Sunday, July 20, 2025

Latest Posts

Political News: ಮದ್ದೂರು ನಗರಸಭೆಗೆ 4ಗ್ರಾ.ಪಂಚಾಯತ್ ಸೇರ್ಪಡೆಗೆ ವಿರೋಧ

- Advertisement -

Political News: ಮದ್ದೂರು ನಗರಸಭೆಗೆ 4 ಗ್ರಾಂಪಂಚಾಯ್ತಿ ಸೇರ್ಪಡೆ ಪ್ರಸ್ತಾಪ ವಿರೋಧಿಸಿ, 4 ಗ್ರಾಮ್ ಪಂಚಾಯ್ತಿ ಹೋರಾಟ ಸಮಿತಿ ವತಿಯಿಂದ ಸೋಮವಾರ ಹೆದ್ದಾರಿ ತಡೆ ನಡೆಸಿ, ಕಚೇರಿ ಎದುರು ಬೃಹತ್ ಪ್ರತಿಭಟನೆ ನಡೆಸಿದರು. ಅಲ್ಲದೇ ಕಚೇರಿಗೆ ಆಗಮಿಸಿ ಗ್ರೇಡ್ 2 ತಹಶೀಲ್ದಾರ್ ಸೋಮಶೇಖರ್ ಅವರಿಗೆ ಮನವಿ ಸಲ್ಲಿಸಿದ್ದಾರೆ.

ಈ ವೇಳೆ ಮಾತನಾಡಿರುವ ರೈತ ನಾಯಕಿ ಸುನಂದಾ ಜಯರಾಮ್, ಗೆಜ್ಜಲಗೆರೆ, ಗ“ರವನಹಳ್ಳಿ, ಚಾಮನಹಳ್ಳಿ, ಸೋಮನಹಳ್ಳಿ, ಗ್ರಾಮ ಪಂಚಾಯ್ತಿಗಳನ್ನು ನಗರ ಸಭೆಗೆ ಸೇರಿಸುವುದರಿಂದ ಹಲವು ಅನಾನುಕೂಲಗಳಾಗುತ್ತದೆ. ವಿದ್ಯಾರ್ಥಿಗಳಿಗೆ ಗ್ರಾಮೀಣ ಕೃಪಾಂಕ ಸಿಗುವುದಿಲ್ಲ. ನೀರಿನ ತೆರಿಗೆ, ಮನೆಯ ಕಂದಾಯ ಹೆಚ್ಚುತ್ತದೆ. ವಸತಿ ಯೋಜನೆ ಕಡಿಮೆಯಾಗುತ್ತದೆ ಎಂದರು.

ನರೇಗಾ ಯೋಜನೆ ಸೌಲಭ್ಯ ಸಿಗುವುದಿಲ್ಲ. ಸ್ವಚ್ಛತೆ ವಿಳಂಬವಾಗುತ್ತದೆ. ಕನಿಷ್ಟ ವೇತನ ಮತ್ತು ಉದ್ಯೋಗಗಳು ಸಿಗೋದಿಲ್ಲ. ಇ-ಖಾತೆ ಮತ್ತು ಅಭಿವೃದ್ಧಿ ತೆರಿಗೆ ದುಪ್ಪಟ್ಟಾಗುತ್ತದೆ. ಸಾರ್ವಜನಿಕ ಆಸ್ತಿ ನೋಂದಣಿ, ವಿಭಾಗ ಪತ್ರ ಖರೀದಿ ಶುಲ್ಕಗಳು ಹೆಚ್ಚಾಗುತ್ತದೆ ಎಂದರು.

ಗ್ರಾಮಾಂತರ ಪ್ರದೇಶದಲ್ಲಿ ಬಡ ರೈತರು, ಕೃಷಿ ಕೂಲಿ ಕಾರ್ಮಿಕರು ವಾಸಿಸುತ್ತಿದ್ದು, ನಗರಸಭೆಯಾದರೆ ಇವರು ಅತೀ ಹೆಚ್ಚು ತೆರಿಗೆ ಕಟ್ಟಲು ಸಾಧ್ಯವಿಲ್ಲ. ಜತೆಗೆ ಸ್ವಸಹಾಯ ಸಂಘಗಳು, ಮೈಕ್ರೋ ಫೈನಾನ್ಸ್‌ ಸಂಘಗಳಿಂದ ಸಾಲ ಪಡೆದು ಕಟ್ಟಲಾಗದೇ ಕೆಲವರು ಗ್ರಾಮ ಬಿಟ್ಟಿದ್ದಾರೆ. ಹಾಗಾಗಿ ಗ್ರಾಮಗಳನ್ನು ಗ್ರಾಮಗಳಾಗಿ ಇರಲು ಬಿಟ್ಟು, ನಗರಸಭೆಗೆ ಸೇರಿಸುವ ಆಲೋಚನೆ ಬಿಡಿ. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಉಗ್ರಹೋರಾಟ ನಡೆಸುತ್ತೇವೆ ಎಂದು ಎಚ್ಚರಿಸಿದ್ದಾರೆ.

ಈ ವೇಳೆ ಮುಖಂಡರಾದ ಗ“ರವನಹಳ್ಳಿ ಪ್ರಸನ್ನ, ಮಹೇಶ್, ಸೋಮನಹಳ್ಳಿ ಅನ್ನದಾನಿ, ಸತೀಶ್, ಜಿ.ಎ.ಶಂಕರ್, ಮೋಹನ್, ವೀರಪ್ಪ, ರಾಮಣ್ಣ, ಸಿದ್ಧರಾಜು, ಜಿ.ಸಿ.ಮಹಿಂದ್ರ, ನವೀನ್, ಅಂಬರೀಷ್, ಸುರೇಶ್ ಹಾಜರಿದ್ದರು.

- Advertisement -

Latest Posts

Don't Miss