಚ್ ಫಿಕ್ಸಿಂಗ್: ಸಿದ್ದರಾಮಯ್ಯ ಸತ್ಯ ಒಪ್ಪಿಕೊಂಡಿದ್ದಾರೆ ಎಂದ ಹೆಚ್ಡಿಕೆ